ಸಾಂದರ್ಭಿಕ ಚಿತ್ರ  
ರಾಜಕೀಯ

EVM ನಿಷೇಧ: ಕರ್ನಾಟಕ ಸರ್ಕಾರದ ಹೊಸ ನಿರ್ಧಾರ ಚುನಾವಣಾ ಸಮಗ್ರತೆಯ ಚರ್ಚೆಗೆ ನಾಂದಿ!

ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳನ್ನು ನಿಷೇಧಿಸಿ ಕಾಗದದ ಮತಪತ್ರಗಳಿಗೆ ಮರಳುತ್ತಿದೆ, ಇದು ಚುನಾವಣಾ ಸಮಗ್ರತೆಯ ಕುರಿತಾದ ರಾಷ್ಟ್ರೀಯ ಚರ್ಚೆಗೆ ತಿರುವು ನೀಡಿದೆ.

ಬೆಂಗಳೂರು: 1982 ರಲ್ಲಿ ಭಾರತದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳನ್ನು (ಇವಿಎಂ) ಮೊದಲು ಪರಿಚಯಿಸಲಾಯಿತು. ಆದರೆ ಈಗ ಕರ್ನಾಟಕವು ದೇಶದ ಉಳಿದ ಭಾಗಗಳಿಗಿಂತ ಮೊದಲ ಬಾರಿಗೆ ಇವಿಎಂ ಮತ ಯಂತ್ರಗಳ ಜೊತೆಗೆ ಸಂಬಂಧ ಕಡಿದುಕೊಳ್ಳುತ್ತಿದೆ.

ರಾಜ್ಯ ಸರ್ಕಾರವು ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಇವಿಎಂಗಳನ್ನು ನಿಷೇಧಿಸಿ ಕಾಗದದ ಮತಪತ್ರಗಳಿಗೆ ಮರಳುತ್ತಿದೆ, ಇದು ಚುನಾವಣಾ ಸಮಗ್ರತೆಯ ಕುರಿತಾದ ರಾಷ್ಟ್ರೀಯ ಚರ್ಚೆಗೆ ತಿರುವು ನೀಡಿದೆ.

ಇವಿಎಂಗಳು ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಂಡಿವೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಘೋಷಿಸಿದ್ದಾರೆ. ಮಹಾರಾಷ್ಟ್ರ ಚುನಾವಣೆಯ ಬಗ್ಗೆ ವಿವರಿಸಿ ಅಂತಿಮ ಹಂತದಲ್ಲಿ ಅಸಹಜವಾಗಿ ಹೆಚ್ಚಿನ ಸಂಖ್ಯೆಯ ಮತಗಳು ಚಲಾವಣೆಯಾಗಿವೆ ಎಂದು ವರದಿಯಾಗಿದೆ ಎಂದಿದ್ದಾರೆ.

ಭಾರತದ ಚುನಾವಣಾ ಆಯೋಗ (ಇಸಿಐ) "ದಪ್ಪ ಚರ್ಮದ ಮತ್ತು ದುರಹಂಕಾರಿ"ಯಾಗಿ ಬೆಳೆಯುತ್ತಿದೆ ಎಂದು ಪಾಟೀಲ್ ಆರೋಪಿಸಿದರು. ಪ್ರಜಾಪ್ರಭುತ್ವದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಈ ನಿರ್ಧಾರದ ಅರ್ಥ ಮುಂಬರುವ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗಳಲ್ಲಿ, ಕರ್ನಾಟಕದ ಸುಮಾರು ಶೇ. 60 ರಷ್ಟು ಮತದಾರರು ಕೈಯಿಂದ ಮತ ಚಲಾಯಿಸಲಿದ್ದಾರೆ.

ಇವಿಎಂ ಯಂತ್ರಗಳ ಬಳಕೆ ನಂತರದಶಕದಲ್ಲಿಯೇ ಭಾರತದಲ್ಲಿ ಮೊದಲ ಬಾರಿ ಕಾಗದದ ಮತದಾನದ ಪ್ರಯೋಗ ಇದಾಗಿದ್ದು, ಇವಿಎಂಗಳ ಮೇಲಿನ ಅಪನಂಬಿಕೆ ಈಗಾಗಲೇ ಹೆಚ್ಚಿರುವ ಸಮಯದಲ್ಲಿ ತಾವು ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇವೆ ಎಂದು ಅವರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.

ಹಲವಾರು ಪಾಶ್ಚಿಮಾತ್ಯ ಪ್ರಜಾಪ್ರಭುತ್ವಗಳು ಕೂಡ ಇವಿಎಂ ನಿಷೇಧಿಸಿ ಮತ ಪತ್ರ ಬಳಕೆಗೆ ಮುಂಜಾಗಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ. ಜರ್ಮನಿ, ನೆದರ್‌ಲ್ಯಾಂಡ್ಸ್ ಮತ್ತು ಐರ್ಲೆಂಡ್‌ನಂತಹ ದೇಶಗಳು ಪಾರದರ್ಶಕತೆಯ ಕಾಳಜಿಯಿಂದಾಗಿ ಎಲೆಕ್ಟ್ರಾನಿಕ್ ಮತದಾನದಿಂದ ದೂರ ಉಳಿದಿವೆ.

