ರಾಜಕೀಯ

2023ರ ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್ ಅಭ್ಯರ್ಥಿ ವೈ.ಸಂಪಂಗಿ: ಸಚಿವ ಮುನಿರತ್ನ ಘೋಷಣೆ

Shilpa D

ಕೋಲಾರ: ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೆಜಿಎಫ್ ಕ್ಷೇತ್ರಕ್ಕೆ ವೈ.ಸಂಪಂಗಿ ಅಭ್ಯರ್ಥಿ ಎಂದು ಸಚಿವ ಮುನಿರತ್ನ  ಘೋಷಿಸಿದ್ದಾರೆ.

ಕೋಲಾರದಲ್ಲಿ ಮಾತನಾಡಿದ ಅವರು, ಸಂಪಂಗಿ ಅವರು ಕೆಜಿಎಫ್ ನಿಂದ ಸ್ಪರ್ಧಿಸಿ ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂದು ಹೇಳಿದ್ದು, ಅಲ್ಲಿ ನೆರೆದಿದ್ದ ಕೆಲ ನಾಯಕರ ಅಸಮಾಧಾನಕ್ಕೆ ಕಾರಣವಾಯಿತು.

ಸಂಪಂಗಿಯಿಂದಾಗಿ ಪಕ್ಷ ಇಬ್ಭಾಗವಾಗಿರುವ ಕೆಜಿಎಫ್‌ನಲ್ಲಿನ ವಾಸ್ತವತೆಯನ್ನು ಸಚಿವರು ಪರಿಶೀಲಿಸಬೇಕು ಎಂದು ಕೆಜಿಎಫ್ ನಗರ ಘಟಕದ ಬಿಜೆಪಿ ಅಧ್ಯಕ್ಷ ಕಮಲನಾಥನ್ ಹೇಳಿದರು. ಇದರಿಂದ ಅಸಮಾಧಾನಗೊಂಡ ಮುನಿರತ್ನ ಅವರು ಕಾಂಗ್ರೆಸ್ ನಾಯಕರಂತೆ ಮಾತನಾಡಬೇಡಿ ಎಂದು ಕಮಲನಾಥನ್ ಅವರಲ್ಲಿ ಮನವಿ ಮಾಡಿದರು.

SCROLL FOR NEXT