ಸೋಮಣ್ಣ, ಶ್ರೀರಾಮುಲು ಮತ್ತು ವಿಜಯೇಂದ್ರ  
ರಾಜಕೀಯ

ಕಾಂಗ್ರೆಸ್ ಒಡನಾಟ ಸೋಮಣ್ಣಗೆ ಮುಳುವು; ರಾಮುಲು ನಿಷ್ಠೆ ಮೇಲೆ ಸಂದೇಹ; ಗತ್ಯಂತರವಿಲ್ಲದ BJPಗೆ ವಿಜಯೇಂದ್ರ ಆಸರೆ?

ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಕೊಂಡೊಯ್ಯುವ ನಾಯಕತ್ವದ ಗುಣ ಯತ್ನಾಳ್ ಅವರಿಗೆ ಇದೆಯೇ ಎಂದು ಪಕ್ಷದ ಒಳಗಿನವರು ಪ್ರಶ್ನಿಸುತ್ತಾರೆ.

ಬೆಂಗಳೂರು: ಬಿಜೆಪಿಯೊಳಗಿನ ಆಂತರಿಕ ಗೊಂದಲ ಈ ವಾರ ಬಗೆಹರಿಯುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಫೆ.20ರೊಳಗೆ ಅಂತಿಮ ನಿರ್ಣಯ ಹೊರಬೀಳುವ ಸಾಧ್ಯತೆ ಇದ್ದು, ಪಕ್ಷದ ನಾಯಕರ ವಿರೋಧದ ನಡುವೆಯೇ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವ ನಿರೀಕ್ಷೆಯಿದೆ.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪಕ್ಷದ ನಾಯಕತ್ವದ ಮೇಲೆ ನಿರಂತರ ವಾಗ್ದಾಳಿ ನಡೆಸುತ್ತಿರುವುದು ಅಸಮಾಧಾನ ಸೃಷ್ಟಿಸಿದೆ. ಆದರೆ, ಇತ್ತೀಚೆಗಷ್ಟೇ ಅವರಿಗೆ ನೀಡಲಾದ ಶೋಕಾಸ್ ನೋಟಿಸ್ ಅವರ ಬಂಡಾಯಕ್ಕೆ ಕಡಿವಾಣ ಹಾಕಿದಂತಿದೆ, ಆದರೆ ಇದಕ್ಕೆ ಪ್ರತಿಕ್ರಿಯಿಸಲು ಯತ್ನಾಳ್ ನಿರಾಕರಿಸಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲುವಿನತ್ತ ಕೊಂಡೊಯ್ಯುವ ನಾಯಕತ್ವದ ಗುಣ ಯತ್ನಾಳ್ ಅವರಿಗೆ ಇದೆಯೇ ಎಂದು ಪಕ್ಷದ ಒಳಗಿನವರು ಪ್ರಶ್ನಿಸುತ್ತಾರೆ. ಅವರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೆ, ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ವಿಜಯೇಂದ್ರ ನೀಡಿದಂತಹ ಚುನಾವಣಾ ಯಶಸ್ಸನ್ನು ಅವರು ಗಳಿಸಬಹುದೇ?" ಎಂದು ಹಿರಿಯ ಮುಖಂಡರೊಬ್ಬರು ಪ್ರಶ್ನಿಸಿದರು. ವಿಜಯೇಂದ್ರ ಬಿಜೆಪಿಗೆ 18+2 ಸ್ಥಾನಗಳನ್ನು ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಏತನ್ಮಧ್ಯೆ, ಇನ್ನೊಬ್ಬ ಸ್ಪರ್ಧಿ, ಕೇಂದ್ರ ಸಚಿವ ವಿ ಸೋಮಣ್ಣ ಅವರ ವಯಸ್ಸು ಮತ್ತು ನಿಷ್ಠೆಯಿಂದ ಸಂದೇಹ ಎದುರಿಸಿತ್ತಿದ್ದಾರೆ. 72 ನೇ ವಯಸ್ಸಿನಲ್ಲಿ, ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಅವರ ಪ್ರಭಾವಳಿ ಕುಂದಿಸುವ ಸಾಮರ್ಥ್ಯ ಸೋಮಣ್ಣ ಅವರಿಗಿದೆಯೇ ಎಂಬುದು ಬಹುದೊಡ್ಡ ಪ್ರಶ್ನೆಯಾಗಿದೆ. ರಾಜಕೀಯ ಭದ್ರತೆಗಾಗಿ ಕಾಂಗ್ರೆಸ್ ಜೊತೆಗಿನ ಅವರ ಹಿಂದಿನ ಒಡನಾಟಗಳು ದೃಢವಾದ ಬಿಜೆಪಿ ನಾಯಕರಾಗಿ ಅವರ ವಿಶ್ವಾಸಾರ್ಹತೆಯ ಬಗ್ಗೆ ಅನುಮಾನಗಳನ್ನು ಹುಟ್ಟುಹಾಕುತ್ತವೆ.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಆರೋಗ್ಯದ ಕಾರಣದಿಂದ ನಾಯಕತ್ವದ ರೇಸ್ ನಿಂದ ಹೊರಗುಳಿದಿದ್ದಾರೆ, ಏಕೆಂದರೆ ಯಾವುದೇ ಲಿಂಗಾಯತ ನಾಯಕನ ಬದಲಿಗೆ ಮತ್ತೊಂದು ಲಿಂಗಾಯತ ನಾಯಕನನ್ನೇ ಆಯ್ಕೆಮಾಡಬೇಕಾಗುತ್ತದೆ. ಈ ಮಾನದಂಡವು ಕಾರ್ಕಳದ ಯುವ ಕರಾವಳಿ ನಾಯಕ ಸುನಿಲ್ ಕುಮಾರ್ ಅವರನ್ನು ಅವಕಾಶ ವಂಚಿತರನ್ನಾಗಿಸುತ್ತಿದೆ. ಅವರು ರಾಜ್ಯ ಮಟ್ಟಕ್ಕಿಂತ ಸ್ಥಳೀಯ ರಾಜಕೀಯದ ಮೇಲೆ ಕೇಂದ್ರೀಕರಿಸಲು ಆದ್ಯತೆ ನೀಡುತ್ತಾರೆ.

