ಪ್ರಚಾರ ಸಭೆಯಲ್ಲಿ ಸಚಿವ ಆನಂದ್ ಸಿಂಗ್ ಮತ್ತಿತರರ ಚಿತ್ರ 
ರಾಜಕೀಯ

ಮೋದಿ ಹೊಡೆತಕ್ಕೆ 'ಹುಡುಗ' ರಾಹುಲ್ ರಾಜಕೀಯದಲ್ಲಿ ಇರಲ್ಲ: ಆನಂದ್ ಸಿಂಗ್

ಪ್ರಧಾನಿ ನರೇಂದ್ರ ಮೋದಿ ಅವರ ಹೊಡೆತಕ್ಕೆ ಕಾಂಗ್ರೆಸ್ ನ  'ಹುಡುಗ' ರಾಹುಲ್ ಗಾಂಧಿ ಅವರು ಬಹಳ ದಿನ ರಾಜಕೀಯದಲ್ಲಿ ಉಳಿಯುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ  ಆನಂದ್ ಸಿಂಗ್  ವ್ಯಂಗ್ಯವಾಡಿದ್ದಾರೆ.

ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಹೊಡೆತಕ್ಕೆ ಕಾಂಗ್ರೆಸ್ ನ  'ಹುಡುಗ' ರಾಹುಲ್ ಗಾಂಧಿ ಅವರು ಬಹಳ ದಿನ ರಾಜಕೀಯದಲ್ಲಿ ಉಳಿಯುವುದಿಲ್ಲ ಎಂದು ಪ್ರವಾಸೋದ್ಯಮ ಸಚಿವ  ಆನಂದ್ ಸಿಂಗ್  ವ್ಯಂಗ್ಯವಾಡಿದ್ದಾರೆ.

ಜಗಳೂರು ತಾಲೂಕಿನ ಕಂಬತ್ತಹಳ್ಳಿ ಮರುಳುಸಿದ್ದಪ್ಪ ಭವನದಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿಗೆ  ಸರಿ ಸಮಾನವಾಗಿ ನಿಲ್ಲಲ್ಲು ರಾಹುಲ್ ಗಾಂಧಿ  ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ. ಆದರೆ, ಮೋದಿ ಅವರ ಸಮಕ್ಕೆ ನಿಲ್ಲಲ್ಲು ಆಗದ ರಾಹುಲ್ ಗಾಂಧಿ, ಮೋದಿ ಅವರ ಹೊಡೆತಕ್ಕೆ ಇಟಲಿ ಕಡೆ ಹೋಗಿ ಬಿಡುತ್ತಾರೆ ಎಂದರು. 

ಮೋದಿ ಅವರು ಆಕಾಶ ಆದರೆ ರಾಹುಲ್ ಗಾಂಧಿ ಭೂಮಿ ಇದ್ದಂತೆ. ಕುಸ್ತಿಗೆ ಹೋದಾಗ ಪೈಲ್ವಾನ್ ಗಳಿಬ್ಬರು ಸರಿ ಸಮಾನವಾಗಿ ಇದ್ದರೆ ಆ ಕುಸ್ತಿ ನೋಡಬಹುದು. ಆದರೆ ಬಡಕಲು ವ್ಯಕ್ತಿ ಇದ್ದರೆ ಅಂತಹ ಕುಸ್ತಿ ನೋಡಲು ಸಾಧ್ಯವೇ? ರಾಹುಲ್ ಗಾಂಧಿ ಅವರದ್ದು ಇದೀಗ ಬಡಕಲು ವ್ಯಕ್ತಿಯ ಪರಿಸ್ಥಿತಿಯಾಗಿದೆ ಎಂದು ಕುಟುಕಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT