ರಾಜಕೀಯ

ಆಡಿಯೋ ಬಗ್ಗೆ ನೋಬಲ್ ಪ್ರೈಸ್ ಕೊಡಬೇಕು ಅಂದ್ರೆ ಸಿದ್ದರಾಮಯ್ಯಗೆ ಕೊಡಬೇಕು: ಕೆ.ಎಸ್. ಈಶ್ವರಪ್ಪ

Raghavendra Adiga

ಕೊಪ್ಪಳ: ಯಡಿಯೂರಪ್ಪ ಅವರ ಆಡಿಯೋ ಕುರಿತಂತೆ ನೊಬೆಲ್ ಬಹುಮಾನವೇನಾದರೂ ಕೊಡುವುದಾದರೆ ಅದನ್ನು ಸಿದ್ದರಾಮಯ್ಯಗೆ ಕೊಡಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಅನರ್ಹ ಶಾಸಕರಿಂದಲೇ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಬಂದಿದೆ. ಅವರಿಂದಾಗಿಯೇ ನಾನಿಂದು ಮತ್ರಿಯಾಗಿದ್ದೇನೆ ಎಂದು.ಈಶ್ವರಪ್ಪ ಹೇಳಿದ್ದಾರೆ.

ಕೊಪ್ಪಳದಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಈಶ್ವರಪ್ಪ "ಅನರ್ಹ ಶಾಸಕರಿಂದ ಇಂದು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿದ್ದು ಅವರನ್ನು ನಾವು ಕೈಬಿಡುವ ಪ್ರಶ್ನೆಯೇ ಇಲ್ಲ" ಎಂದಿದ್ದಾರೆ.

ಸಿದ್ದರಾಮಯ್ಯ "ಅವನೇ ಕಳ್ಳ ಪರರನ್ನ ನಂಬ" ಎನ್ನುವಂತೆ ಇದ್ದಾರೆ.ಬ್ಲಾಕ್ ಮೇಲ್ ಮಾಡಿ ವಿರೋಧ ಪಕ್ಷದ ನಾಯಕರಾಗಿ ಬಂದಿದ್ದಾರೆ ಎಂದು ಟೀಕಿಸಿದರು.

ವರದಿ: ಬಸವರಾಜ ಕರುಗಲ್

SCROLL FOR NEXT