ರಾಜಕೀಯ

ಜನತಾ ಕರ್ಫ್ಯೂ ಯಶಸ್ವಿಗೊಳಿಸಲು ಬೆಂಗಳೂರು ಶಾಸಕರ ಪ್ರಯತ್ನ

Shilpa D

ಬೆಂಗಳೂರು: ಕೊರೊನಾ‌ ವೈರಾಣು ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ಜನತಾ ಕರ್ಫ್ಯೂ ಸಂಬಂಧ ಅರಿವು ಮೂಡಿಸಲು ಬೆಂಗಳರೂ ನಗರ ಶಾಸಕರು ತಮ್ಮ ಕೈಲಾದ ಪ್ರಯತ್ನ ಮಾಡುತ್ತಿದ್ದಾರೆ.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಗೋಪಾಲಯ್ಯ ತಮಮ್ಮ ಸ್ವಕ್ಷೇತ್ರ ಮಹಾಲಕ್ಷ್ಮಿ ಲೇಔಟ್ ನಲ್ಲಿ ಶನಿವಾರ ಸಾರ್ವಜನಿಕ ಪ್ರಕಟಣೆಗಳನ್ನು ಆಯೋಜಿಸಿದರು. ಹೊಸ ಹೊಸ ತಂತ್ರಜ್ಞಾನಗಳನ್ನು ಬಳಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ರಾಜಾಜಿನಗರ ಶಾಸಕ ಎಸ್ ಸುರೇಶ್ ಕುಮಾರ್, ಪೊಲೀಸ್ ಠಾಣೆ ಎದುರು  ಬಕೆಟ್ ನಲ್ಲಿ ನೀರು ಮತ್ತು ಸೋಪ್ ವ್ಯವಸ್ಥೆ ಕಲ್ಪಿಸಿದ್ದರು,  ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಶನಿವಾರ ಮಾತನಾಡಿ ಮನೆಯಿಂದ ಹೊರಬರದಂತೆ ಮನವಿ ಮಾಡಿದ್ದಾರೆ. 

SCROLL FOR NEXT