ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ 
ರಾಜಕೀಯ

'ಕೊತ್ವಾಲ್‌ ಬ್ರದರ್ಸ್' 'ಆ ದಿನಗಳ' ಗೂಂಡಾಗಿರಿ ಮುಂದುವರಿಕೆ: ವಿಡಿಯೋ ಬಿಡುಗಡೆ ಮಾಡಿದ BJP

ರೈತನಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ವಿರುದ್ದ ಮತ್ತೆ ಬಿಜೆಪಿ ಕಿಡಿಕಾರಿದ್ದು, "ಗುಲಾಮಿ ಕೊತ್ವಾಲ್‌ ಗ್ಯಾಂಗ್‌" ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಬೆಂಗಳೂರು: ರೈತನಿಗೆ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಂಸದ ಡಿಕೆ ಸುರೇಶ್ ವಿರುದ್ದ ಮತ್ತೆ ಬಿಜೆಪಿ ಕಿಡಿಕಾರಿದ್ದು, "ಗುಲಾಮಿ ಕೊತ್ವಾಲ್‌ ಗ್ಯಾಂಗ್‌" ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಕುಣಿಗಲ್ ತಾಲೂಕಿನ ರೈತ ಪ್ರೇಮ್ ಕುಮಾರ್ ಅವರನ್ನು ಹೆದರಿಸಿ ತಮಗೆ ಬೇಕಾದಂತೆ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದ್ದು, ಈ ಕುರಿತಂತೆ ರೈತ ಪ್ರೇಮ್ ಕುಮಾರ್ ಮಾತನಾಡಿರುವ ವಿಡಿಯೋವನ್ನು ಅಪ್ಲೋಡ್ ಮಾಡಿ ಡಿಕೆ ಸೋದರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

'ತೋಟವನ್ನು ಸುಟ್ಟುವರು ನಾವು, ನಿನ್ನನ್ನೂ ಸುಟ್ಟು ಹಾಕುವುದು ಕಷ್ಟವೇ ಎಂದು ಧಮ್ಕಿ ಹಾಕಿ ಈಗ ಕುಣಿಗಲ್ ತಾಲೂಕಿನ ರೈತ ಪ್ರೇಮ್ ಕುಮಾರ್ ಅವರನ್ನು ಹೆದರಿಸಿ ತಮಗೆ ಬೇಕಾದಂತೆ ವಿಡಿಯೋ ಮಾಡಿಸಿಕೊಂಡಿದ್ದಾರೆ ಕೊತ್ವಾಲ್ ಬ್ರದರ್ಸ್. ಡಿಸಿಎಂ ಡಿಕೆ ಶಿವಕುಮಾರ್ ಅವರೇ ಗಂಡೆದೆ ಇದ್ದರೆ ನೇರವಾಗಿ ಹೋರಾಡಿ. ಅದು ಬಿಟ್ಟು ಸೋಲುವ ಪುಕ್ಕಲತನದಲ್ಲಿ ಹೇಡಿಯಂತೆ ಪೊಲೀಸರನ್ನು ಬಳಸಿಕೊಂಡು ಅಮಾಯಕ ರೈತರನ್ನು ಬೆದರಿಸಬೇಡಿ.

ಅಧಿಕಾರವಿದೆ, ರೌಡಿಗಳ ಬಳಗವಿದೆ, ಹಣವಿದೆ ಎಂದು ಚುನಾವಣೆ ಗೆಲ್ಲಲು ಯಾವ ಮಟ್ಟಕ್ಕಾದರೂ ಇಳಿಯಲಿದ್ದೇವೆ ಎಂದು "ಗುಲಾಮಿ ಕೊತ್ವಾಲ್‌ ಗ್ಯಾಂಗ್‌" ತೋರಿಸಿಕೊಟ್ಟಿದೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಮತ್ತೊಂದು ಟ್ವೀಟ್ ನಲ್ಲಿ, 'ಕಲೆಕ್ಷನ್‌ ಏಜೆಂಟ್‌ ರಣದೀಪ್ ಸುರ್ಜೇವಾಲಾ ಅವರ ಮಹಿಳೆಯ ಕುರಿತ ಅಶ್ಲೀಲ ಹೇಳಿಕೆಗೆ ಅವರನ್ನು ಚುನಾವಣಾ ಆಯೋಗ ಚುನಾವಣಾ ಪ್ರಚಾರದಿಂದ ಬ್ಯಾನ್ ಮಾಡಿದೆ. ಇಷ್ಟಾದರೂ ಕಾಂಗ್ರೆಸ್‌ ಮೌನವಾಗಿದೆ. ಇದುವರೆಗೂ ಕ್ಷಮೆ ಕೇಳಿಲ್ಲ.

