ರಾಜಕೀಯ

ಮಗನ ಹೆಸರು ಬಳಸಿಕೊಂಡು ಚುನಾವಣೆಗೆ ನಿಲ್ಲಲು ನಾವು ಬಿಡಲ್ಲ: ಕುಸುಮಾ ವಿರುದ್ಧ ಡಿಕೆ ರವಿ ತಾಯಿ ಆಕ್ರೋಶ

Raghavendra Adiga

ತುಮಕೂರು: ಆರ್.ಆರ್.ನಗರದ ಉಪಚುನಾವಣೆಯಲ್ಲಿ ಕಾಂಗ್ರೆಸ್​​ ಪಕ್ಷ ದಿವಗಂತ ಡಿ.ಕೆ.ರವಿ ಪತ್ನಿ ಕುಸುಮಾಗೆ ಟಿಕೆಟ್ ನೀಡುವ ಸಾಧ್ಯತೆ ಇದೆ. ಇದಕ್ಕೆ ಡಿ.ಕೆ.ರವಿ ಅವರ ಕುಟುಂಬ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕುಣಿಗಲ್​​ನ ದೊಡ್ಡಕೊಪ್ಪಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿ.ಕೆ.ರವಿ ತಾಯಿ ಗೌರಮ್ಮ. ತಮ್ಮ ಮಗನ‌ ಜೊತೆ ಅವಳು‌ ಹೋಗಿಬಿಟ್ಲು ಅಂತಾ ತಿಳಿದುಕೊಂಡಿದ್ದೇನೆ. ನನ್ನ ಮಗನ‌ ದುಡ್ಡಲ್ಲಿ ಒಂದು ರೂಪಾಯಿ‌ ನಮ್ಮ ಕಷ್ಟಕ್ಕೆ ಸೊಸೆಯಾದ ಕುಸುಮಾ ನೀಡಲಿಲ್ಲ. ನನ್ನ ಮಗನ ಹೆಸರು ಹೇಳಿಕೊಂಡು ಏಕೆ‌ ಅವಳು ಚುನಾವಣೆಗೆ ನಿಲ್ಲಬೇಕು. ಡಿ.ಕೆ.ರವಿ ಅಂತ್ಯಸಂಸ್ಕಾರ ಮಾಡಿದ ದಿನ ಮಣ್ಣಲ್ಲಿ‌ ಬಿಸಾಕಿ‌ ಹೋಗಿದ್ದವಳು ಇವತ್ತಿನವರೆಗೂ ಬಂದಿಲ್ಲ ಎಂದು ಗೌರಮ್ಮ ಕಿಡಿಕಾರಿದ್ದಾರೆ.

ಅಲ್ಲದೆ ಮಗನ ಹೆಸರು ಹೇಳಿಕೊಂಡು ಚುನಾವಣೆಗೆ ಸ್ಪರ್ಧಿಸಿದರೆ ಸರಿ ಇರಲ್ಲ ಎಂದು ಎಚ್ಚರಿಸಿದ್ದಾರೆ.

SCROLL FOR NEXT