ಅನಂತ್ ಕುಮಾರ್-ವಿಜೇತ(ಸಂಗ್ರಹ ಚಿತ್ರ) 
ರಾಜಕೀಯ

ನನ್ನ ಅಪ್ಪನನ್ನು ಮರೆಯುತ್ತಿರುವ ಬಿಜೆಪಿ ಗಂಭೀರವಾಗಿ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು: ಅನಂತ್ ಕುಮಾರ್ ಪುತ್ರಿ ಅಸಮಾಧಾನ

ಬಿಜೆಪಿ ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ದುಡಿದು ಕೇಂದ್ರ ಸಚಿವರಾಗಿ ಬೆಂಗಳೂರಿಗೆ ಕರ್ನಾಟಕಕ್ಕೆ ಸಾಕಷ್ಟು ಕೆಲಸ ಮಾಡಿದ್ದ, ಕೊಡುಗೆ ನೀಡಿದ್ದ  ಮಾಜಿ ಸಚಿವ, ದಿವಂಗತ ಅನಂತ್ ಕುಮಾರ್ ರವರ ಹೆಸರನ್ನು ಏಕೆ ಪ್ರಮುಖ ರಸ್ತೆಗಳಿಗೆ ಇಡುತ್ತಿಲ್ಲ ಎಂಬ ಮಾತುಗಳು, ಆಕ್ಷೇಪಗಳು ಇತ್ತೀಚೆಗೆ ಕೇಳಿಬರುತ್ತಿವೆ. 

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ರಸ್ತೆಗಳಿಗೆ ಇತ್ತೀಚೆಗೆ ನಟರ ಹೆಸರಿಡುವುದು ಸಾಮಾನ್ಯವಾಗಿದೆ. ಆ ಮಧ್ಯೆ ಬಿಜೆಪಿ ಪಕ್ಷಕ್ಕಾಗಿ ಹಲವು ವರ್ಷಗಳ ಕಾಲ ದುಡಿದು ಕೇಂದ್ರ ಸಚಿವರಾಗಿ ಬೆಂಗಳೂರಿಗೆ ಕರ್ನಾಟಕಕ್ಕೆ ಸಾಕಷ್ಟು ಕೆಲಸ ಮಾಡಿದ್ದ, ಕೊಡುಗೆ ನೀಡಿದ್ದ  ಮಾಜಿ ಸಚಿವ, ದಿವಂಗತ ಅನಂತ್ ಕುಮಾರ್ ರವರ ಹೆಸರನ್ನು ಏಕೆ ಪ್ರಮುಖ ರಸ್ತೆಗಳಿಗೆ ಇಡುತ್ತಿಲ್ಲ ಎಂಬ ಮಾತುಗಳು, ಆಕ್ಷೇಪಗಳು ಇತ್ತೀಚೆಗೆ ಕೇಳಿಬರುತ್ತಿವೆ. 

ಈ ಬಗ್ಗೆ ಪತ್ರಿಕೆಯೊಂದರಲ್ಲಿ ಬಂದಿರುವ ವರದಿಯನ್ನು ಹಂಚಿಕೊಂಡು ಅನಂತ್ ಕುಮಾರ್ ಅವರ ಪುತ್ರಿ ವಿಜೇತಾ ಅನಂತ್ ಕುಮಾರ್ ಮಾಡಿರುವ ಟ್ವೀಟ್ ಸುದ್ದಿಯಾಗಿದೆ. ನನ್ನ ಅಪ್ಪನನ್ನು ಮರೆತಿರಾ ಎಂದು ನೋವಿನಿಂದ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, “ನನ್ನ ಅಪ್ಪ ದಿವಂಗತ ಅನಂತ್ ಕುಮಾರ್ 1987ರಲ್ಲಿ ಬಿಜೆಪಿಗೆ ಸೇರ್ಪಡೆಯಾದರು. ಅಲ್ಲಿಂದ ತಮ್ಮ ಕೊನೆಯ ಉಸಿರಿನವರೆಗೆ ಅವರು ಬಿಜೆಪಿಗಾಗಿಯೇ ದುಡಿದರು. ಅನೇಕ ರಸ್ತೆಗಳಿಗೆ, ರೈಲು ಮಾರ್ಗಗಳಿಗೆ ಹಲವಾರು ಸಾಧಕರ ಹೆಸರಿಡುತ್ತಿದ್ದೀರಿ. ಹಲವಾರು ಯೋಜನೆಗಳ ಉದ್ಘಾಟನಾ ಭಾಷಣಗಳಲ್ಲಿ ಬಿಜೆಪಿಗಾಗಿ ದುಡಿದವರನ್ನು ಸ್ಮರಿಸುತ್ತಿದ್ದೀರಿ. ಆದರೆ, ಬಿಜೆಪಿಗಾಗಿ ಜೀವನಪೂರ್ತಿ ದುಡಿದ, ಪಕ್ಷಕ್ಕೆ ಅನೇಕ ಸೇವೆಗಳನ್ನು ಮಾಡಿದ ನನ್ನ ಅಪ್ಪನ ಹೆಸರು ಮಾತ್ರ ನಿಮಗೆ ನೆನಪಿಗೆ ಬರುವುದಿಲ್ಲವೇ?’’ ಎಂದು ಅವರು ಪ್ರಶ್ನಿಸಿದ್ದಾರೆ.

