ಕ್ರೈಪಿಎಂ ಪೋಸ್ಟರ್ ಅಭಿಯಾನ 
ರಾಜಕೀಯ

ಮೋದಿ ಪ್ರಧಾನಿ ಮಾತ್ರವಲ್ಲ, ಜಾಗತಿಕ ನಾಯಕ: ಕಾಂಗ್ರೆಸ್‌ನ 'ಕ್ರೈ ಪಿಎಂ' ಅಭಿಯಾನಕ್ಕೆ ಬಿಜೆಪಿ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ 'ಕ್ರೈ ಪಿಎಂ' ಅಭಿಯಾನವನ್ನು ಪ್ರಾರಂಭಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. 'ಮೋದಿಯನ್ನು ಅಪಹಾಸ್ಯ ಮಾಡುವುದೇ ಕಾಂಗ್ರೆಸ್ ಪ್ರಚಾರದ ಉದ್ದೇಶವಾಗಿದೆ. ಮೋದಿ ಪ್ರಧಾನಿ ಮಾತ್ರವಲ್ಲ ಜಾಗತಿಕ ನಾಯಕ' ಎಂದಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ 'ಕ್ರೈ ಪಿಎಂ' ಅಭಿಯಾನವನ್ನು ಪ್ರಾರಂಭಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. 'ಮೋದಿಯನ್ನು ಅಪಹಾಸ್ಯ ಮಾಡುವುದೇ ಕಾಂಗ್ರೆಸ್ ಪ್ರಚಾರದ ಉದ್ದೇಶವಾಗಿದೆ. ಮೋದಿ ಪ್ರಧಾನಿ ಮಾತ್ರವಲ್ಲ ಜಾಗತಿಕ ನಾಯಕ' ಎಂದಿದ್ದಾರೆ.

ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್, 'ಕೋವಿಡ್ ಬಿಕ್ಕಟ್ಟು ಅಥವಾ ಪುಲ್ವಾಮಾ ಸಂಭವಿಸಿದಾಗ ಅವರು ಎಂದಿಗೂ ಕಣ್ಣೀರು ಹಾಕಿಲ್ಲ. ಆದರೆ, ಈಗ ಅವರು ಕಣ್ಣೀರು ಸುರಿಸುತ್ತಾ ಜನರ ಮುಂದೆ ಬಂದಿದ್ದಾರೆ' ಎಂದರು. ಕೆಪಿಸಿಸಿ ಸಂವಹನ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಮೋದಿ ಅವರು 'ವಿಕ್ಟಿಮ್ ಕಾರ್ಡ್' ಬಳಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಐವೈಸಿಯ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಟ್ವಿಟರ್‌ನಲ್ಲಿ ಬಿಜೆಪಿಯನ್ನು ಲೇವಡಿ ಮಾಡುತ್ತಾ, 'ಪ್ರತಿ ಚುನಾವಣೆಯ ಬಿಜೆಪಿಯ ಪ್ರಚಾರದ ಥೀಮ್ ಏನೆಂದರೆ, 'ಮುಜೆ ಗಲಿಯಾ ದಿಯಾ' (ಅವರು ನನ್ನನ್ನು ನಿಂದಿಸಿದರು) ಎಂಬುದಾಗಿರುತ್ತದೆ' ಎಂದಿದ್ದಾರೆ. 

ಹತ್ತಾರು ಕಾಂಗ್ರೆಸ್‌ ನಾಯಕರು ಟ್ವೀಟ್ ಮಾಡಿದ್ದು, 'PAYCM' ನಂತೆ 'CRYPM' ಎಂದು ಟ್ವೀಟ್ ಮಾಡಿದ್ದಾರೆ. 'ಪ್ರಧಾನಿ ಕಾರ್ಯಾಲಯವು ರೈತರ ಅಥವಾ ಜನರ ಸಮಸ್ಯೆ ಅಥವಾ ದೂರುಗಳನ್ನು ಸಂಗ್ರಹಿಸುವ ಬದಲು ನಿಂದನೆಗಳನ್ನು ಎಣಿಸುತ್ತಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಯ ನಂತರ ಈ ಪೋಸ್ಟರ್‌ಗಳೊಂದಿಗೆ ಕಾಂಗ್ರೆಸ್ ಪ್ರಚಾರ ನಡೆಸಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT