ಮಲ್ಲಿಕಾರ್ಜುನ ಖರ್ಗೆ 
ರಾಜಕೀಯ

'ನನ್ನ ಜೊತೆ ಬಾಬಾ ಸಾಹೇಬ್ ಸಂವಿಧಾನವಿದೆ, ರಕ್ಷಣೆಗೆ ಜನರಿದ್ದಾರೆ': ತವರು ಜಿಲ್ಲೆಯಲ್ಲಿ ಖರ್ಗೆ ಭಾವುಕ ಭಾಷಣ!

ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಬಹಿರಂಗ ಪ್ರಚಾರಕ್ಕೆ ಇಂದು ಸೋಮವಾರ ತೆರೆದಿದ್ದಿದೆ. ಈ ಹೊತ್ತಿನಲ್ಲಿ ಎಐಸಿಸಿ ಅಧ್ಯಕ್ಷರಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ತವರು ಜಿಲ್ಲೆ ಕಲಬುರಗಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ಮಾತನಾಡುತ್ತಾ ಭಾವುಕರಾಗಿದ್ದಾರೆ.

ಕಲಬುರಗಿ: ಕರ್ನಾಟಕ ವಿಧಾನಸಭೆ ಚುನಾವಣೆ 2023ರ ಬಹಿರಂಗ ಪ್ರಚಾರಕ್ಕೆ ಇಂದು ಸೋಮವಾರ ತೆರೆದಿದ್ದಿದೆ. ಈ ಹೊತ್ತಿನಲ್ಲಿ ಎಐಸಿಸಿ ಅಧ್ಯಕ್ಷರಾಗಿರುವ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ತಮ್ಮ ತವರು ಜಿಲ್ಲೆ ಕಲಬುರಗಿಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಷಣ ಮಾಡಿದ್ದಾರೆ. ಈ ವೇಳೆ ಮಾತನಾಡುತ್ತಾ ಭಾವುಕರಾಗಿದ್ದಾರೆ.

ಕರ್ನಾಟಕದ ‘ಭೂಮಿ ಪುತ್ರ’ ನಾಗಿ ಇಲ್ಲಿ ಜನ್ಮ ಪಡೆದಿದ್ದು ನನ್ನ ಸೌಭಾಗ್ಯ. ನೀವೆಲ್ಲರೂ ಸೇರಿ ಈ ಬಾರಿ ಕಾಂಗ್ರೆಸ್ ಪಕ್ಷವನ್ನು  ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಇತ್ತೀಚೆಗೆ ಬಿಜೆಪಿ ಅಭ್ಯರ್ಥಿಯೊಬ್ಬರು ಖರ್ಗೆ ಮತ್ತು ಅವರ ಕುಟುಂಬದವರನ್ನು ಮುಗಿಸಬೇಕೆಂದು ಸಂಚು ರೂಪಿಸಿದ್ದಾರೆ ಎಂದು ಹೇಳಿದ್ದರೆನ್ನಲಾದ ಆಡಿಯೊ ವೈರಲ್ ಆಗಿತ್ತು. ಈ ಬಗ್ಗೆ ಕೂಡ ಇಂದು ಮಾತನಾಡಿರುವ ಖರ್ಗೆ,  ಯಾರಾದರೂ ನನ್ನನ್ನು ಮುಗಿಸಲು ಬಯಸಿದರೆ, ಹಾಗೆ ಮಾಡಬಹುದು. ಆದರೆ ನನ್ನ ಕೊನೆಯ ಉಸಿರು ಇರುವವರೆಗೂ ಬಡವರಿಗಾಗಿ ಹೋರಾಡುವುದನ್ನು ಮುಂದುವರಿಸುತ್ತೇನೆ, ಅವರ ಹಿತಾಸಕ್ತಿಗಳನ್ನು ಕಾಪಾಡಲು ಪ್ರಯತ್ನಿಸುತ್ತೇನೆ ಎಂದು ಹೇಳಿದ್ದಾರೆ. 

ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಥೋಡ್ ಅವರು ಖರ್ಗೆ, ಅವರ ಪತ್ನಿ ಮತ್ತು ಮಕ್ಕಳನ್ನು ಮುಗಿಸಿಹಾಕುವುದಾಗಿ ಕನ್ನಡದಲ್ಲಿ ಹೇಳಿರುವ ಆಡಿಯೋ ರೆಕಾರ್ಡಿಂಗ್ ನ್ನು ಕಾಂಗ್ರೆಸ್ ಹಂಚಿಕೊಂಡಿದೆ.

ನನ್ನನ್ನು ಮುಗಿಸಲೇಬೇಕು ಎಂದು ಬಿಜೆಪಿ ನಾಯಕರ ಮನಸ್ಸಿಗೆ ಬಂದಿರಬಹುದು, ಇಲ್ಲದಿದ್ದರೆ ಖರ್ಗೆ ಮತ್ತು ಕುಟುಂಬವನ್ನು ಮುಗಿಸುತ್ತೇನೆ ಎಂದು ಹೇಳುವ ಧೈರ್ಯ ಯಾರಿಗೆ ಇರುತ್ತದೆ ಅವರ ಹಿಂದೆ ಯಾರೋ ಹೇಳಿಕೊಡುತ್ತಿರಬಹುದು ಎಂದರು.

ತಮ್ಮನ್ನು ಅಷ್ಟು ಸುಲಭವಾಗಿ ಮುಗಿಸಲು ಸಾಧ್ಯವಿಲ್ಲ.'ನನ್ನ ರಕ್ಷಣೆಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನವಿದೆ, ಕಲಬುರಗಿ, ಕರ್ನಾಟಕದ ಜನತೆ ನನ್ನ ಬೆನ್ನಿಗಿದ್ದಾರೆ, ಈಗ ಎಐಸಿಸಿ ಅಧ್ಯಕ್ಷರಾದ ಬಳಿಕ ದೇಶದ ಜನತೆ ನನ್ನ ಬೆನ್ನಿಗಿದ್ದಾರೆ, ನೀವು ನನ್ನನ್ನು ಮತ್ತು ನನ್ನ ಕುಟುಂಬವನ್ನು ಮುಗಿಸಿಬಿಡಬಹುದು...ನಾನು ಹೋದರೆ ಬೇರೆಯವರು ನನ್ನ ಬದಲಿಗೆ ಹೊರಹೊಮ್ಮಬಹುದು," ಎಂದರು. 

ಬಿಜೆಪಿಯವರು ಏನು ಬೇಕಾದರೂ ಮಾಡಲಿ, ಆದರೆ ನಾನು ಬಲಶಾಲಿಯಾಗಿದ್ದೇನೆ. ಒಬ್ಬ ಮನುಷ್ಯ ನೂರು ವರ್ಷ ಅಥವಾ 90 ವರ್ಷಗಳವರೆಗೆ ಬದುಕಬಹುದು, ಆದರೆ ಭಾರತದಲ್ಲಿ ಸರಾಸರಿ ಜೀವನವು 70 ಅಥವಾ 71 ಆಗಿದೆ. ನಾನು ಈಗಾಗಲೇ ನನ್ನ ಬೋನಸ್ ಅವಧಿಯಲ್ಲಿದ್ದೇನೆ, ನನಗೆ ಈಗ 81 ವರ್ಷ, ಬದುಕಿದರೆ ನಾನು ಇನ್ನೂ ಎಂಟು ಅಥವಾ ಒಂಬತ್ತು ವರ್ಷ ಬದುಕಬಹುದು, ಚಿಂತಿಸಬೇಡಿ, ಅದಕ್ಕೂ ಮೊದಲು ನನ್ನನ್ನು ಮುಗಿಸಲು ನೀವು ಬಯಸಿದರೆ, ನಿಮ್ಮ ಸಮಸ್ಯೆಗಳು ಪರಿಹಾರವಾದರೆ ಮುಗಿಸಿ. ನಾನು ಸಿದ್ಧ.

ಆದರೆ ನನ್ನ ಕೊನೆಯ ಉಸಿರು ಇರುವವರೆಗೂ ನಾನು ಬಡವರಿಗಾಗಿ ಹೋರಾಡುತ್ತೇನೆ ಮತ್ತು ಅವರನ್ನು ರಕ್ಷಿಸಲು ಪ್ರಯತ್ನಿಸುತ್ತೇನೆ. ನೀವು ನನ್ನೊಂದಿಗೆ ಇರುವವರೆಗೂ ನನಗೆ ಯಾವುದೇ ಭಯವಿಲ್ಲ ಎಂದು ನೆರೆದಿದ್ದವರನ್ನು ಉದ್ದೇಶಿಸಿ ಹೇಳಿದರು. 

ಕಲಬುರಗಿ ಜನತೆಯ ಆಶೀರ್ವಾದದಿಂದಲೇ ತಾವು ಸಂಸತ್ತಿನಲ್ಲಿದ್ದು, ವಿಧಾನಸಭೆಯಲ್ಲಿದ್ದು, ಪ್ರತಿಪಕ್ಷ ನಾಯಕ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಸೋತರೂ ಸೋನಿಯಾ ಗಾಂಧಿ ಅವರನ್ನು ರಾಜ್ಯಪಾಲರನ್ನಾಗಿಸಿದ್ದರು. ಸಭಾ ಸದಸ್ಯ ಮತ್ತು ನಂತರ ವಿರೋಧ ಪಕ್ಷದ ನಾಯಕ, ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಸ್ಮರಿಸಿಕೊಂಡರು. 

ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಎಲ್ಲ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಜಯಭೇರಿ ಬಾರಿಸುವಂತೆ ಖರ್ಗೆ ಜನತೆಗೆ ಮನವಿ ಮಾಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'Grok ರಚಿಸಿದ ಅಸಭ್ಯ, ಕಾನೂನುಬಾಹಿರ ವಿಷಯಗಳ ತೆಗೆದುಹಾಕಿ': Elon Musk ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ!

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಬಳ್ಳಾರಿ ಫೈರಿಂಗ್: ನಿನ್ನೆಯಷ್ಟೇ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪವನ್ ನೆಜ್ಜೂರ್ ಅಮಾನತು

ಭಾರತ ತಂಡಕ್ಕೆ ಭಾರಿ ಆಘಾತ; ಸ್ಟಾರ್ ಆಟಗಾರನ ಮೂಳೆ ಮುರಿತ, ದೀರ್ಘಕಾಲ ಕ್ರಿಕೆಟ್‌ನಿಂದ ದೂರ!

EVM Survey: ಹಳೆಯ ಸಮೀಕ್ಷೆ ಬಳಸಿಕೊಂಡು ಜನರ ದಾರಿತಪ್ಪಿಸುತ್ತಿರುವುದು ವಿಷಾದನೀಯ - ಸಿಎಂ ಸಿದ್ದರಾಮಯ್ಯ

SCROLL FOR NEXT