ಸಂದೇಶ್ ನಾಗರಾಜ್ 
ರಾಜಕೀಯ

'ತೆನೆ' ಇಳಿಸಿ 'ಕಮಲ' ಹಿಡಿಯಲು ಸಂದೇಶ್ ನಾಗರಾಜ್ ಮುಂದು: ಬಿಜೆಪಿಯಿಂದ ವಿಧಾನ ಪರಿಷತ್ ಗೆ ಟಿಕೆಟ್ ಸಿಗುವ ವಿಶ್ವಾಸ

ಇನ್ನೆರಡು ಮೂರು ದಿನಗಳಲ್ಲಿ ನಾನು ಜೆಡಿಎಸ್ ತೊರೆಯುತ್ತೇನೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅಧಿಕೃತವಾಗಿ ಹೇಳಿದ್ದಾರೆ. 

ಮೈಸೂರು: ಇನ್ನೆರಡು ಮೂರು ದಿನಗಳಲ್ಲಿ ನಾನು ಜೆಡಿಎಸ್ ತೊರೆಯುತ್ತೇನೆ ಎಂದು ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಅಧಿಕೃತವಾಗಿ ಹೇಳಿದ್ದಾರೆ. 

ಮೈಸೂರಿನಲ್ಲಿಂದು ಮಾತನಾಡಿರುವ ಅವರು, ನಾನು ಮೂರು ವರ್ಷಗಳಿಂದ ಜೆಡಿಎಸ್ ಸಂಪರ್ಕದಲ್ಲಿಲ್ಲ, ಜೆಡಿಎಸ್ ನಾಯಕರ ಜೊತೆ ಕೂಡ ಒಡನಾಟವಿಲ್ಲ, ಇನ್ನು ಎರಡ್ಮೂರು ದಿನಗಳಲ್ಲಿ ಜೆಡಿಎಸ್ ತೊರೆಯಲಿದ್ದು, ಬಿಜೆಪಿ ಸೇರುತ್ತೇನೆ. ಬಿಜೆಪಿಯಿಂದ ವಿಧಾನ ಪರಿಷತ್ ಗೆ ಸ್ಪರ್ಧಿಸಲು ಟಿಕೆಟ್ ಸಿಗುವ ವಿಶ್ವಾಸವಿದೆ ಎಂದಿದ್ದಾರೆ.

ಬಿಜೆಪಿ ಸೇರಿದ ಬಳಿಕ ಜೆಡಿಎಸ್ ತೊರೆಯಲು ಕಾರಣ ತಿಳಿಸುತ್ತೇನೆ, ನಾನು ಆ ಪಕ್ಷದಲ್ಲಿ ಇಷ್ಟು ದಿನ ದೈಹಿಕವಾಗಿ ಇದ್ದೆನಷ್ಟೆ ಹೊರತು ಮಾನಸಿಕವಾಗಿ ಇರಲಿಲ್ಲ. ಕುಮಾರಸ್ವಾಮಿಗೆ ನಾನು ಜೆಡಿಎಸ್ ನಲ್ಲಿರುವುದು ಬೇಕಿಲ್ಲ ಎನಿಸುತ್ತದೆ, ನನ್ನ ಅಗತ್ಯ ಅಲ್ಲಿ ಇಲ್ಲದ ಮೇಲೆ ಆ ಪಕ್ಷದಲ್ಲಿದ್ದುಕೊಂಡು ಏನು ಉಪಯೋಗ ಎಂದು ಹೇಳಿದ್ದಾರೆ. 

ಈ ಮೂಲಕ ಜೆಡಿಎಸ್ ನಲ್ಲಿ ಮತ್ತೊಬ್ಬ ಪ್ರಮುಖ ನಾಯಕರು ತೊರೆಯುವುದು ಸ್ಪಷ್ಟವಾಗಿದೆ. ಈಗಾಗಲೇ ಜಿ ಟಿ ದೇವೇಗೌಡ ಮತ್ತು ಕೋಲಾರ ಶಾಸಕ ಶ್ರೀನಿವಾಸ ಗೌಡ ಪಕ್ಷ ತೊರೆಯಲು ತುದಿಗಾಲಲ್ಲಿ ನಿಂತಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT