ರಾಜಕೀಯ

ಸಿ.ಪಿ.ಯೋಗೇಶ್ವರ್ ನಮ್ಮ ಮನೆ ಬಾಗಿಲು ಕಾಯುತ್ತಿದ್ದರು: ಡಿ.ಕೆ.ಶಿವಕುಮಾರ್

Srinivasamurthy VN

ಬೆಂಗಳೂರು: ಮಾಜಿ ಸಚಿವ ಬಿಜೆಪಿಯ ಸಿ.ಪಿ.ಯೋಗೇಶ್ವರ್ ನನ್ನ ಮನೆ ಬಾಗಿಲ ಮುಂದೆ ಕಾಯುತ್ತಿದ್ದವರು. ಅವರ ರಾಜಕೀಯ ಆರಂಭವಾಗಿದ್ದೇ ನನ್ನ ಮನೆಯಿಂದ" ಇದು ಕಾಂಗ್ರೆಸ್ ನಾಯಕ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಏಕವಚನದಲ್ಲೇ ಯೋಗೇಶ್ವರ್ ವಿರುದ್ಧ ಹರಿಹಾಯ್ದಿದ್ದಾರೆ.

ಸಂಪುಟದಲ್ಲಿ ಸಿ.ಪಿ.ಯೋಗೇಶ್ವರ್‌ಗೂ ಸ್ಥಾನಮಾನ ವಿಚಾರವಾಗಿ ಕಿಡಿಕಾರಿದ ಶಿವಕುಮಾರ್, ನನ್ನ ಬಗ್ಗೆ ಹಗುರವಾಗಿ ಮಾತನಾಡುವ ಯೋಗೇಶ್ವರ್ ಬಿಜೆಪಿಗೆ ಸದನದಲ್ಲಿ ದಾಖಲೆ ಸಹಿತ ಉತ್ತರಿಸಿ ತಿರುಗೇಟು ನೀಡುತ್ತೇನೆ ಎಂದರು.

ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ನನ್ನ ಶುಭಾಕಾಂಕ್ಷಿ ಎಂದು ನಾನು ಹೇಳುವುದಿಲ್ಲವಾದರೂ ಆತ ನನ್ನ ಮನೆ ಮುಂದೆ ನಿಂತೇ ರಾಜಕೀಯ ಕಲಿತ ಎಂದು ಸೂಚ್ಯವಾಗಿ ಹೇಳಿದರು.

SCROLL FOR NEXT