ರಾಜಕೀಯ

ನಾಡಿನ ಜ್ವಲಂತ ಸಮಸ್ಯೆಗಳು ಕಣ್ಮುಂದೆ ಬರುತ್ತಿವೆ: ನಾಳೆ ಮಾಜಿ ಪ್ರಧಾನಿ ದೇವೇಗೌಡರಿಂದ ಸುದ್ದಿಗೋಷ್ಠಿ

Lingaraj Badiger

ಬೆಂಗಳೂರು: 91ನೇ ವಯಸ್ಸಿನಲ್ಲೂ ನಾಡಿನ ಹಲವು ಜ್ವಲಂತ ಸಮಸ್ಯೆಗಳು ಕಣ್ಮುಂದೆ ಬರುತ್ತಿವೆ ಎಂದಿರುವ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು, ನಾಳೆ ಬೆಳಗ್ಗೆ 11 ಗಂಟೆಗೆ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ.

ಇಂದು ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಪ್ರಧಾನಿ, ನನಗೀಗ 91 ವರ್ಷ. ನಾಡಿನ ಜ್ವಲಂತ ಸಮಸ್ಯೆಗಳನ್ನು ನೋಡಿದಾಗ ನನ್ನ ಮನಸಿಗೆ ನೋವಾಗುತ್ತದೆ. ನಾಳೆ ಬೆಳಗ್ಗೆ 11 ಗಂಟೆಗೆ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿ ಕರೆದಿದ್ದೇನೆ. ಎಲ್ಲಾ ಸಮಸ್ಯೆಗಳನ್ನು ಬಿಚ್ಚಿಡುತ್ತೇನೆ ಎಂದಿದ್ದಾರೆ.

ಇಡೀ ರಾಜ್ಯದ ಪರಿಸ್ಥಿತಿ ಬಗ್ಗೆ ನಾಳೆ ಸುದ್ದಿಗೋಷ್ಠಿ ಕರೆದಿದ್ದೇನೆ. ಎಲ್ಲಾ ನೋಡ್ತಿರುವೆ, ಚಪ್ಪಲಿ ಹಾಕಿಲ್ಲ, ಹಳೆಯದ್ದು ನೆನಪಿಸಿಕೊಳ್ಳಲ್ಲ. ರಾಜ್ಯದ ಸಮಸ್ಯೆ ನೋಡುತ್ತಿದ್ದೇನೆ. 91ನೇ ವಯಸ್ಸಿನಲ್ಲೂ ಹಲವು ಸಮಸ್ಯೆ ಕಣ್ಣು ಮುಂದೆ ಬರುತ್ತಿವೆ ಎಂದಿದ್ದಾರೆ.

SCROLL FOR NEXT