ಡಾ.ಸ್ನೇಹಾರೆಡ್ಡಿ 
ರಾಜಕೀಯ

ಭಾರತ್ ಜೋಡೋ ಯಾತ್ರೆಯಲ್ಲಿ ನ್ಯೂಯಾರ್ಕ್ ಮೂಲದ ಡಾ. ಸ್ನೇಹಾ ರೆಡ್ಡಿ ಭಾಗಿ

ಕಳೆದ 20 ವರ್ಷಗಳಿಂದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಡಾ. ಸ್ನೇಹಾ ರೆಡ್ಡಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

ಹಿರಿಯೂರು: ಕಳೆದ 20 ವರ್ಷಗಳಿಂದ ನ್ಯೂಯಾರ್ಕ್ ನಲ್ಲಿ ನೆಲೆಸಿರುವ ಡಾ. ಸ್ನೇಹಾ ರೆಡ್ಡಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ. ಮೂಲತ: ಬೆಂಗಳೂರು ಮೂಲದ ಡಾ. ಸ್ನೇಹಾ ರೆಡ್ಡಿ, ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ ಬಗ್ಗೆ ಮಾಧ್ಯಮಗಳ ಮೂಲಕ ತಿಳಿದ ನಂತರ ಅದರಲ್ಲಿ ಅದರಲ್ಲಿ ಸೇರಲು ನಿರ್ಧರಿಸಿದೆ. ಈಗ, ನಾನು ಪ್ರತಿದಿನ ನಡೆಯುತ್ತಿದ್ದೇನೆ, ಹೊಸ ಜನರನ್ನು ಭೇಟಿಯಾಗುತ್ತಿದ್ದೇನೆ ಮತ್ತು ದೇಶವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು. 

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ 50 ವರ್ಷದ  ಡಾ. ಸ್ನೇಹಾ ರೆಡ್ಡಿ, ನಾನು ದೂರದ ನ್ಯೂಯಾರ್ಕ್‌ನಲ್ಲಿದ್ದರೂ, ಭಾರತದಲ್ಲಿ, ಮುಖ್ಯವಾಗಿ ಕರ್ನಾಟಕದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ನಾನು ನಿಕಟವಾಗಿ ಗಮನಿಸುತ್ತೇನೆ. ದೇಶದಲ್ಲಿ ನೆಲೆಸಿದ್ದ ಶಾಂತಿ ಮತ್ತು ನೆಮ್ಮದಿ ವೇಗವಾಗಿ ಮರೆಯಾಗುತ್ತಿರುವುದನ್ನು ಕಂಡು ಹೃದಯ ಕಲಕಿದೆ.ಈ ಹಂತದಲ್ಲಿ ನಾನು ದೇಶಕ್ಕಾಗಿ ನಡೆಯಲು ನಿರ್ಧರಿಸಿದ್ದಾಗಿ ತಿಳಿಸಿದರು.

 ನಾನು ಭಾರತದಲ್ಲಿ ಇಳಿದು ಕನ್ಯಾಕುಮಾರಿಯಿಂದ ನಡೆಯಲು ಪ್ರಾರಂಭಿಸಿದೆ. ನಾನು ಕೊನೆಯವರೆಗೂ ಹೋಗುತ್ತೇನೆ ಮತ್ತು ಕಾಶ್ಮೀರದವರೆಗೂ ಯಾತ್ರೆಯ ಭಾಗವಾಗಿರುತ್ತೇನೆ. ರಾಹುಲ್ ಯಾತ್ರೆಗೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಸಮಾಜದಲ್ಲಿ ಬದಲಾವಣೆ ತರಬಹುದು ಎಂದರು. 

ಡಾ. ಸ್ನೇಹಾ ರೆಡ್ಡಿ ಪ್ರತಿದಿನ ಬೆಳಿಗ್ಗೆ 6.30 ಕ್ಕೆ ತಮ್ಮ ಪ್ರಯಣವನ್ನು ಪ್ರಾರಂಭಿಸುತ್ತಾರೆ ಮತ್ತು ಯಾತ್ರೆಯಲ್ಲಿ ಭಾಗವಹಿಸುವ ಜನರು ಮತ್ತು ಮಕ್ಕಳೊಂದಿಗೆ ಸಂವಹನ ನಡೆಸುತ್ತಾರೆ. ನಾನು ಕಾಶ್ಮೀರಕ್ಕೆ ಹೋಗಲು ನಿರ್ಧರಿಸಿದ್ದೇನೆ. ದೇಶವು ಸಹಜ ಸ್ಥಿತಿಗೆ ಮರಳುವುದನ್ನು ಖಚಿತಪಡಿಸಿಕೊಳ್ಳುವುದು. ಪ್ರತಿದಿನ 20 ಕಿ.ಮೀ ನಡೆಯುತ್ತೇನೆ. ನಾನು ರಾಜಕೀಯೇತರ. ಯಾತ್ರೆಯಲ್ಲಿ ಭಾಗವಹಿಸಿದ್ದು ನನಗೆ ಸಂತಸ ತಂದಿದೆ ಎಂದು ಅವರು ಹೇಳಿದರು.

ರಾಹುಲ್ ಗಾಂಧಿ ಬಗ್ಗೆ ನನ್ನ ಗ್ರಹಿಕೆ ವಿಭಿನ್ನವಾಗಿತ್ತು, ಆದರೆ ನಾನು ಅವರೊಂದಿಗೆ ಸಂವಹನ ನಡೆಸಿದ ನಂತರ ಅದು ಬದಲಾಯಿತು. ಅವರು ಫಿಟ್ ಅಂಡ್ ಫೈನ್ ಆಗಿರುವ ಮಹಾನ್ ನಾಯಕ. ಅವರು ದೇಶವನ್ನು ಸಮಾನತೆಯತ್ತ ಕೊಂಡೊಯ್ಯಬಲ್ಲರು,” ಎಂದು ಅವರು ಹೇಳಿದರು. ಡಾ. ಸ್ನೇಹಾ ರೆಡ್ಡಿ ಬೆಂಗಳೂರಿನಲ್ಲಿ ತನ್ನ ವಿದ್ಯಾಭ್ಯಾಸ ಮುಗಿಸಿ ಕಳೆದ 20 ವರ್ಷಗಳಿಂದ ಅಮೇರಿಕಾದಲ್ಲಿ ನೆಲೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Karnataka CM News LIVE Updates | ಸಿದ್ದರಾಮಯ್ಯ ಬ್ರೇಕ್ ಫಾಸ್ಟ್ ಮೀಟಿಂಗ್; ಸಿಎಂ ಸ್ಥಾನಕ್ಕೆ ರಾಜೀನಾಮೆ?, ದಿಢೀರ್ ಮುಂಬೈಗೆ ತೆರಳಿದ ರಾಜ್ಯಪಾಲ ಗೆಹ್ಲೋಟ್..!

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧದ ಕಾರ್ಮೋಡ: 4 ಇರಾನ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕಾ, ಹೋರ್ಮುಜ್‌ನಲ್ಲಿ ಉದ್ವಿಗ್ನತೆ ತೀವ್ರ..!

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

SCROLL FOR NEXT