ಯೋಗೇಶ್ವರ್ 
ರಾಜಕೀಯ

'ನನ್ನ ಸರ್ಕಾರ ಕೆಡವಿದ ಹಾಗೆ ಯಡಿಯೂರಪ್ಪ ಸರ್ಕಾರ ಬೀಳಿಸಲು ಯೋಗೇಶ್ವರ್ ಸ್ಕೆಚ್'

ಸಿ.ಪಿ. ಯೋಗೇಶ್ವರ್​ ಬಿಜೆಪಿ ಸರ್ಕಾರ ಕೆಡವಲು ಪ್ಲ್ಯಾನ್ ಮಾಡುತ್ತಿದ್ದಾರೆ. ಉದ್ಯಮಿ ಉದಯ್ ಗೌಡನನ್ನು ಮುಂದಿಟ್ಟುಕೊಂಡು ಈ ಕುರಿತಾಗಿ ಪ್ಲ್ಯಾನ್ ನಡೆಯುತ್ತಿದೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ರಾಮನಗರ: ಸಿ.ಪಿ. ಯೋಗೇಶ್ವರ್​ ಬಿಜೆಪಿ ಸರ್ಕಾರ ಕೆಡವಲು ಪ್ಲ್ಯಾನ್ ಮಾಡುತ್ತಿದ್ದಾರೆ. ಉದ್ಯಮಿ ಉದಯ್ ಗೌಡನನ್ನು ಮುಂದಿಟ್ಟುಕೊಂಡು ಈ ಕುರಿತಾಗಿ ಪ್ಲ್ಯಾನ್ ನಡೆಯುತ್ತಿದೆ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.

ಸ್ವಕ್ಷೇತ್ರ ಚನ್ನಪಟ್ಟಣದ ದೊಡ್ಡಮಳೂರಿನ ಬಮೂಲ್​ ಉತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು , ಸಿಪಿ ಯೋಗೇಶ್ವರ್ ಮತ್ತು  ಉದಯ್​ಗೌಡ ಬಿಎಸ್ ವೈ ಸರ್ಕಾರ ಬೀಳಿಸಲು ತಂತ್ರ ರೂಪಿಸುತ್ತಿದ್ದಾರೆ ಎಂದು ಹೇಳಿದ್ದಾರೆ. 

ಉದಯ್ ಗೌಡ  ಬೆಂಗಳೂರಿನಲ್ಲಿ ಇಸ್ಪೀಟ್ ದಂಧೆ ನಡೆಸುತ್ತಿದ್ದಾನೆ. ನನ್ನ ಸರ್ಕಾರದಲ್ಲಿ ಅದಕ್ಕೆಲ್ಲಾ ಕಡಿವಾಣ ಹಾಕಿದ್ದೆ. ಹಾಗಾಗಿ ಇವರೆಲ್ಲಾ ಸೇರಿ ಹಣ ಹಾಕಿ ನನ್ನ ಸರ್ಕಾರ ಬೀಳಿಸಿದರು. ಈಗ ಈ ಕ್ಷೇತ್ರದ ಮಾಜಿ ಶಾಸಕ (ಸಿ.ಪಿ.ಯೋಗೇಶ್ವರ್​​​)ನ ಜೊತೆಗೆ ಸೇರಿ ಬಿಜೆಪಿ ಸರ್ಕಾರ ತೆಗೆಯಲು ಹೊರಟಿದ್ದಾರೆ ಎಂದು ಎಚ್​ಡಿಕೆ ಗಂಭೀರ ಆರೋಪ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT