ಬೈರತಿ ಸುರೇಶ್ 
ರಾಜಕೀಯ

ಬೈರತಿ ಸುರೇಶ್ 2ನೇ ಸಿಎಂ ಇದ್ದಂತೆ: ಮುಖ್ಯಮಂತ್ರಿಗಿಂತ ತುಂಬಾ ಪವರ್‌ಫುಲ್‌; ಜಿ.ಟಿ ದೇವೇಗೌಡ

ಇದಕ್ಕೆ ಬೈರತಿ ಸುರೇಶ್‌ ಉತ್ತರ ನೀಡುವ ಸಂದರ್ಭದಲ್ಲಿ ದೇವೇಗೌಡ ಈ ಮಾತುಗಳನ್ನು ಹೇಳಿದರು. ಮೈಸೂರಿನ ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆಯ ಅರಿವು ಮುಖ್ಯಮಂತ್ರಿ ಅವರಿಗಿದೆ.

ಬೆಂಗಳೂರು: ನೀವು ರಾಜ್ಯದ ಎರಡನೇ ಮುಖ್ಯಮಂತ್ರಿ ಇದ್ದ ಹಾಗೆ. ಹಾಗೆ ನೋಡಿದರೆ ಮುಖ್ಯಮಂತ್ರಿಗಿಂತ ನೀವೇ ಪವರ್‌ಫುಲ್‌ ಎಂದು ಜೆಡಿಎಸ್‌ನ ಜಿ.ಟಿ.ದೇವೇಗೌಡ ಅವರು ಸಚಿವ ಬೈರತಿ ಸುರೇಶ್ ಅವರ ಕಾಲೆಳೆದರು.

ವಿಧಾನಸಭೆಯಲ್ಲಿ ಪ್ರಶ್ನೋತರ ವೇಳೆ ಚಾಮುಂಡೇಶ್ವರಿ ಕ್ಷೇತ್ರದ ಒಳಚರಂಡಿ ಕಾಮಗಾರಿ ಬಗ್ಗೆ ಶಾಸಕ ಜಿ.ಟಿ ದೇವೇಗೌಡ ಪ್ರಸ್ತಾಪಿಸಿದರು. ಇದಕ್ಕೆ ಬೈರತಿ ಸುರೇಶ್‌ ಉತ್ತರ ನೀಡುವ ಸಂದರ್ಭದಲ್ಲಿ ದೇವೇಗೌಡ ಈ ಮಾತುಗಳನ್ನು ಹೇಳಿದರು. ಮೈಸೂರಿನ ಕುಡಿಯುವ ನೀರು ಮತ್ತು ಒಳಚರಂಡಿ ಸಮಸ್ಯೆಯ ಅರಿವು ಮುಖ್ಯಮಂತ್ರಿ ಅವರಿಗಿದೆ. ನಗರಾಭಿವೃದ್ಧಿ ಸಚಿವರು ಹೇಳಿದರೆ ಮುಖ್ಯಮಂತ್ರಿ ಕೇಳಿಯೇ ಕೇಳುತ್ತಾರೆ ಎಂದು ಕಿಚಾಯಿಸಿದರು.

ಈ ವೇಳೆ ಸಮಸ್ಯೆ ಪರಿಹಾರಕ್ಕೆ ಸಿಎಂಗೆ 40 ವರ್ಷದ ಅನುಭವ ಇದೆ. ನಗರಾಭಿವೃದ್ಧಿ ಸಚಿವರು ಹೇಳಿದರೆ ಮುಖ್ಯಮಂತ್ರಿಗಳು ಕೇಳಿಯೇ ಕೇಳ್ತಾರೆ. ಬೈರತಿ ಸುರೇಶ್ ಅಂದ್ರೆ ಎರಡನೇ ಮುಖ್ಯಮಂತ್ರಿ ಇದ್ದಂಗೆ. ಮುಖ್ಯಮಂತ್ರಿ ಗಳಿಗಿಂತ ನೀವೇ ಪವರ್ ಫುಲ್ ಎಂದು ಜಿಟಿ ದೇವೇಗೌಡ ಹೇಳಿದರು.

ಜಿಟಿ ದೇವೇಗೌಡ ಅವರ ಮಾತು ಸದನದ ಗಮನ ಸೆಳೆಯಿತು. ಉತ್ತರ ಕೊಡುವ ಸಂದರ್ಭದಲ್ಲಿ ಇದಕ್ಕೆ ಪ್ರತಿಕ್ರಿಯೆ ನೀಡಿದ ಬೈರತಿ ಸುರೇಶ್, 'ಹೇಳಿ ಹೇಳಿ ಇರೋ ಮಂತ್ರಿಸ್ಥಾನವನ್ನೂ ತೆಗೆದುಬಿಟ್ಟಾರು' ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಳೆ ಬಳಿಕ ಸಿಲಿಕಾನ್ ಸಿಟಿ ಕೂಲ್-ಕೂಲ್: 10 ಡಿಗ್ರಿ ಸೆಲ್ಸಿಯಸ್ ತಾಪಮಾನ ಕುಸಿತ; ಮುಂದಿನ 2 ದಿನಗಳೂ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ..!

ಇರಾನ್ ಯುದ್ಧ, ಉಕ್ರೇನ್ ಬಗ್ಗೆ ಪುಟಿನ್, ಟ್ರಂಪ್ ಚರ್ಚೆ: ಕ್ರೆಮ್ಲಿನ್ ಹೇಳಿದ್ದೇನು?

ಕಾಂಗ್ರೆಸ್ ಹೈಕಮಾಂಡ್​ನಿಂದ ರಾಜ್ಯದಲ್ಲಿ ಮಹತ್ವದ ಬದಲಾವಣೆಯ ಸುಳಿವು; ಇಡೀ ಸಂಪುಟವೇ ಚೇಂಜ್ ಸಾಧ್ಯತೆ

25 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆ ಮಳೆ: ನಗರದಲ್ಲಿ ಭಾರೀ ಅವಾಂತರ, 9 ಜೀವಗಳು ಬಲಿ.!

ಬಿಹಾರ ಮೃಗಾಲಯ, ಡೈರಿ ಸಂಸ್ಥೆಗೆ ಸಂಜಯ್ ಗಾಂಧಿ ಹೆಸರು ತೆಗೆದು ಹಾಕಿದ ಬಿಜೆಪಿ ಸರ್ಕಾರ!

SCROLL FOR NEXT