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಒಂದು ಕಾಲದಲ್ಲಿ ಎಲೆಕ್ಟ್ರಾನಿಕ್ ಮತದಾನದ ಪ್ರವರ್ತಕನಾಗಿತ್ತು ಭಾರತ, ಆದರೆ ಈಗ ರಾಜಕೀಯವಾಗಿ ಪ್ರಭಾವಶಾಲಿಯಾಗಿರುವ ರಾಜ್ಯಗಳು ಇವಿಎಂ ಯಂತ್ರಗಳ ಕಾರ್ಯ ನಿರ್ವಹಣೆ ಬಗ್ಗೆ ಪ್ರಶ್ನೆ ಎತ್ತುತ್ತಿವೆ.

ಚುನಾವಣಾ ಪಾರದರ್ಶಕತೆ ಬಗ್ಗೆ ಮಾತನಾಡಿದ ಕಾರ್ಯಕರ್ತ ವೆಂಕಟೇಶ್ ನಾಯಕ್ ಕರ್ನಾಟಕ ಸಚಿವ ಸಂಪುಟದ ಈ ಕ್ರಮವು ವಿರೋಧ ಪಕ್ಷಗಳ 'ಇವಿಎಂ ಹಟಾವೋ' ಬೇಡಿಕೆಯ ಕಡೆಗೆ ಮೊದಲ ಪ್ರಾಯೋಗಿಕ ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.

ಇವಿಎಂ ವಿರೋಧಿ ಅಭಿಯಾನದ ಪ್ರಮುಖ ಧ್ವನಿಯಾದ ನಿವೃತ್ತ ಐಎಎಸ್ ಅಧಿಕಾರಿ ಎಂಜಿ ದೇವಸಹಾಯಂ ಕರ್ನಾಟಕದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. "2024 ರ ಚುನಾವಣೆಗಳಿಗೆ ಮುಂಚಿತವಾಗಿ ನಾವು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇವೆ ಎಂದಿದ್ದಾರೆ.

ಅವರು ನಮ್ಮನ್ನು ನಿರ್ಲಕ್ಷಿಸಿದ್ದಾರೆ. ಈಗ ಕನಿಷ್ಠ ಸ್ಥಳೀಯ ಚುನಾವಣೆಗಳಿಗೆ, ಜನರಿಗೆ ಪಾರದರ್ಶಕತೆ ಸಿಗುತ್ತದೆ. ಆದರೆ ಮತದಾರರ ನಂಬಿಕೆಯನ್ನು ಪುನಃಸ್ಥಾಪಿಸಬೇಕಾದರೆ ಇದು ಎಲ್ಲಾ ಚುನಾವಣೆಗಳಿಗೂ ವಿಸ್ತರಿಸಬೇಕು ಎಂದಿದ್ದಾರೆ.

ಇವಿಎಂಗಳು ಸುರಕ್ಷಿತವಾಗಿವೆ, ವಿವಿಪಿಎಟಿ ಪೇಪರ್ ಟ್ರಯಲ್‌ನಿಂದ ಬೆಂಬಲಿತವಾಗಿವೆ ಎಂದು ಇಸಿಐ ತಿಳಿಸಿದೆ. ಸುಪ್ರೀಂ ಕೋರ್ಟ್ ಪದೇ ಪದೇ ಅವುಗಳ ವಿಶ್ವಾಸಾರ್ಹತೆಯನ್ನು ಎತ್ತಿಹಿಡಿದಿದೆ, ಆದರೆ ಅನುಮಾನಗಳು ಸಾಯುತ್ತಿಲ್ಲ ಎಂದಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ 'ಮತ ಚೋರಿ' ಬಗ್ಗೆ ಪ್ರಕಟವಾದ ಸುದ್ದಿಗಳು ಇದಕ್ಕೆ ಮತ್ತಷ್ಟು ಪುಷ್ಠಿ ನೀಡುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗೋವಾ ನೈಟ್ ಕ್ಲಬ್​ನಲ್ಲಿ ಭೀಕರ ಅಗ್ನಿ ದುರಂತ: ಪ್ರವಾಸಿಗರು ಸೇರಿ 25 ಮಂದಿ ಸಜೀವ ದಹನ, ತನಿಖೆಗೆ ಆದೇಶ

ಕಾಂಗ್ರೆಸ್ ಕುರ್ಚಿ ಕದನ: ಸೋನಿಯಾ ಗಾಂಧಿ ನೇತೃತ್ವದ ಮಹತ್ವದ ಸಭೆ, ತೆಗೆದುಕೊಂಡ ನಿರ್ಧಾರವೇನು..?

ಗೋವಾ ನೈಟ್ ಕ್ಲಬ್​ ಅಗ್ನಿ ದುರಂತ: ಪ್ರಧಾನಿ ಮೋದಿ, ರಾಷ್ಟ್ರಪತಿ ತೀವ್ರ ಸಂತಾಪ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಎಸ್‌ಸಿ-ಎಸ್‌ಟಿ ಕೋಟಾ ಹೆಚ್ಚಳಕ್ಕೆ ಪ್ರಧಾನಿ ಸಹಾಯ ಕೋರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಉಗ್ರಪ್ಪ ಒತ್ತಾಯ

ಮುಂದಿನ ವರ್ಷದಿಂದ 1 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ: ಮಧು ಬಂಗಾರಪ್ಪ

SCROLL FOR NEXT