ಶಾಸಕ ಮುನಿರತ್ನ ಮತ್ತು ಕುಸುಮಾ ಹನುಮಂತರಾಯಪ್ಪ 
ರಾಜಕೀಯ

ಕುಸುಮ ಡಿಕೆಶಿ ಪಕ್ಕದಲ್ಲೇ ಇರ್ತಾರೆ, ಡಿ.ಕೆ.ರವಿ ಬದುಕಿದ್ದರೆ ನಾನು ಜೈಲಿಗೆ ಹೋಗ್ತಿರಲಿಲ್ಲ: ಶಾಸಕ ಮುನಿರತ್ನ

ಡಿ.ಕೆ. ರವಿ ಬದುಕಿದ್ದಿದರೆ ನಾನು ಜೈಲಿಗೆ ಹೋಗುತ್ತಿರಲಿಲ್ಲ. ಈ ಪರಿಸ್ಥಿತಿಯೂ ಎದುರಾಗುತ್ತಿರಲಿಲ್ಲ. ಕುಸುಮಾ ಅವರಿಗೆ ಶಾಸಕರಾಗುವ ಹುಚ್ಚು ಹಿಡಿದಿದೆ. ಹೀಗಾಗಿ, ಡಿ. ಕೆ.ಶಿವಕುಮಾರ್ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ಬೆಂಗಳೂರು: ಒಂದು ಹೆಣ್ಣಿಗೋಸ್ಕರ ಮತ್ತು ಆ ಹೆಣ್ಣನ್ನು ಎಂಎಲ್‌ಎ ಮಾಡಬೇಕೆಂಬ ಜಿದ್ದಿಗೆ ಬಿದ್ದು ಇಡೀ ಕ್ಷೇತ್ರವನ್ನು ಹಾಳು ಮಾಡಿದ್ದಾರೆ ಎಂದು ರಾಜರಾಜೇಶ್ವರಿ ನಗರದ ಶಾಸಕ ಮುನಿರತ್ನ ಅವರು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರನ್ನು ಹಿಂದೆ ತಳ್ಳಿ ಚುನಾವಣೆಯಲ್ಲಿ ಪರಾಜಿತಗೊಂಡ ಅಭ್ಯರ್ಥಿ ಕುಸುಮಾ ಕರೆದುಕೊಂಡು ಶಿವಕುಮಾರ್ ಪಾದಯಾತ್ರೆ ಮಾಡಿ ಸಾರ್ವಜನಿಕ ಕುಂದು ಕೊರತೆ ಸ್ವೀಕರಿಸುತ್ತಾರೆ ಎಂದರೆ ಏನು ಹೇಳಬೇಕು. ಒಂದು ಹೆಣ್ಣಿಗೋಸ್ಕರ ಈ ಹೋಗುವುದಾ ಎಂದು ಪ್ರಶ್ನಿಸಿದರು.

ಇಷ್ಟೊಂದು ಜಿದ್ದಿಗೆ ಬಿದ್ದಿರುವುದಕ್ಕೆ ಎರಡೇ ಕಾರಣಗಳಿವೆ. ಒಂದು, ಈ ಕುಸುಮಾ ಅವರನ್ನು ಶಾಸಕಿ ಮಾಡಬೇಕು. ಇನ್ನೊಂದು ಡಿ.ಕೆ.ಸುರೇಶ್ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಿದ್ದಕ್ಕೆ ಸೇಡು ತೀರಿಸಿಕೊಳ್ಳಬೇಕು. ಸರ್ಕಾರಿ ಕಾರ್ಯಕ್ರಮಕ್ಕೆ ಶಾಸಕರನ್ನು ಆಹ್ವಾನ ನೀಡಲಾಗಿದೆ ಎಂದು ಕುಸುಮಾ ಹೇಳಿದ್ದಾರೆ. ಸರ್ಕಾರಿ ಆಹ್ವಾನದ ಬಗ್ಗೆ ಹೇಳುವುದಕ್ಕೆ ಇವರು ಯಾರೆಂದು ಪ್ರಶ್ನಿಸಿದರು.

