ಸಂಸದ ಕರಡಿ ಸಂಗಣ್ಣ 
ರಾಜಕೀಯ

ಕಾಂಗ್ರೆಸ್ ನ ತಂಗಡಗಿ, ರಾಯರೆಡ್ಡಿ ಮಿಂಚಿಂಗ್ ಸ್ಟಾರ್ಸ್: ಸಂಸದ ಕರಡಿ ಸಂಗಣ್ಣ ಆರೋಪ

ಮಾಜಿ ಸಚಿವ ಶಿವರಾಜ್ ತಂಗಡಗಿ, ಬಸವರಾಜ ರಾಯರೆಡ್ಡಿ ಮಿಂಚಿಂಗ್ ಸ್ಟಾರ್ಸ್. ಸದಾ ಬೆಂಗಳೂರಿನಲ್ಲೇ ಇರುವ ಇವರು ಅಪರೂಪಕ್ಕೆ ಕ್ಷೇತ್ರದ ಕಡೆಗೆ ಮುಖ ಮಾಡುತ್ತಾರೆ. ಆದರೂ ಅವರು ಮಾಡಿ ದಬ್ಬಾಕಿದ್ದು ಏನು ಇಲ್ಲ ಎಂದು ಬಿಜೆಪಿ ಸಂಸದ ಕರಡಿ ಸಂಗಣ್ಣ ಆರೋಪಿಸಿದ್ದಾರೆ.

ಕೊಪ್ಪಳ: ಮಾಜಿ ಸಚಿವ ಶಿವರಾಜ್ ತಂಗಡಗಿ, ಬಸವರಾಜ ರಾಯರೆಡ್ಡಿ ಮಿಂಚಿಂಗ್ ಸ್ಟಾರ್ಸ್. ಸದಾ ಬೆಂಗಳೂರಿನಲ್ಲೇ ಇರುವ ಇವರು ಅಪರೂಪಕ್ಕೆ ಕ್ಷೇತ್ರದ ಕಡೆಗೆ ಮುಖ ಮಾಡುತ್ತಾರೆ. ಆದರೂ ಅವರು ಮಾಡಿ ದಬ್ಬಾಕಿದ್ದು ಏನು ಇಲ್ಲ ಎಂದು ಬಿಜೆಪಿ ಸಂಸದ ಕರಡಿ ಸಂಗಣ್ಣ ಆರೋಪಿಸಿದ್ದಾರೆ. 

ಕ್ಷೇತ್ರಕ್ಕೆ ಬಂದರೂ ಜನರ ಸಮಸ್ಯೆ ಕೇಳೋದನ್ನ ಬಿಟ್ಟು ಮಾಧ್ಯಮದವರ ಎದುರು ಅಡ್ಡಾದಿಡ್ಡಿ ಮಾತಾಡಿ ಮಿಂಚುತ್ತಾರೆ. ಬಾಯಿಗೆ ಬಂದಂತೆ ಮಾತನಾಡಿ ಮಾಧ್ಯಮದಲ್ಲಿ ಪ್ರಚಾರ ಗಿಟ್ಟಿಸೊ ಮಿಂಚಿಂಗ್ ಸ್ಟಾರ್ಸ್ ಇವರು ಎಂದು ನವಲಿಯಿಂದ ಸಂಸದ ಕರಡಿ ಸಂಗಣ್ಣ ಹೇಳಿದ್ದಾರೆ. 

ನವಲಿಯಿಂದ ಕಾರಟಗಿಗೆ ಮಹಾತ್ಮ ಗಾಂಧಿ ಸಂಕಲ್ಪ ಪಾದಯಾತ್ರೆ ವೇಳೆ ಸಂಗಣ್ಣ ಈ ಭಾಗದಲ್ಲಿ ಸಮಾಂತರ ಜಲಾಶಯ ನಿರ್ಮಾಣ ಅಗತ್ಯವಿದೆ. ಅದಕ್ಕಿರುವ ಸಮಸ್ಯೆ ತಿಳಿಯಲು ಜನಾಭಿಪ್ರಾಯ ಸಂಗ್ರಹಿಸಲು ಈ ಸಂಕಲ್ಪ ಯಾತ್ರೆ ಕೈಗೊಳ್ಳಲಾಗಿದೆ ಎಂದರು.

ತಂಗಡಗಿ ಸೋತಿದ್ದಾರೆ. ಮಾಡೋಕೆ ಬೇರೆ ಕೆಲಸ ಇಲ್ಲ. ಅದಕ್ಕೆ ಆಗಾಗ್ಗೆ ಮಾಧ್ಯಮ ಎದುರು ಶೋ ಮಾಡುತ್ತಾರೆ ಎಂದು ಸಂಗಣ್ಣ ಕರಡಿ ಆರೋಪಿಸಿದ್ದಾರೆ. 

ವರದಿ: ಬಸವರಾಜ್ ಕರುಗಲ್

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಸಂಘರ್ಷಕ್ಕೆ ಮಾನವೀಯತೆ ಬಲಿಯಾಗಬಾರದು': ಗಾಜಾ ಶಾಂತಿ ಯೋಜನೆಗೆ ಪ್ರಧಾನಿ ಮೋದಿ ಬೆಂಬಲ

T20 World Cup 2026: ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾಕ್ಕೆ ಭರ್ಜರಿ ಜಯ; ಈ ಗೆಲುವಿಗಾಗಿ ಪರಿತಪಿಸುತ್ತಿತ್ತು ಭಾರತ!

ಕನ್ನಡ ಸಿನಿಮಾ ನಿರ್ದೇಶಕನ ಅಪಹರಿಸಿ, ಹಲ್ಲೆ: ನಟಿ ಸೇರಿದಂತೆ 11 ಜನರ ಬಂಧನ

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

ಉರ್ದು ಭಾಷೆಯಲ್ಲಿ ಸರ್ಕಾರದ ಜಾಹೀರಾತು: ಸಿಎಂ ಸಿದ್ದರಾಮಯ್ಯ ಸಮರ್ಥನೆ ಹೇಗಿದೆ ಗೊತ್ತಾ?

SCROLL FOR NEXT