ಕ್ರೈಪಿಎಂ ಪೋಸ್ಟರ್ ಅಭಿಯಾನ 
ರಾಜಕೀಯ

ಮೋದಿ ಪ್ರಧಾನಿ ಮಾತ್ರವಲ್ಲ, ಜಾಗತಿಕ ನಾಯಕ: ಕಾಂಗ್ರೆಸ್‌ನ 'ಕ್ರೈ ಪಿಎಂ' ಅಭಿಯಾನಕ್ಕೆ ಬಿಜೆಪಿ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ 'ಕ್ರೈ ಪಿಎಂ' ಅಭಿಯಾನವನ್ನು ಪ್ರಾರಂಭಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. 'ಮೋದಿಯನ್ನು ಅಪಹಾಸ್ಯ ಮಾಡುವುದೇ ಕಾಂಗ್ರೆಸ್ ಪ್ರಚಾರದ ಉದ್ದೇಶವಾಗಿದೆ. ಮೋದಿ ಪ್ರಧಾನಿ ಮಾತ್ರವಲ್ಲ ಜಾಗತಿಕ ನಾಯಕ' ಎಂದಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ 'ಕ್ರೈ ಪಿಎಂ' ಅಭಿಯಾನವನ್ನು ಪ್ರಾರಂಭಿಸಿದ್ದು, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯಿಸಿದ್ದಾರೆ. 'ಮೋದಿಯನ್ನು ಅಪಹಾಸ್ಯ ಮಾಡುವುದೇ ಕಾಂಗ್ರೆಸ್ ಪ್ರಚಾರದ ಉದ್ದೇಶವಾಗಿದೆ. ಮೋದಿ ಪ್ರಧಾನಿ ಮಾತ್ರವಲ್ಲ ಜಾಗತಿಕ ನಾಯಕ' ಎಂದಿದ್ದಾರೆ.

ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿಕೆ ಹರಿಪ್ರಸಾದ್, 'ಕೋವಿಡ್ ಬಿಕ್ಕಟ್ಟು ಅಥವಾ ಪುಲ್ವಾಮಾ ಸಂಭವಿಸಿದಾಗ ಅವರು ಎಂದಿಗೂ ಕಣ್ಣೀರು ಹಾಕಿಲ್ಲ. ಆದರೆ, ಈಗ ಅವರು ಕಣ್ಣೀರು ಸುರಿಸುತ್ತಾ ಜನರ ಮುಂದೆ ಬಂದಿದ್ದಾರೆ' ಎಂದರು. ಕೆಪಿಸಿಸಿ ಸಂವಹನ ಮುಖ್ಯಸ್ಥ ಪ್ರಿಯಾಂಕ್ ಖರ್ಗೆ, ಮೋದಿ ಅವರು 'ವಿಕ್ಟಿಮ್ ಕಾರ್ಡ್' ಬಳಸುತ್ತಿರುವುದು ದುರದೃಷ್ಟಕರ ಎಂದು ಹೇಳಿದ್ದಾರೆ.

ಐವೈಸಿಯ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ಟ್ವಿಟರ್‌ನಲ್ಲಿ ಬಿಜೆಪಿಯನ್ನು ಲೇವಡಿ ಮಾಡುತ್ತಾ, 'ಪ್ರತಿ ಚುನಾವಣೆಯ ಬಿಜೆಪಿಯ ಪ್ರಚಾರದ ಥೀಮ್ ಏನೆಂದರೆ, 'ಮುಜೆ ಗಲಿಯಾ ದಿಯಾ' (ಅವರು ನನ್ನನ್ನು ನಿಂದಿಸಿದರು) ಎಂಬುದಾಗಿರುತ್ತದೆ' ಎಂದಿದ್ದಾರೆ. 

ಹತ್ತಾರು ಕಾಂಗ್ರೆಸ್‌ ನಾಯಕರು ಟ್ವೀಟ್ ಮಾಡಿದ್ದು, 'PAYCM' ನಂತೆ 'CRYPM' ಎಂದು ಟ್ವೀಟ್ ಮಾಡಿದ್ದಾರೆ. 'ಪ್ರಧಾನಿ ಕಾರ್ಯಾಲಯವು ರೈತರ ಅಥವಾ ಜನರ ಸಮಸ್ಯೆ ಅಥವಾ ದೂರುಗಳನ್ನು ಸಂಗ್ರಹಿಸುವ ಬದಲು ನಿಂದನೆಗಳನ್ನು ಎಣಿಸುತ್ತಿದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿಕೆಯ ನಂತರ ಈ ಪೋಸ್ಟರ್‌ಗಳೊಂದಿಗೆ ಕಾಂಗ್ರೆಸ್ ಪ್ರಚಾರ ನಡೆಸಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT