ಮೈಸೂರಿನ ಮತ ಎಣಿಕೆ ಕೇಂದ್ರ ಮುಂದೆ ಗೆಲುವಿನ ಸಂಕೇತ ಬೀರಿದ ಸಿದ್ದರಾಮಯ್ಯ 
ರಾಜಕೀಯ

ಕಾಂಗ್ರೆಸ್ 120ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತದೆ: ಸಿದ್ದರಾಮಯ್ಯ

16ನೇ ವಿಧಾನಸಭೆಯ ಸದಸ್ಯರ ಆಯ್ಕೆಗೆ ಮೊನ್ನೆಯಷ್ಟೇ ಮುಕ್ತಾಯವಾದ ಚುನಾವಣೆಯ ಫಲಿತಾಂಶ ಇಂದು ಮೇ 13ರಂದು ಪ್ರಕಟವಾಗುತ್ತಿದ್ದು ಈಗಾಗಲೇ 6ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. 

ಮೈಸೂರು: 16ನೇ ವಿಧಾನಸಭೆಯ ಸದಸ್ಯರ ಆಯ್ಕೆಗೆ ಮೊನ್ನೆಯಷ್ಟೇ ಮುಕ್ತಾಯವಾದ ಚುನಾವಣೆಯ ಫಲಿತಾಂಶ ಇಂದು ಮೇ 13ರಂದು ಪ್ರಕಟವಾಗುತ್ತಿದ್ದು ಈಗಾಗಲೇ 6ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದೆ. 

ಕಾಂಗ್ರೆಸ್ ಸರ್ಕಾರ ರಚಿಸಲು ಬೇಕಾದ 113 ಮ್ಯಾಜಿಕ್ ನಂಬರ್ ನ್ನು ದಾಟಿ ಸರಳವಾಗಿ ಬಹುಮತ ಸಿಗುವ ಸೂಚನೆ ಕಂಡುಬರುತ್ತಿದೆ. ಅದರಂತೆ ಕಾಂಗ್ರೆಸ್ ಪಾಳಯದಲ್ಲಿ ಸಂಭ್ರಮ ಮನೆಮಾಡಿದೆ. ಮತ ಎಣಿಕೆ ಮುಂದುವರಿಯುತ್ತಿರುವಂತೆ ಸಿದ್ದರಾಮಯ್ಯನವರು ಇಂದು ಬೆಳಗ್ಗೆ ಮುಖದಲ್ಲಿ ಸಂಭ್ರಮ, ಸಂತೋಷ ತುಂಬಿಕೊಂಡು ಗೆಲುವಿನ ನಗೆ ಬೀರುತ್ತಾ ಕೈ ಎತ್ತಿ ಗೆಲುವಿನ ಸಂಕೇತವನ್ನು ಸೂಚಿಸಿದರು.

ನಂತರ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ನಮ್ಮ ಅನಿಸಿಕೆ, ಲೆಕ್ಕಾಚಾರದಂತೆ ಮುನ್ನಡೆ ಸಾಧಿಸಿದೆ. ಬಿಜೆಪಿಗೆ 65ರಿಂದ 70 ಸ್ಥಾನ ಬರಬಹುದೆಂದು ಲೆಕ್ಕ ಹಾಕಿಕೊಂಡಿದ್ದೆವು, ಹೇಳಿದ್ದೆವು ಕೂಡ, ಅದೇ ರೀತಿ ಬಂದಿದೆ. ನಾವು 120ಕ್ಕಿಂತ ಜಾಸ್ತಿ ಬರುತ್ತದೆ ಎಂದು ಹೇಳಿದ್ದೆವು, ಅದೇ ತರ ಟ್ರೆಂಡ್ ಇದೆ. ಜೆಡಿಎಸ್ ಗೆ 25-26 ಬರಬಹುದು ಎಂದು ಹೇಳಿದ್ದೆವು, ಅದೇ ರೀತಿ ಟ್ರೆಂಡ್ ಇದೆ ಎಂದರು.

ಕಾಂಗ್ರೆಸ್ ಪಾರ್ಟಿ 120 ಮೇಲೆ ಸ್ಥಾನಗಳನ್ನು ತೆಗೆದುಕೊಂಡು ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರುತ್ತದೆ. ವರುಣಾದಲ್ಲಿ 8 ಸಾವಿರ ಲೀಡ್ ಇದೆ, ಮುಂದೆ ಕೂಡ ಇದೇ ರೀತಿ ಇರಬಹುದು, ಚಾಮರಾಜನಗರದಲ್ಲಿಯೂ ಪುಟ್ಟರಂಗಶೆಟ್ಟಿ ಗೆಲ್ಲುತ್ತಾರೆ ಎಂಬ ನಂಬಿಕೆಯಿದೆ. ಸೋಮಣ್ಣನವರು ಎರಡೂ ಕ್ಷೇತ್ರಗಳಲ್ಲಿ ಸೋಲುತ್ತಾರೆ ಎಂದರು.

ನರೇಂದ್ರ ಮೋದಿ, ಅಮಿತ್ ಶಾ, ಜೆ ಪಿ ನಡ್ಡಾ ಎಷ್ಟೇ ಸಲ ಬಂದು ಪ್ರಚಾರ ಮಾಡಿದರೂ ಕರ್ನಾಟಕದಲ್ಲಿ ಮತದಾರರನ್ನು ಓಲೈಸಲು ಸಾಧ್ಯವಾಗುವುದಿಲ್ಲ. ಬಿಜೆಪಿಯವರು ಭ್ರಷ್ಟಾಚಾರ, ದುರಾಡಳಿತಗಳಿಂದ ಜನರು ಬೇಸತ್ತಿದ್ದಾರೆ. ಜನ ಬದಲಾವಣೆ ಬಯಸುತ್ತಾರೆ ಎಂದು ಹೇಳುತ್ತಿದ್ದೆ, ಅದೇ ರೀತಿ ಜನ ತೀರ್ಪು ಕೊಟ್ಟಿದ್ದಾರೆ ಎನಿಸುತ್ತಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT