ರಾಜಕೀಯ

ಅನರ್ಹ ಶಾಸಕ ಎಂಟಿಬಿ ನಾಗರಾಜ್ ಸುಳ್ಳುಗಾರ: ಬಿ.ಎನ್.ಬಚ್ಚೇಗೌಡ ತಿರುಗೇಟು

Vishwanath S

ಹೊಸಕೋಟೆ: ಬಿಎಸ್ ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇ ಗೌಡರು ಒಪ್ಪಿಗೆ ಪಡೆದುಕೊಂಡ ನಂತರವೇ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.

ಬಿಜೆಪಿ ಸೇರಲು ಅಂದು ಒಪ್ಪಿಗೆ ನೀಡಿದ್ದ ಬಚ್ಚೇಗೌಡರು ಈಗ ಉಲ್ಟಾ ಹೊಡೆಯುತ್ತಿದ್ದಾರೆ ಎಂದು ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕಿಡಿಕಾರಿದ್ಧಾರೆ.

ಹೊಸಕೋಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ದ ಅವರು, ತಾನು ಪಕ್ಷಕ್ಕೆ ರಾಜೀನಾ ಮೆ ನೀಡುವ ಮುನ್ನ ಸಂಸದ ಬಿ.ಎನ್.ಬಚ್ಚೇಗೌಡ ಒಪ್ಪಿಗೆ ಪಡೆದುಕೊಂಡಿ ದ್ದೇನೆ ಆದರೆ ಈಗ ತದ್ವಿರುದ್ಧವಾಗಿ ಮಾತನಾಡುತ್ತಿ ದ್ದಾರೆ.ಶರತ್ ಬಚ್ಚೇಗೌಡರು ಕಾಂಗ್ರೆಸ್ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ.ತನ್ನನ್ನು ಸೋಲಿಸಲು ಒಳ ಸಂಚು ಮಾಡಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

SCROLL FOR NEXT