ರಾಜಕೀಯ

ಭಿನ್ನಮತೀಯರ ಶಮನಕ್ಕೆ ಕೊನೆಯ ಅಸ್ರ: ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ

Sumana Upadhyaya
ಬೆಂಗಳೂರು: ಭಿನ್ನಮತೀಯರನ್ನು ಶಮನಗೊಳಿಸಿ ಸರ್ಕಾರವನ್ನು ಉಳಿಸಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಸಚಿವ ಸಂಪುಟವನ್ನು ವಿಸ್ತರಿಸಲು ಅದರ ನಾಯಕರು ನಿರ್ಧರಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲಿನ ನಡುವೆ ಭಿನ್ನಮತೀಯರ ನಿಲುವಿನಿಂದ ಬಚಾವಾಗಿ ಮೈತ್ರಿ ಸರ್ಕಾರವನ್ನು ಉಳಿಸಿ ಅದನ್ನು ಸುಗಮವಾಗಿ ಮುನ್ನಡೆಸುವ ಒತ್ತಡ ಕಾಂಗ್ರೆಸ್-ಜೆಡಿಎಸ್ ಗೆ ಇಂದು ಇರುವ ಸಂದರ್ಭದಲ್ಲಿ ಕಾಂಗ್ರೆಸ್ ನ ಶಾಸಕರಾದ ಕೆ ಸುಧಾಕರ್ ಮತ್ತು ರಮೇಶ್ ಜಾರಕಿಹೊಳಿಯಂತವರು ಕಳೆದ ಭಾನುವಾರ ಎಸ್ ಎಂ ಕೃಷ್ಣ ನಿವಾಸದಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡಿದ್ದರು. ಇದು ಇನ್ನಷ್ಟು ಆತಂಕವನ್ನು ಮೈತ್ರಿಕೂಟದ ನಾಯಕರಿಗೆ ತಂದೊಡ್ಡಿದೆ. ಇದರಿಂದಾಗಿ ಕೂಡಲೇ ರಾಜ್ಯ ಸಂಪುಟದಲ್ಲಿ ಖಾಲಿ ಇರುವ ಮೂರು ಸಚಿವ ಸ್ಥಾನಗಳನ್ನು ತುಂಬಲು ನಿರ್ಧರಿಸಿದ್ದಾರೆ.
SCROLL FOR NEXT