ರಾಜಕೀಯ

ಮೀಸಲಾತಿ ಹೆಚ್ಚಳ ಬೇಡಿಕೆ: ಎಷ್ಟು ಸಲ ನೀನು ರಾಜೀನಾಮೆ ಕೊಡ್ತಿಯಾ? – ರಾಮುಲುಗೆ ಬಿಎಸ್‌ವೈ ಬುದ್ಧಿವಾದ!

Lingaraj Badiger

ಬೆಂಗಳೂರು: ಸಚಿವ ಬಿ. ಶ್ರೀರಾಮುಲು ಅವರು ಎಸ್ ಟಿ ಮೀಸಲಾತಿ ಹೆಚ್ಚಳ ಮಾಡದಿದ್ದರೆ ರಾಜೀನಾಮೆ ನೀಡುವುದಾಗಿ ಪದೇ ಪದೇ ಹೇಳುತ್ತಿರುವುದಕ್ಕೆ ಶುಕ್ರವಾರ ನಡೆದ ಬಿಜೆಪಿ ಚಿಂತನಾ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಸಂಬಂಧ ನಿಕಟಪೂರ್ವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಿನ್ನೆ ನಡೆದ ಬಿಜೆಪಿ ಚಿಂತನಾ ಸಭೆಯಲ್ಲಿ ಶ್ರೀರಾಮುಲು ಅವರಿಗೆ ಬುದ್ದಿವಾದ ಹೇಳಿದ್ದಾರೆ. ಎಷ್ಟು ಸಲ ಅಂತ ನೀನು ರಾಜೀನಾಮೆ ಕೊಡ್ತಿಯಾ? ನೀನು ಈ ರೀತಿ ಹೇಳಿದರೆ ಪಕ್ಷದ ಇಮೇಜ್ ಏನಾಗಬೇಕು? ನೀನು ಸರ್ಕಾರದಲ್ಲಿ ಹಿರಿಯ ಸಚಿವನಾಗಿದ್ದೀಯಾ? ಸಚಿವನಾಗಿ ನಿನಗೂ ಜವಾಬ್ದಾರಿ ಇದೆ. ಇನ್ನು ಮುಂದೆ ಆ ರೀತಿಯ ಹೇಳಿಕೆಗಳನ್ನು ಕೊಡಬೇಡ. ಅದರಿಂದ ಸರ್ಕಾರದ ಇಮೇಜ್ ಗೆ ಧಕ್ಕೆಯಾಗುತ್ತದೆ ಎಂದಿದ್ದಾರೆ.

ಬಳಿಕ, ಸಚಿವ ಶ್ರೀರಾಮುಲು, ಯಡಿಯೂರಪ್ಪ ಅವರ ಮಾತಿಗೆ ತಪ್ಪಾಯ್ತು ಎಂದು ಕ್ಷಮೆಯಾಚಿಸಿದರು ಎನ್ನಲಾಗಿದೆ.

SCROLL FOR NEXT