ಆನಂದ್ ಸಿಂಗ್ 
ರಾಜಕೀಯ

ಆರೋಪಗಳಿದ್ದ ತಮ್ಮನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದಾದರೂ ಏಕೆ: ಆನಂದ್ ಸಿಂಗ್

ತಮ್ಮ  ಮೇಲಿನ ಆರೋಪಗಳು ಇಂದು ನಿನ್ನೆಯದಲ್ಲ. ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋದಾಗಲೂ  ಇದ್ದವು. ಆರೋಪಗಳನ್ನು ಹೊತ್ತ ಕಾಂಗ್ರೆಸ್ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತಾದರೂ ಏಕೆ ? ಎಂದು ಅರಣ್ಯ  ಸಚಿವ ಆನಂದ್ ಸಿಂಗ್ ಕಾಂಗ್ರೆಸಿಗೆ ತಿರುಗೇಟು ನೀಡಿದ್ದಾರೆ

ಬೆಂಗಳೂರು: ತಮ್ಮ  ಮೇಲಿನ ಆರೋಪಗಳು ಇಂದು ನಿನ್ನೆಯದಲ್ಲ. ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಹೋದಾಗಲೂ  ಇದ್ದವು. ಆರೋಪಗಳನ್ನು ಹೊತ್ತ ಕಾಂಗ್ರೆಸ್ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಂಡಿತ್ತಾದರೂ ಏಕೆ ? ಎಂದು ಅರಣ್ಯ  ಸಚಿವ ಆನಂದ್ ಸಿಂಗ್ ಕಾಂಗ್ರೆಸಿಗೆ ತಿರುಗೇಟು ನೀಡಿದ್ದಾರೆ

ಸುದ್ದಿಗಾರರೊಂದಿಗೆ  ವಿಧಾನಸೌಧದಲ್ಲಿ ಮಾತನಾಡಿದ ಅವರು, ತಮ್ಮ ಮೇಲೆ ಆರೋಪಗಳಿವೆ ಎಂದು ಈಗ ವಿರೋಧಿಸುತ್ತಿರುವ  ಕಾಂಗ್ರೆಸ್ ನಾಯಕರು ಹಿಂದೆ ತಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ  ಎನ್ನಬೇಕಿತ್ತು ಎಂದು ಕುಟುಕಿದರು.

ತಮ್ಮ ಮೇಲಿರುವ ಆರೋಪಗಳು ಸಾಬೀತಾಗಿಲ್ಲ. ಅನೇಕ ಪ್ರಕರಣಗಳು ಖುಲಾಸೆ ಆಗಿವೆ ಎಂದು ಆನಂದ್ ಸಿಂಗ್ ಸಮಜಾಯಿಷಿ ನೀಡಿದರು.

ಕೃಷಿ  ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ನಾನು ಸವಾಲನ್ನು ಎದುರಿಸಿ ಗೆಲುವು  ಸಾಧಿಸಿದ್ದೇನೆ. ಕಾಂಗ್ರೆಸ್ ನಾಯಕರು ನನ್ನನ್ನು ಅನರ್ಹರನ್ನಾಗಿ ಮಾಡಿದ್ದರು.ಈಗ ಚುನಾವಣೆ  ಎದುರಿಸಿ ಜನಾಭಿಪ್ರಾಯ ಪಡೆದು ಅರ್ಹನಾಗಿ ಸಚಿವನಾಗಿ ವಿಧಾನಸಭೆ  ಪ್ರವೇಶಿಸುತ್ತಿದ್ದೇನೆ.ಸವಾಲು ಗೆದ್ದ  ಖುಷಿಯಾಗುತ್ತಿದೆ. ಪ್ರತಿಪಕ್ಷದವರನ್ನು ಎದುರಿಸಲು ಸನ್ನದ್ಧವಾಗಿದ್ದೇವೆ. ಅದಕ್ಕೆ ಯಾವ ತಯಾರಿಯೂ ಅಗತ್ಯವಿಲ್ಲ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರೀ ಮಳೆ: ಉಕ್ಕಿ ಹರಿಯುತ್ತಿರುವ ಪ್ರಮುಖ ನದಿಗಳು, ಬಿಹಾರದಲ್ಲಿ ಹೈ ಅಲರ್ಟ್

AEE ನೇಮಕಾತಿಯಲ್ಲಿ ಅಕ್ರಮ: ಪ್ರಿಯಾಂಕ್ ಖರ್ಗೆಗೆ HDK ಸಾಲು ಸಾಲು ಪ್ರಶ್ನೆ; ಇದೇನಾ 'ದೇಶವೇ ಅಲ್ಲೋಲ ಕಲ್ಲೋಲ ಆಗೋ' ವಿಷಯ? Video

'aashiq banaya': 'ಅಕ್ಷರಶಃ ನಮ್ಮಿಬ್ಬರ ಕೆಮಿಸ್ಟ್ರಿ ಅಣ್ಣ-ತಂಗಿಯಂತಿತ್ತು': ನಟ ಇಮ್ರಾನ್ ಹಶ್ಮಿ ಕುರಿತು ಅಚ್ಚರಿ ಹೇಳಿಕೆ ಕೊಟ್ಟ ನಟಿ Tanushree Dutta

ರಾಮ ಮಂದಿರ ಟ್ರಸ್ಟ್‌ಗೆ ಮೊದಲ CEO ನೇಮಕ; 'ಆಪರೇಷನ್ ಸಿಂಧೂರ್'​​ನಲ್ಲಿ ಭಾಗಿಯಾಗಿದ್ದ ಜಿತೇಂದ್ರ ಮಿಶ್ರಾ ಹೆಸರು ಘೋಷಣೆ!

'ರಾಯನ ದೊಡ್ಡ ಶತ್ರು ಟಿಕೆಟ್ ಅಲ್ಲ'.. ‘Toxic’ ಕೇವಲ ಸಿನಿಮಾ ಅಲ್ಲ…'; ನಟ ಯಶ್ ಚಿತ್ರದ ಕುರಿತು ನಟಿ Deepika Das ಪೋಸ್ಟ್ ವೈರಲ್!