ಆರೋಗ್ಯ ಸಚಿವ ಯು.ಟಿ.ಖಾದರ್ 
ರಾಜಕೀಯ

ವಿಪಕ್ಷ ಶಾಸಕರ ವಿರುದ್ಧ ಮಾತ್ರವೇ ಕ್ರಮವೇಕೆ: ಸ್ಪೀಕರ್ ಯು.ಟಿ ಖಾದರ್ ವಿರುದ್ಧ BJP ಪಕ್ಷಪಾತ ಆರೋಪ

ರಾಜ್ಯಪಾಲರು ಸದನದಿಂದ ಹೊರಬಂದಾಗ, ಸ್ಪೀಕರ್ ಸೇರಿದಂತೆ ಯಾರೂ ಅವರೊಂದಿಗೆ ಇರಲಿಲ್ಲ. ರಾಜ್ಯಪಾಲರು ಸದನದಿಂದ ಓಡಿಹೋದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಇದು ರಾಜ್ಯದ ರಾಜ್ಯಪಾಲರಿಗೆ ಮಾಡಿದ ಅವಮಾನ.

ಬೆಂಗಳೂರು: ಸದನದ ಕಲಾಪಕ್ಕೆ ಅಡ್ಡಿಪಡಿಸಿದ್ದಕ್ಕೆ ವಿರೋಧ ಪಕ್ಷಗಳ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರು, ರಾಜ್ಯಪಾಲರ ಅವಮಾನಿಸಿದ ಕಾಂಗ್ರೆಸ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಬಿಜೆಪಿ ಹೇಳಿದ್ದು, ಪಕ್ಷಪಾತದ ನಡೆಸುತ್ತಿರುವುದಾಗಿ ಆರೋಪ ಮಾಡಿದ್ದಾರೆ.

ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ, ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಕಾಂಗ್ರೆಸ್ ಶಾಸಕರು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯಪಾಲರು ಸದನದಿಂದ ಹೊರಬಂದಾಗ, ಸ್ಪೀಕರ್ ಸೇರಿದಂತೆ ಯಾರೂ ಅವರೊಂದಿಗೆ ಇರಲಿಲ್ಲ. ರಾಜ್ಯಪಾಲರು ಸದನದಿಂದ ಓಡಿಹೋದರು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದ್ದಾರೆ. ಇದು ರಾಜ್ಯದ ರಾಜ್ಯಪಾಲರಿಗೆ ಮಾಡಿದ ಅವಮಾನ. ಕೆಲವು ಕಾಂಗ್ರೆಸ್ ಶಾಸಕರು ರಾಜ್ಯಪಾಲರು ಸದನದಿಂದ ಹೊರಹೋಗದಂತೆ ತಡೆಯಲು ಪ್ರಯತ್ನಿಸಿದಾಗ, ಸ್ಪೀಕರ್ ಆಗಿ ನೀವು ಕ್ರಮ ಕೈಗೊಳ್ಳಬೇಕಿತ್ತು. ಘಟನೆಗೆ ಸಾಕ್ಷಿಯಾಗಿ ವೀಡಿಯೊಗಳು ನಮ್ಮಲ್ಲಿವೆ. ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದರು.

ನಿಯಮದ ಪ್ರಕಾರ, ಸದನದ ಮುಖ್ಯಸ್ಥರು 24 ಗಂಟೆಗಳ ಒಳಗೆ ಕ್ರಮ ಕೈಗೊಳ್ಳಬೇಕು. ಆದರೆ ಇಲ್ಲಿ, 24 ಗಂಟೆಗಳ ನಂತರವೂ ಸ್ಪೀಕರ್ ಯಾವುದೇ ಕ್ರಮ ಕೈಗೊಂಡಿಲ್ಲ. ಸ್ಪೀಕರ್ ಆಡಳಿತ ಪಕ್ಷದ ಶಾಸಕರ ಪರವಾಗಿ ನಿಂತಿದ್ದು, ಈ ಮೂಲಕ ಪಕ್ಷಪಾತ ಮಾಡುತ್ತಿದ್ದಾರೆಂದು ಆರೋಪಿಸಿದರು.

ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್ ಅವರು ಮಾತನಾಡಿ, ಸದನದ ಶಿಷ್ಟಾಚಾರವನ್ನು ಪಾಲಿಸುವುದು ಸದಸ್ಯರ ಜವಾಬ್ದಾರಿ. ಆದರೆ, ಇದನ್ನು ಉಲ್ಲಂಘಿಸಲಾಗಿದೆ. "ನೀವು (ಖಾದರ್) 2023 ರಲ್ಲಿ ಸ್ಪೀಕರ್ ಆದಿರಿ ಮತ್ತು ನಿಮ್ಮ ಮೊದಲ ಅಧಿವೇಶನದಲ್ಲಿ, ಸದನದಲ್ಲಿ ಗದ್ದಲ ಸೃಷ್ಟಿಸಿದ್ದಕ್ಕಾಗಿ ಒಂಬತ್ತು ಬಿಜೆಪಿ ಶಾಸಕರನ್ನು ಅಮಾನತುಗೊಳಿಸಿದ್ದೀರಿ. ಕಳೆದ ವರ್ಷ, ಬಿಜೆಪಿಯ 18 ​​ಶಾಸಕರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಲಾಯಿತು. ಈಗ, ನೀವೇ ಆಡಳಿತಾರೂಢ ಕಾಂಗ್ರೆಸ್ ಶಾಸಕರು ಅಶಿಸ್ತಿನಂತೆ ವರ್ತಿಸಲು ಮತ್ತು ರಾಜ್ಯಪಾಲರನ್ನು ಅವಮಾನಿಸಲು ಅವಕಾಶ ಮಾಡಿಕೊಟ್ಟಿದ್ದೀರಿ. ಕಾಂಗ್ರೆಸ್ ಶಾಸಕರು ಒತ್ತಾಯಿಸಿದಾಗಲೆಲ್ಲಾ ನೀವು ಬಿಜೆಪಿ ಸದಸ್ಯರನ್ನು ತಕ್ಷಣ ಅಮಾನತುಗೊಳಿಸುತ್ತೀರಿ. ಸ್ಪೀಕರ್ ಸರ್ಕಾರದ ಪರವಾಗಿ ಮಾತ್ರ ಮಾತನಾಡುತ್ತಾರೆಂದು ಆರೋಪಿಸಿದರು.

ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದದಿದ್ದಾಗ, ಆಡಳಿತಾರೂಢ ಕಾಂಗ್ರೆಸ್ ಅವರನ್ನು ಅವಮಾನಿಸಿತು. ಅವರು ಮತ್ತೆ ವಿಧಾನಸಭೆಯ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾರೆಯೇ? ಎಂದು ಪ್ರಶ್ನಿಸಿದರು.

ಶಾಸಕ ಸುರೇಶ್ ಕುಮಾರ್ ಅವರು ಮಾತನಾಡಿ, ಆ ದಿನ ರಾಜ್ಯಪಾಲರಿಗೆ ಏನಾದರೂ ಕೆಟ್ಟದು ಸಂಭವಿಸಿದ್ದರೆ ಏನಾಗುತ್ತಿತ್ತು? ಎಂದು ಪ್ರಶ್ನಿಸಿದರು.

ಈ ವೇಳೆ ಮಾತನಾಡಿದ ಖಾದರ್ ಅವರು, ಸದನದ ಘನತೆಯನ್ನು ಗೌರವಿಸುವ ವಿಷಯಕ್ಕೆ ಬಂದಾಗ ಪಕ್ಷ ರಾಜಕೀಯವನ್ನು ಮೀರಿ ನಿಲ್ಲಬೇಕೆಂದು ಶಾಸಕರಿಗೆ ಸಲಹೆ ನೀಡಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

45 ಮಂದಿಗೆ ಪದ್ಮಶ್ರೀ ಪ್ರಶಸ್ತಿ ಘೋಷಣೆ: ಕರ್ನಾಟಕದ 3 ಸಾಧಕರಿಗೆ ಗೌರವ

CCL 2026: ಭೋಜ್‌ಪುರಿ ದಬಾಂಗ್ಸ್ ವಿರುದ್ಧ ಕರ್ನಾಟಕ ಬುಲ್ಡೋಜರ್ಸ್ಗೆ 18 ರನ್‌ಗಳ ರೋಚಕ ಜಯ, ಸೆಮಿಫೈನಲ್‌ಗೆ ಎಂಟ್ರಿ!

ನಮಗೂ 'ಟೈಮ್' ಬರುತ್ತೆ: ದೇವೇಗೌಡರ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು!

ದಶಕಗಳ ಕಾಲ ಭಾರತದಲ್ಲಿನ ಹಲವು ಘಟನೆಗಳ 'BBC ವರದಿ' ಹಿಂದಿದ್ದ ಹಿರಿಯ ಪತ್ರಕರ್ತ ಮಾರ್ಕ್ ಟುಲ್ಲಿ ನಿಧನ!

'ಬೆಂಗಳೂರಿನ ಮೂಲಕ ಜಗತ್ತು ನೋಡುತ್ತಿದೆ.. ವಿದೇಶದಲ್ಲಿ ಭಾರತದ ವಿರುದ್ಧ ಮಾತನಾಡುವುದಿಲ್ಲ': ಡಿಸಿಎಂ ಡಿಕೆ ಶಿವಕುಮಾರ್

SCROLL FOR NEXT