ಶರತ್ ಬಚ್ಚೇಗೌಡ 
ರಾಜಕೀಯ

ತಾಯಿಯ ಮುಗುಳುನಗೆ, ಮುದ್ದೆ ಊಟ: ಸದನದಲ್ಲಿ ಭಾವುಕರಾದ ಶರತ್ ಬಚ್ಚೇಗೌಡ!

ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ ನೂತನ ಶಾಸಕ ಶರತ್ ಬಚ್ಚೇಗೌಡ ಅವರು ತಾಯಿಯ ಮುಗುಳುನಗೆ ನೆನೆದು ಭಾವುಕರಾದ ಪ್ರಸಂಗ ವಿಧಾನಸಭೆಯಲ್ಲಿ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು.

ಬೆಂಗಳೂರು: ಸಂವಿಧಾನ ಕುರಿತ ವಿಶೇಷ ಚರ್ಚೆಯಲ್ಲಿ ಭಾಗವಹಿಸಿದ ನೂತನ ಶಾಸಕ ಶರತ್ ಬಚ್ಚೇಗೌಡ ಅವರು ತಾಯಿಯ ಮುಗುಳುನಗೆ ನೆನೆದು ಭಾವುಕರಾದ ಪ್ರಸಂಗ ವಿಧಾನಸಭೆಯಲ್ಲಿ ವಿಶೇಷವಾಗಿ ಎಲ್ಲರ ಗಮನ ಸೆಳೆಯಿತು. 

ಸಂವಿಧಾನದಿಂದ ಮಹಿಳಾ ದಿನಾಚರಣೆ ಕಡೆಗೆ ವಾಲಿದ ಅವರು, ಮಹಿಳೆಯರು ಇಂದು ಎಲ್ಲಾ ರಂಗದಲ್ಲೂ ಮುಂದೆ ಬರುತ್ತಿದ್ದಾರೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಮಹಿಳೆಯ ಪರಿಶ್ರಮ ಇದೆ ಎಂಬುದು ಹಳೆಯ ಮಾತಾಯ್ತು. ಆದರೆ ಈಗ ಪ್ರತಿಯೊಬ್ಬ ಯಶಸ್ವಿ ಮಹಿಳೆಯರ ಹಿಂದೆ ಪುರುಷನ ಪರಿಶ್ರಮವಿದೆ ಎಂದೂ ತಮ್ಮದೇ ಧಾಟಿಯಲ್ಲಿ ಮಾತನಾಡಿದರು.

ಮೊನ್ನೆ ಮನೆಯಲ್ಲಿ ತಾಯಿ ಊಟ ಬಡಿಸುವಾಗ ಮುಗುಳುನಗೆ ಬೀರುತ್ತಿದ್ದರು. ನಾನು ಏಕೆ ಈ ನಗು ಎಂದು ಪ್ರಶ್ನೆ ಮಾಡಿದೆ. ಅದಕ್ಕೆ ಅವರು, 40 ವರ್ಷದ ಹಿಂದೆ ಮಾವನವರು ವಿಧಾನಸಭೆಯಿಂದ ಮನೆಗೆ ಬಂದಾಗ ಅದೆ ರೀತಿ 25 ವರ್ಷದ ಹಿಂದೆ ನಿನ್ನ ತಂದೆ, ಪತಿ  ಬಚ್ಚೇಗೌಡರು ವಿಧಾನಸಭೆಯಿಂದ ಮನೆಗೆ ಬಂದಾಗ ಮುದ್ದೆ ಊಟ ಉಪ್ಪುಸಾರು ಬಡಿಸಿದ್ದೆ. ಈಗ ನೀನು ಕೂಡ ವಿಧಾನಸಭೆಯಿಂದ ಬಂದಿದ್ದೀಯ, ನಿನಗೂ ಉಪ್ಪುಸಾರು ಮುದ್ದೆ ಊಟ ಬಡಿಸುತ್ತಿದ್ದೇನೆ ಎಂದು ಹಳೆಯದನ್ನು ಮೆಲುಕು ಹಾಕಿದಾಗ ಮುಗುಳುನಗೆ ಬಂತು ಎಂದು ತಾಯಿ ಹೇಳಿದ್ದನ್ನು ವಿಧಾಸಭೆಯಲ್ಲಿ ನೆನಪು ಮಾಡಿಕೊಂಡು ಕೆಲ ಕ್ಷಣ ಗದ್ಗಿತರಾದರು. ಬಾವುಕರಾದರು. 

ಸದನ ತಲೆದೂಗುವಂತೆ ವಿಷಯ ಮಂಡನೆ ಮಾಡಿದ್ದು ರಾಜಕೀಯ ಅವರ ಪ್ರೌಡಿಮೆಗೆ ಹಿಡಿದ ಕನ್ನಡಿಯಾಗಿತ್ತು. ಕೊನೆಗೆ ಸಭಾಧ್ಯಕ್ಷರೇ ಬಹಳ ಚೆನ್ನಾಗಿ ಮಾತನಾಡಿದಿರಿ ಎಂದೂ ಮೆಚ್ಚುಗೆ ವ್ಯಕ್ತಪಡಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

ಅಮ್ಮಾ....ಐ ಲವ್ ಯೂ ಸೋ ಮಚ್: ಕುವೈತ್ ನಲ್ಲಿದ್ದ ತಾಯಿಗೆ ಕೊನೆಯ ಸಂದೇಶ ಕಳಿಸಿ ಯೂಟ್ಯೂಬರ್ ಆತ್ಮಹತ್ಯೆ

ಇನ್ನೂ ನನಸಾಗಿಲ್ಲ ದಶಕಗಳ ಕನಸು: ಹಾಸನ ವಿಮಾನ ನಿಲ್ದಾಣಕ್ಕೆ ಸಿಗದ ರೆಕ್ಕೆ, ಯೋಜನೆಗೆ ಅಡ್ಡಿಯಾಗಿದೆ ಸಂಪನ್ಮೂಲ-ರಾಜಕೀಯ ಇಚ್ಛಾಶಕ್ತಿ ಕೊರತೆ..!

SCROLL FOR NEXT