ಪಕ್ಷದ ಲೆಕ್ಕಾಚಾರದ ಪ್ರಕಾರ ಮತ್ತೊಬ್ಬ ಪ್ರಭಾವಶಾಲಿ ಎಸ್ಟಿ ನಾಯಕ ಬಿ ಶ್ರೀರಾಮುಲು ಆದ್ಯತೆಯಾಗಿದ್ದಾರೆ. ಆದರೆ ವಿಶಾಲವಾದ ಚುನಾವಣಾ ಕಾರ್ಯತಂತ್ರಕ್ಕೆ ನಿಷ್ಠರಾಗಿರುವುದು ಬಿಜೆಪಿಗೆ ಅವಶ್ಯಕ. ಹಳೇ ಮೈಸೂರು ಭಾಗದಲ್ಲಿ ಈಗ ಪ್ರಮುಖ ಮಿತ್ರರಾಗಿರುವ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರ ಪಾತ್ರವೂ ಅಷ್ಟೇ ಮಹತ್ವದ್ದಾಗಿದೆ.

ಐತಿಹಾಸಿಕವಾಗಿ ಬಿಜೆಪಿ ಈ ಪ್ರದೇಶದಲ್ಲಿ ದುರ್ಬಲವಾಗಿದೆ ಹೀಗಾಗಿ, ಈ ಪ್ರದೇಶದಲ್ಲಿ ಪಕ್ಷವನ್ನು ಬಲಿಷ್ಠಗೊಳಿಸಲು ಹಿರಿಯ ಒಕ್ಕಲಿಗ ನಾಯಕರಿಗೆ ಅವಕಾಶ ನೀಡುವ ಅಗತ್ಯವಿದೆ. ಮಂಡ್ಯ ಮತ್ತು ಹಳೇ ಮೈಸೂರು ಭದ್ರಕೋಟೆಗಳಲ್ಲಿ ಹೆಚ್‌ಡಿಕೆ ಅವರ ಪ್ರಭಾವವನ್ನು ಪಕ್ಷವು ಲಾಭ ಮಾಡಿಕೊಳ್ಳಬೇಕು, ಎಂದು ಬಿಜೆಪಿ ಮೂಲಗಳು ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026 Qualifier 1: GT ವಿರುದ್ದ ಸ್ಫೋಟಕ ಬ್ಯಾಟಿಂಗ್, ಇತಿಹಾಸ ಬರೆದ RCB

ಬಕ್ರೀದ್ ಮೇಕೆ ವಿಷಯವಾಗಿ ಮುಂಬೈ ಸೊಸೈಟಿಯಲ್ಲಿ ಭಾರಿ ವಿವಾದ; VHP ಕಾರ್ಯಕರ್ತರ ಮೇಲೆ ಬ್ಲೇಡ್ ನಿಂದ ಹಲ್ಲೆ!

IPL 2026 Qualifier 1: ರಜತ್ ಪಟಿದಾರ್ ಸ್ಫೋಟಕ ಬ್ಯಾಟಿಂಗ್, GTಗೆ ಗೆಲ್ಲಲು 255 ರನ್ ಬೃಹತ್ ಗುರಿ ನೀಡಿದ RCB

ಬೆಂಗಳೂರು: ದೃಷ್ಟಿಹೀನ ಸ್ನೇಹಿತೆ ಬಳಿ ಇದ್ದ 49.5 ಲಕ್ಷ ರೂ. ನಗದು, ಚಿನ್ನ ಕದ್ದ ಖದೀಮ ದಂಪತಿ ಬಂಧನ!

SCROLL FOR NEXT