ಡಿ ಕೆ ಸುರೇಶ್ 
ರಾಜಕೀಯ

'ತುಕ್ಡೇ ತುಕ್ಡೇ ಗ್ಯಾಂಗ್‌ ಗುಲಾಮರು ಬಾಲ ಬಿಚ್ಚುತ್ತಿದ್ದಾರೆ; ಲೋಕಸಭೆ ಚುನಾವಣೆಗಾಗಿ ಕಾಂಗ್ರೆಸ್ ನಿಂದ ದೇಶ ವಿಭಜನೆ ತಂತ್ರ'

ಈ ಹಿಂದೆ ಕಾಂಗ್ರೆಸ್ ಪಕ್ಷ ದೇಶವನ್ನೇ ತನ್ನ ಸ್ವಂತ ಆಸ್ತಿಯಂತೆ ನೋಡುತ್ತಿತ್ತು. ಈಗ ಕೊಳ್ಳೆ ಹೊಡೆಯಲು ಉಳಿದಿರುವುದು ರಾಜ್ಯ ಮಾತ್ರ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದೆ.

ಬೆಂಗಳೂರು: ಈ ಹಿಂದೆ ಕಾಂಗ್ರೆಸ್ ಪಕ್ಷ ದೇಶವನ್ನೇ ತನ್ನ ಸ್ವಂತ ಆಸ್ತಿಯಂತೆ ನೋಡುತ್ತಿತ್ತು. ಈಗ ಕೊಳ್ಳೆ ಹೊಡೆಯಲು ಉಳಿದಿರುವುದು ರಾಜ್ಯ ಮಾತ್ರ ಎಂದು ರಾಜ್ಯ ಬಿಜೆಪಿ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಇಲ್ಲಿಯೂ ತನಗೆ ಕೊಟ್ಟಿರುವುದು ಆಡಳಿತ ಮಾಡುವ ಜವಾಬ್ದಾರಿ ಎಂಬುದನ್ನೂ ಮರೆತು, ಜನರ ತೆರಿಗೆ ಹಣದಿಂದಲೇ ನಡೆಸುವ ಯೋಜನೆಗಳನ್ನು ಮುಂದಿಟ್ಟು ಜನರನ್ನೇ ಬ್ಲಾಕ್ಮೇಲ್ ಮಾಡುವ ಹತಾಶ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಲೇವಡಿ ಮಾಡಿದೆ.

ಈ ಹಿಂದೆ ಕಾಂಗ್ರೆಸ್ ಪಕ್ಷ ದೇಶವನ್ನೇ ತನ್ನ ಸ್ವಂತ ಆಸ್ತಿಯಂತೆ ನೋಡುತ್ತಿತ್ತು.

ಈಗ ಕೊಳ್ಳೆ ಹೊಡೆಯಲು ಉಳಿದಿರುವುದು ರಾಜ್ಯ ಮಾತ್ರ. ಇಲ್ಲಿಯೂ ತನಗೆ ಕೊಟ್ಟಿರುವುದು ಆಡಳಿತ ಮಾಡುವ ಜವಾಬ್ದಾರಿ ಎಂಬುದನ್ನೂ ಮರೆತು, ಜನರ ತೆರಿಗೆ ಹಣದಿಂದಲೇ ನಡೆಸುವ ಯೋಜನೆಗಳನ್ನು ಮುಂದಿಟ್ಟು ಜನರನ್ನೇ ಬ್ಲಾಕ್ಮೇಲ್ ಮಾಡುವ ಹತಾಶ ಪ್ರಯತ್ನಗಳನ್ನು… pic.twitter.com/WJfEjTovAb

— BJP Karnataka (@BJP4Karnataka) February 2, 2024 p>


ದೇಶ ಒಡೆಯಲು ಐಎನ್ ಸಿ ಕಾಂಗ್ರೆಸ್  ಇದುವರೆಗೂ ಮಾಡಿರುವ ಕುತಂತ್ರಗಳು :

ಜಿನ್ನಾ-ನೆಹರು ಕುತಂತ್ರದ ಫಲ ಪಾಕಿಸ್ಥಾನ ಸೃಷ್ಟಿ
ದೇಶ ಒಡೆಯಲು ನೆಹರು ಅವರಿಂದ 370ನೇ ವಿಧಿ ಗಿಫ್ಟ್
ಖಲಿಸ್ಥಾನಿ ಉಗ್ರ ಭಿಂದ್ರನ್‌ ವಾಲೆಗೆ ಇಂದಿರೆಯ ಬಲ
ಯಾತ್ರೆ ಮಾಡುತ್ತಾ ದೇಶ ವಿರೋಧಿಗಳನ್ನು ಒಂದುಗೂಡಿಸಿದ ರಾಹುಲ್
ಸಂಸದ ಡಿ. ಕೆ. ಸುರೇಶ್‌ರಿಂದ ಪ್ರತ್ಯೇಕ ರಾಷ್ಟ್ರಕ್ಕಾಗಿ ಬೇಡಿಕೆ

ಕಾಂಗ್ರೆಸ್ಸಿನ ತುಕ್ಡೇ ತುಕ್ಡೇ ಗ್ಯಾಂಗ್‌ ಗುಲಾಮರು ಲೋಕಸಭಾ ಚುನಾವಣೆ ಸಮೀಪ ಬರುತ್ತಿದ್ದಂತೆ, ಬಾಲ ಬಿಚ್ಚುತ್ತಿದ್ದಾರೆ. ಸೋತು ಸುಣ್ಣವಾಗಿರುವ ಕಾಂಗ್ರೆಸ್ ಈಗ ದೇಶ ವಿಭಜಿಸುವ ಕುತಂತ್ರಕ್ಕೆ ಇಳಿಯುತ್ತಿದೆ ಎಂದು ಬಿಜೆಪಿ ಕಿಡಿ ಕಾರಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT