ರಾಜಕೀಯ

ಡಿಕೆ ಶಿವಕುಮಾರ್ ಜೊತೆಗಿನ ಸ್ನೇಹವೇ ಬೇರೆ... ರಾಜಕಾರಣವೇ ಬೇರೆ: ಸಚಿವ ಎಸ್‌.ಟಿ. ಸೋಮಶೇಖರ್

Srinivasamurthy VN

ಬೆಂಗಳೂರು: ಡಿಕೆ ಶಿವಕುಮಾರ್ ಜೊತೆಗಿನ ಸ್ನೇಹವೇ ಬೇರೆ... ರಾಜಕಾರಣವೇ ಬೇರೆ ಎಂದು ಸಚಿವ ಎಸ್‌.ಟಿ ಸೋಮಶೇಖರ್ ಹೇಳಿದ್ದಾರೆ.

ಮಂಗಳೂರಿನ ಬಿಜೆಪಿ ಜಿಲ್ಲಾ ಕಚೇರಿಗೆ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಎಸ್‌ಟಿ ಸೋಮಶೇಖರ್ ಅವರು, ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿರುವುದರಿಂದ ನಮ್ಮ ಬಿಜೆಪಿಗೇನೂ ಸಮಸ್ಯೆ ಇಲ್ಲ. ಡಿ.ಕೆ.ಶಿವಕುಮಾರ್ ಅವರ ಜೊತೆಗಿನ ಸ್ನೇಹವೇ ಬೇರೆ ರಾಜಕಾರಣ ಬೇರೆ ಎಂದು ಹೇಳಿದರು.

ಬಿಜೆಪಿ ಸಂಘಟನೆಯೇ ಬೇರೆ. ನಮ್ಮ ಪಕ್ಷದ ಸಂಘಟನೆ ತುಂಬಾ ಚೆನ್ನಾಗಿ ಇದೆ. ಇಲ್ಲಿ ವ್ಯವಸ್ಥಿತವಾಗಿ ಸಂಘಟನೆ ಇದ್ದು, ಕಾಂಗ್ರೆಸ್ ನಲ್ಲಿ ಸಂಘಟನಾ ಕೌಶಲ್ಯ ಇಲ್ಲ. ಹಾಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಸಂಘಟನೆ ಮಧ್ಯೆ ಅಜಗಜಾಂತರ ವ್ಯತ್ಯಾಸ ಇದೆ ಎಂದು ಹೇಳಿದರು.

SCROLL FOR NEXT