ಪದೇ ಪದೆ ಕಾಂಗ್ರೆಸ್ಸಿಗರು ಮಹಿಳೆಯರನ್ನು ಅವಮಾನಿಸುತ್ತಿದ್ದರೂ, ಯುವರಾಜ ರಾಹುಲ್ ಗಾಂಧಿ ಅವರು ಕೈ ನಾಯಕರ ವಿರುದ್ಧ ಕ್ರಮ ತೆಗೆದುಕೊಳ್ಳುವುದಿರಲಿ, ಈ ಬಗ್ಗೆ ಮಾತೇ ಆಡುತ್ತಿಲ್ಲ. ಕರ್ನಾಟಕಕ್ಕೆ ಆಗಮಿಸುತ್ತಿರುವ ರಾಹುಲ್ ಗಾಂಧಿಯವರೇ, ರಾಜ್ಯದಲ್ಲಿ ಭಾಷಣ ಮಾಡಲು ನಿಮಗೆ ಯಾವ ಯೋಗ್ಯತೆ ಇದೆ?

ನಾಡಿನ ಸ್ವಾಭಿಮಾನಿ ಮಹಿಳೆಯರು ನಿಮ್ಮನ್ನು ಕೇಳುತ್ತಿದ್ದಾರೆ ಉತ್ತರಿಸಿ. ಸುರ್ಜೇವಾಲಾ ಅವರ ಹೇಳಿಕೆಯನ್ನು ನೀವು ಬೆಂಬಲಿಸುತ್ತಿರೋ? ಸ್ತ್ರೀಯನ್ನು ಕೀಳಾಗಿ ಕಾಣುವುದೇ ಕಾಂಗ್ರೆಸ್ಸಿನ ಗ್ಯಾರಂಟಿಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಿನಲ್ಲಿ ಹಗಲು ದರೋಡೆ: 7 ಕೋಟಿ ಕದ್ದ ಖದೀಮರು; 4 ಶಂಕಿತರ ಫೋಟೋ, ಡಿಜಿ-ಐಜಿಪಿಗೆ ಪರಮೇಶ್ವರ್ ತಾಕೀತು!

ರೈತರು ಶಾಲು ಬೀಸಿದ್ದನ್ನು ನೋಡಿದರೆ ಬಿಹಾರದ ಗಾಳಿ ತಮಿಳುನಾಡಿಗೆ ಬಂದಂತೆ ಭಾಸವಾಯಿತು: ಪ್ರಧಾನಿ ಮೋದಿ

ಶಬರಿಮಲೆಯಲ್ಲಿ ಜನದಟ್ಟಣೆ: ಅಯ್ಯಪ್ಪ ಭಕ್ತರ ಸುರಕ್ಷಿತ, ಸುಗಮ ಸಂಚಾರಕ್ಕಾಗಿ ಕೇರಳಕ್ಕೆ ಕರ್ನಾಟಕ ಸರ್ಕಾರ ಮನವಿ!

"ಉಪಾಸನಾ ಕೊನಿಡೆಲಾ ಮಾತೆಲ್ಲಾ ಕೇಳ್ಬೇಡಿ; 20 ವರ್ಷಕ್ಕೆ ಮದುವೆಯಾಗಿ ಮಕ್ಕಳು ಮಾಡ್ಕೊಳಿ": Zoho ಸಂಸ್ಥಾಪಕನ ಮಾತು ಕೇಳಿ ಓಹೋ ಎಂದ ಜನ!

ನುಗ್ಗಿ ಹೊಡೆದಿದ್ದೇವೆ ಎಂಬ ಪಾಕ್ ಹೇಳಿಕೆ ಬೆನ್ನಲ್ಲೆ ಪ್ರತೀಕಾರಕ್ಕೆ ಮುಂದಾದ ಭಾರತ; ತೀವ್ರ ತಪಾಸಣೆ, ಟಾರ್ಗೆಟ್ ಫಿಕ್ಸ್, ಜಮ್ಮು-ಕಾಶ್ಮೀರದ ವೈದ್ಯರಿಗೆ ನಡುಕ!

SCROLL FOR NEXT