ಪ್ರಧಾನ ಮಂತ್ರಿ ನರೇಂದ್ರ ಮೋದಿ  
ರಾಜಕೀಯ

ನರೇಂದ್ರ ಮೋದಿ ಮತ್ತೊಂದು ದಾಖಲೆ: 8,931 ದಿನಗಳು ಸೇವೆ ಸಲ್ಲಿಕೆ; 'ಅಶೋಕ ಚಕ್ರವರ್ತಿ' ಮಾದರಿ ಆಡಳಿತ- ಬಿಜೆಪಿ ಬಣ್ಣನೆ!

ಜನರಿಗೆ ಸೇವೆ ಸಲ್ಲಿಸುವ ಅವರ ಅವಿಶ್ರಾಂತ ಭಕ್ತಿಗೆ ವಿರಾಮವಿಲ್ಲ, ವಿಶ್ರಾಂತಿ ಅಥವಾ ಮನರಂಜನೆ ಹೆಸರಲ್ಲಿ ಭೋಗವಿಲ್ಲ, ಅವರು ಮುಖ್ಯಮಂತ್ರಿಯಾಗಿ ಅಥವಾ ಈಗ ಪ್ರಧಾನಿಯಾಗಿ ಒಂದು ಕ್ಷಣವನ್ನು ವ್ಯರ್ಥ ಮಾಡುವುದನ್ನು ಜಗತ್ತು ಎಂದಾದರೂ ನೋಡಿದೆಯೇ?

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು 8,931 ದಿನಗಳ ಅಧಿಕಾರಾವಧಿಯನ್ನು ಪೂರೈಸಿ ಭಾರತದಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಸರ್ಕಾರದ ಮುಖ್ಯಸ್ಥರಾಗಿ ಹೊರಹೊಮ್ಮಿರುವುದಕ್ಕೆ ಕರ್ನಾಟಕದ ಬಿಜೆಪಿ ನಾಯಕರು ಸಂತೋಷ ವ್ಯಕ್ತಪಡಿಸಿದರು.

ಜನರಿಗೆ ಸೇವೆ ಸಲ್ಲಿಸುವ ಅವರ ಅವಿಶ್ರಾಂತ ಭಕ್ತಿಗೆ ವಿರಾಮವಿಲ್ಲ, ವಿಶ್ರಾಂತಿ ಅಥವಾ ಮನರಂಜನೆ ಹೆಸರಲ್ಲಿ ಭೋಗವಿಲ್ಲ, ಅವರು ಮುಖ್ಯಮಂತ್ರಿಯಾಗಿ ಅಥವಾ ಈಗ ಪ್ರಧಾನಿಯಾಗಿ ಒಂದು ಕ್ಷಣವನ್ನು ವ್ಯರ್ಥ ಮಾಡುವುದನ್ನು ಜಗತ್ತು ಎಂದಾದರೂ ನೋಡಿದೆಯೇ? ಎಂದಿಗೂ ಇಲ್ಲ! ಎಂದು ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಬಣ್ಣಿಸಿದ್ದಾರೆ.

ಏಕೆಂದರೆ ಅವರು 'ಪವಿತ್ರ ಧ್ಯೇಯವನ್ನು ಹೊಂದಿರುವ ಪ್ರಧಾನಿ', ನಮ್ಮ ಪ್ರೀತಿಯ ರಾಷ್ಟ್ರ ಮತ್ತು ಅದರ ಲೆಕ್ಕವಿಲ್ಲದಷ್ಟು ಲಕ್ಷಾಂತರ ಜನರನ್ನು ಬಡತನದಿಂದ ಅಭಿವೃದ್ಧಿಯ ಮೂಲಕ ಮೇಲೆತ್ತಲು, ಭಾರತದ ಹಣೆಬರಹಕ್ಕೆ ಬರಹ ಬದಲಿಸುವ ಪ್ರತಿಜ್ಞೆ ಮಾಡಿರುವ ಜ್ವಲಂತ ಜ್ಯೋತಿಧಾರಿಮ ಮೋದಿ ಎಂದು ಶ್ಲಾಘಿಸಿದ್ದಾರೆ.

ಚಿತ್ರದುರ್ಗ ಸಂಸದ ಗೋವಿಂದ್ ಕಾರಜೋಳ ಮಾತನಾಡಿ, "ಪ್ರಧಾನಿ ಮೋದಿಜಿಯವರ ನಾಯಕತ್ವದ ಈ ಹಿಂದಿನ 8931 ದಿನಗಳನ್ನು ಬಡತನ ನಿರ್ಮೂಲನೆ ಮತ್ತು ಅಭಿವೃದ್ಧಿಯತ್ತ ಒಂದು ಮೆಗಾ ಪ್ರಯತ್ನ ಎಂದು ಹೇಳಬಹುದು ಎಂದಿದ್ದಾರೆ. ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮೋದಿ ಅವರ ನಾಯಕತ್ವದಲ್ಲಿ ದೇಶವು ಭದ್ರತೆ ಮತ್ತು ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ದೇಶವು "ಪ್ರಭುತ್ವದ ಪಥದಲ್ಲಿ ಸಾಗುತ್ತಿದೆ" ಎಂದು ಹೇಳಿದರು.

