ರಾಜಕೀಯ

ಕೆಪಿಸಿಸಿ ಕಾರ್ಯಾಧ್ಯಕ್ಷ ಸ್ಥಾನಕ್ಕೆ ಜಮೀರ್ ಅಹ್ಮದ್ ಕೂರಿಸಲು ತಂತ್ರ

Nagaraja AB

ಬೆಂಗಳೂರು: ಕೆಪಿಸಿಸಿ‌ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಹೈಕಮಾಂಡ್ ಒಂದು  ನಿರ್ಣಯಕ್ಕೆ ಬಂದಿದೆ ಎಂದು ಸ್ಪಷ್ಟವಾಗುತ್ತಿರುವ ಬೆನ್ನಲ್ಲೆ ಕೆಪಿಸಿಸಿ ಕಾರ್ಯಾಧ್ಯಕ್ಷ  ಹುದ್ದೆಯನ್ನು ಮುಸ್ಲಿಂ ಸಮುದಾಯಕ್ಕೆ ನೀಡಬೇಕೆಂಬ ಬೇಡಿಕೆ ಮುನ್ನಲೆಗೆ ಬಂದಿದೆ.

ಈ ಹುದ್ದೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಪ್ತ ಜಮೀರ್ ಅಹ್ಮದ್  ಅವರನ್ನು ನೇಮಿಸುವಂತೆ ಒತ್ತಡ ಕೇಳಿಬಂದಿದೆ. ಆದರೆ ಇದಕ್ಕೆ ಮೂಲ ಕಾಂಗ್ರೆಸಿಗರ ಬಣದ  ಮುಸ್ಲಿಂ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಬೆಂಗಳೂರು ವಿಭಾಗದಲ್ಲಿ ಮೂವರು  ಮುಸ್ಲಿಂ ಶಾಸಕರು,‌ ಇಬ್ಬರು ಮೇಲ್ಮನೆ‌‌ ಸದಸ್ಯರು ಹಾಗೂ ಕೆಪಿಸಿಸಿ ಅಲ್ಪ ಸಂಖ್ಯಾತ  ಘಟಕದ ಅಧ್ಯಕ್ಷ ಸ್ಥಾನ ನೀಡಲಾಗಿದೆ

 ಕೆಪಿಸಿಸಿ ಅಧ್ಯಕ್ಷ‌ ಸ್ಥಾನಕ್ಕೆ  ಡಿ.ಕೆ.ಶಿವಕುಮಾರ್ ಅಖೈರುಗೊಂಡಲ್ಲಿ ಅವರ ವರ್ಚಸನ್ನು ಕಡಿಮೆ ಮಾಡಲೆಂದು ಪಕ್ಷ‌ ಸಂಘಟನೆಯ  ನೆಪದಲ್ಲಿ ವಿಭಾಗವಾರು ಕಾರ್ಯಾಧ್ಯಕ್ಷರನ್ನು ನೇಮಿಸಬೇಕೆಂದು ಸಿದ್ದರಾಮಯ್ಯ  ಹೈಕಮಾಂಡ್‌ಗೆ ಸಲಹೆ ನೀಡಿದ್ದಾರೆ.

 ವಿಭಾಗವಾರು ಕಾರ್ಯಾಧ್ಯಕ್ಷರ ಸ್ಥಾನದಲ್ಲಿ ತಮ್ಮ ಆಪ್ತರನ್ನು ನೇಮಿಸಿಕೊಳ್ಳುವ ಯೋಜನೆಯೂ ಸಿದ್ದರಾಮಯ್ಯದ್ದಾಗಿದೆ. ಆದರೆ ವಿಭಾಗವಾರು  ನೇಮಕಕ್ಕೆ ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ‌.

SCROLL FOR NEXT