ವಿವಿಧ ಕಾರ್ಯಕ್ರಮಗಳಲ್ಲಿ ನನ್ನ ಅಪ್ಪನ ಹೆಸರನ್ನು ನೆಪಮಾತ್ರಕ್ಕೂ ಸ್ಮರಿಸದೇ ಇರುವುದು ಸರಿಯೇ ಅಥವಾ ನನ್ನ ಅಪ್ಪನ ಸೇವೆಯು ಕ್ಷುಲ್ಲಕವಾದದ್ದು ಎಂದು ತಿಳಿಯಲಾಗಿದೆಯೇ ಅವರು ಇಂದಿಗೂ ಲಕ್ಷಾಂತರ ಜನರ ಹೃದಯದಲ್ಲಿ ಜೀವಂತವಾಗಿದ್ದಾರೆ. ಅವರನ್ನು ಮರೆತ ಪಕ್ಷವು ಒಮ್ಮೆ ಆತ್ಮವಿಮರ್ಶೆ ಮಾಡಿಕೊಳ್ಳಲಿ, ಈ ಬಗ್ಗೆ ಗಂಭೀರವಾಗಿ ಯೋಚಿಸುವ ಅಗತ್ಯವಿದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇರಾನ್ ಮೇಲೆ ಇಂದು ತುಂಬಾ 'ಪ್ರಬಲ ದಾಳಿ': ಟ್ರಂಪ್ ವಾರ್ನಿಂಗ್; ಹಿಜ್ಬುಲ್ಲಾ ನಿಶ್ಯಸ್ತ್ರಗೊಳಿಸಿ- ಲೆಬನಾನ್‌ಗೆ ಇಸ್ರೇಲ್ ಎಚ್ಚರಿಕೆ!

'ರಷ್ಯಾ ತೈಲ ಖರೀದಿಗೆ 30 ದಿನಗಳ ಅನುಮತಿ ಕೊಡ್ತೀವಿ'; ಅಮೆರಿಕ ಉದ್ಧಟತನಕ್ಕೆ ಕೆರಳಿದ ಭಾರತ ಹೇಳಿದ್ದೇನು!

ಅಮೆರಿಕಾದ 300 ಮಿಲಿಯನ್ ಡಾಲರ್ ಮೌಲ್ಯದ THAAD ರಡಾರ್ ವ್ಯವಸ್ಥೆ ಇರಾನ್ ದಾಳಿಯಲ್ಲಿ ಧ್ವಂಸ!

TVK ಅಧಿಕಾರಕ್ಕೆ ಬಂದ್ರೆ ಮದುವೆಗೆ 8 ಗ್ರಾಂ ಚಿನ್ನ, ಉಚಿತ ಬಸ್, ತಿಂಗಳಿಗೆ 2,500 ರೂ.; ಭರವಸೆಗಳ ಸರಮಾಲೆಯನ್ನೇ ಘೋಷಿಸಿದ ವಿಜಯ್

'ನನ್ನ ಮೇಲೆ ಏಕೆ ಕೋಪವಿದೆಯೋ ಗೊತ್ತಿಲ್ಲ': ಮಮತಾ ವಿರುದ್ಧ ರಾಷ್ಟ್ರಪತಿ ಮುರ್ಮು ಗರಂ ಆಗಿದ್ದೇಕೆ?

SCROLL FOR NEXT