ಡಿ.ಕೆ. ರವಿ ಬದುಕಿದ್ದಿದರೆ ನಾನು ಜೈಲಿಗೆ ಹೋಗುತ್ತಿರಲಿಲ್ಲ. ಈ ಪರಿಸ್ಥಿತಿಯೂ ಎದುರಾಗುತ್ತಿರಲಿಲ್ಲ. ಕುಸುಮಾ ಅವರಿಗೆ ಶಾಸಕರಾಗುವ ಹುಚ್ಚು ಹಿಡಿದಿದೆ. ಹೀಗಾಗಿ, ಡಿ. ಕೆ.ಶಿವಕುಮಾರ್ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮೊಟ್ಟೆ ಹೊಡಿಸಿ, ರೇಪ್ ಕೇಸ್ ಹಾಕಿಸಿ ಜೈಲಿಗೆ ಕಳುಹಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ, ರಾಜಣ್ಣ, ರೇವಣ್ಣರಿಗೆ ಹನಿ ಟ್ರ್ಯಾಪ್ ಮಾಡಿಸಿದ್ದಾರೆ. ಎಷ್ಟು ಮನೆ ಹಾಳು ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಆರ್‌ಎಸ್‌ಎಸ್‌ 100ನೇ ವರ್ಷದ ಕಾರ್ಯಕ್ರಮ ಮುಗಿಸಿಕೊಂಡು ಬಂದರೆ, ಶಾಸಕರನ್ನು ಏಯ್ ಕರಿ ಟೋಪಿ ಎಂದು ಉಪ ಮುಖ್ಯಮಂತ್ರಿ ಕರೆಯುತ್ತಾರೆ. ಇದು ಆರ್‌ಆರ್ ನಗರ ಕ್ಷೇತ್ರದ ಮತದಾರರಿಗೆ ಮಾಡಿದ ಅವಮಾನವಾಗಿದೆ. ಕನಕಪುರದ ದೌಜನ್ಯವನ್ನು ಬೆಂಗಳೂರಿನಲ್ಲೂ ಮಾಡುತ್ತಿದ್ದಾರೆ ಎಂದು ದೂರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕರೂರ್ ಕಾಲ್ತುಳಿತ ಪ್ರಕರಣ ಸಿಬಿಐಗೆ ವರ್ಗಾಯಿಸಿದ ಸುಪ್ರೀಂ ಕೋರ್ಟ್

Israel-Gaza war: 7 ಒತ್ತೆಯಾಳುಗಳ ರೆಡ್ ಕ್ರಾಸ್‌ಗೆ ಹಸ್ತಾಂತರಿಸಿದ ಹಮಾಸ್, ಯುದ್ಧ ಅಂತ್ಯ ಎಂದು ಟ್ರಂಪ್ ಘೋಷಣೆ

'ನೆಹರು ಮರಿ ಮೊಮ್ಮಗಳ ಹೆಸರು ಇಟ್ಕೊಂಡಿರುವ ನಿಮ್ಮಿಂದ RSS ಬ್ಯಾನ್ ಅಸಾಧ್ಯ: ಜಮೀರ್‌ನ ಬಿಳಿ ಟೋಪಿ ಸಾಬಣ್ಣ ಅಂತ ಕರಿತೀರಾ?'

ಸಮೀಕ್ಷೆಗೆ ಸಿಬ್ಬಂದಿ ನಿಯೋಜನೆ: ತುರ್ತು ಪರಿಸ್ಥಿತಿ ನಿಭಾಯಿಸುವುದೇ ಸವಾಲು: ಗ್ರೆಟರ್ ಬೆಂಗಳೂರು ಪ್ರಾಧಿಕಾರ

Tamil Nadu: ವಿಷಯುಕ್ತ 'ಕೋಲ್ಡ್ರಿಫ್' ಸಿರಫ್ : ಸ್ರೆಸನ್ ಫಾರ್ಮಾ ಕಂಪನಿಯ ಲೈಸನ್ಸ್ ರದ್ದುಗೊಳಿಸಿ, ಬಾಗಿಲು ಮುಚ್ಚಿಸಿದ ಸ್ಟಾಲಿನ್ ಸರ್ಕಾರ!

SCROLL FOR NEXT