ಪ್ರಧಾನಿ ಮೋದಿ ಭಾರತದಲ್ಲಿ ಅತಿ ಹೆಚ್ಚು ಕಾಲ ಚುನಾಯಿತರಾಗಿ ಅಧಿಕಾರ ವಹಿಸಿಕೊಂಡ ಸರ್ಕಾರದ ಮುಖ್ಯಸ್ಥರಾಗಿದ್ದಾರೆ, ಅವರು 8,931 ದಿನಗಳನ್ನು ಪೂರೈಸಿದ್ದಾರೆ. ಭವಿಷ್ಯದಲ್ಲಿಯೂ ಅವರು ಹೆಚ್ಚಿನ ದಾಖಲೆಗಳನ್ನು ಮುರಿಯಲಿದ್ದಾರೆ ಎಂದು ನಾನು ದೃಢವಾಗಿ ನಂಬುತ್ತೇನೆ. ಅವರು ಅಭಿವೃದ್ಧಿಗಾಗಿ ಮೂಲಸೌಕರ್ಯಗಳನ್ನು ಸ್ಥಾಪಿಸುವುದರಲ್ಲಿ ಅಥವಾ ಬಡವರ ಮೇಲೆತ್ತುವ ಪ್ರಯತ್ನಗಳನ್ನು ಚುರುಕುಗೊಳಿಸುವಲ್ಲಿ ಅವರ ಕಠಿಣ ಪರಿಶ್ರಮ, ಶಿಸ್ತು ನಿರಂತರ ಅಭಿವೃದ್ಧಿಯ ಸಂಕೇತ ಎಂದು ವಿಜಯೇಂದ್ರ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು.

ಪರಿಷತ್ತಿನ ಉಪಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿ ಮೋದಿ ಇಡೀ ರಾಷ್ಟ್ರಕ್ಕೆ ಜೀವಂತ ಉದಾಹರಣೆ. ಪ್ರಸ್ತುತ ಮತ್ತು ಭವಿಷ್ಯದ ನಾಯಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ 12 ವರ್ಷಗಳ ಅಧಿಕಾರಾವಧಿಯು ದಣಿವರಿಯದ ಆಡಳಿತ ಮತ್ತು ಸಾರ್ವಜನಿಕ ಸೇವೆಗೆ ಮೀಸಲಿಟ್ಟಿದ್ದಾರೆ. ಇದು ವೈಯಕ್ತಿಕ ಹಿತಾಸಕ್ತಿಗಿಂತ ಕರ್ತವ್ಯಕ್ಕಾಗಿ ತನ್ನ ಸಾಮ್ರಾಜ್ಯದ ಪ್ರಗತಿಗೆ ಅವಿರತವಾಗಿ ಶ್ರಮಿಸಿದ ಚಕ್ರವರ್ತಿ ಅಶೋಕ ದಿ ಗ್ರೇಟ್‌ ಆಡಳಿತಕ್ಕೆ ಸಮಾನಾಂತರವಾಗಿದೆ ಮಾಜಿ ಎಂಎಲ್‌ಸಿ ಎಸಿಪಿ ಅಬ್ದುಲ್ ಅಜೀಂ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪೆಟ್ರೋಲಿಯಂ ಉತ್ಪನ್ನಗಳ ಮಿತಬಳಕೆ "ಈಗಿನ ಅಗತ್ಯ"-ಪ್ರಧಾನಿ ಮೋದಿ: ಮುಂದೆ ಕಾದಿದೆಯಾ ಸಂಕಷ್ಟದ ದಿನಗಳು?

ಚುನಾವಣೆಗೂ ಮುನ್ನ ಯೋಗಿ ಸರ್ಕಾರದಲ್ಲಿ ಮಹತ್ತರ ಬದಲಾವಣೆ: ಸಂಪುಟ ಪುನಾರಚನೆ; 6 ಹೊಸ ಸಚಿವರ ಸೇರ್ಪಡೆ

IPL 2026: ನಿರ್ಣಾಯಕ ಪಂದ್ಯದಲ್ಲಿ ಲಖನೌ ವಿರುದ್ಧ ಗೆದ್ದ CSK; ಪ್ಲೇ ಆಫ್ ಕನಸು ಜೀವಂತ!

IPL 2026, RCB vs MI: MS Dhoni ದಾಖಲೆ ಸರಿಗಟ್ಟಿದ ರೋಹಿತ್ ಶರ್ಮಾ-ವಿರಾಟ್ ಕೊಹ್ಲಿ ಜೋಡಿ

ಕೇರಳ ಸಿಎಂ ಆಯ್ಕೆ: ಕೆಸಿ ವೇಣುಗೋಪಾಲ್ ರಾಹುಲ್ ಗಾಂಧಿಯ ಆದ್ಯತೆ; ಕುತೂಹಲ ಮೂಡಿಸಿದ ಖಾಸಗಿ ಭೇಟಿ!

SCROLL FOR NEXT