ಎಚ್ ವಿಶ್ವನಾಥ್ 
ರಾಜಕೀಯ

ದಲಿತ IAS ಅಧಿಕಾರಿಗಳು ಹೆಚ್ಚಾಗಿ ಬ್ರಾಹ್ಮಣ ಹೆಣ್ಣು ಮಕ್ಕಳನ್ನು ಮದುವೆಯಾಗ್ತಿದ್ದಾರೆ; ದಲಿತರನ್ನು ನಾವು ಇನ್ನೂ ಹಿಂದೂಗಳೆಂದು ಒಪ್ಪಿಕೊಂಡಿಲ್ಲ: ಎಚ್.ವಿಶ್ವನಾಥ್

ನಮ್ಮ ದಲಿತ ಐಎಎಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಹೆಣ್ಣುಮಕ್ಕಳನ್ನು ಮದುವೆಯಾಗಿದ್ದಾರೆ. ಆ ವಿಚಾರದಲ್ಲಿ ಮೇಲ್ಜಾತಿಯರ ವರ್ತನೆಗಳನ್ನು ಮೆಚ್ಚಲೇಬೇಕು.

ಬೆಂಗಳೂರು: ಪ್ರೀತಿ, ಪ್ರೇಮ ಹುಡುಗಾಟಿಕೆ ವಿಷಯವಲ್ಲ. ಅದು ಅನುಭವಿಸಿದವರಿಗೆ ಮಾತ್ರ ಗೊತ್ತು. ನನ್ನ ಪ್ರೀತಿ, ಪ್ರೇಮದ ಬಗ್ಗೆ ‘ಹಳ್ಳಿಹಕ್ಕಿ’ ಪುಸ್ತಕದಲ್ಲಿ ದಾಖಲಿಸಿದ್ದೇನೆ ಎಂದು ಬಿಜೆಪಿಯ ಎಚ್.ವಿಶ್ವನಾಥ್ ಹೇಳಿದರು.

ಮರ್ಯಾದಾ ಹತ್ಯೆ ತಡೆ ಮಸೂದೆ ಚರ್ಚೆ ವೇಳೆ ಮಾತನಾಡಿದ ಅವರು, ನಮ್ಮ ದಲಿತ ಐಎಎಸ್ ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬ್ರಾಹ್ಮಣ ಹೆಣ್ಣುಮಕ್ಕಳನ್ನು ಮದುವೆಯಾಗಿದ್ದಾರೆ. ಆ ವಿಚಾರದಲ್ಲಿ ಮೇಲ್ಜಾತಿಯರ ವರ್ತನೆಗಳನ್ನು ಮೆಚ್ಚಲೇಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಪ್ರೇಮ ವಿವಾಹದ ಹಿನ್ನೆಲೆಯಲ್ಲಿ ಸ್ವಂತ ಮಗಳನ್ನೇ ಕೊಲ್ಲುವ ಸ್ಥಿತಿಗೆ ಬಂದು ತಲುಪಿದ್ದೇವೆ. ಇಂತಹ ಘಟನೆಗಳನ್ನು ತಪ್ಪಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಉತ್ತಮವಾದ ಕಾನೂನು ತಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಂತರ್ಜಾತೀಯ ವಿವಾಹ ಸಮಾಜದಲ್ಲಿ ಒಂದು ಅಂತರ್ಯುದ್ಧವನ್ನು ಸೃಷ್ಟಿಸುತ್ತದೆ. ನಾವು ರಾಜಕಾರಣಿಗಳಿಗೆ ಇದೊಂದು ಭಾಷಣದ ಸರಕಾಗಿದೆ. ವೇದಿಕೆ ಮೇಲಿರುವವರೆಗೆ ಇವ ನಮ್ಮವ ಇವ ನಮ್ಮವ ಎಂದು ಹೇಳುತ್ತೇವೆ. ಭಾಷಣ ಮಾಡಿ ವೇದಿಕೆಯಿಂದ ಕೆಳಗಿಳಿದ ಬಳಿಕ ನಮ್ಮವರು ಯಾರಿದ್ದಾರೆ ನೋಡ್ರಪ್ಪ ಎಂದು ಹೇಳುತ್ತೇವೆ. ದಲಿತರನ್ನು ನಾವು ಇನ್ನೂ ಹಿಂದುಗಳೆಂದು ಒಪ್ಪಿಕೊಂಡಿಲ್ಲ, ಯಾರು ಅವರನ್ನು ಸೇರಿಸ್ತಿದ್ದಾರೆ ಹೇಳಿ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಮುಖ್ಯಮಂತ್ರಿಗಳು, ಮಂತ್ರಿಗಳು ಸೇರಿದಂತೆ ಕೆಲವರು ಪೋಕ್ಸೋ ಕಾಯ್ದೆಯಲ್ಲಿ ಸಿಲುಕಿಕೊಂಡಿದ್ದಾರೆ. ಪೋಕ್ಸೋ ಕಾಯ್ದೆ ಈಗ ದುರ್ಬಲವಾಗುತ್ತಿದೆ. ಅದನ್ನು ನಾವುಗಳೇ ದುರ್ಬಲಗೊಳಿಸಿದ್ದೇವೆ. ಆ ರೀತಿಯಲ್ಲಿ ಮರ್ಯಾದಾ ಹತ್ಯೆ ಕಾಯ್ದೆ ಆಗಬಾರದು ಎಂದರು. ಈ ಕಾಯ್ದೆಯನ್ನು ಒಳ್ಳೇಯ ಉದ್ದೇಶಕ್ಕಾಗಿ ಜಾರಿ ತಂದಿದೆ. ಆದರೆ ಕಾಯ್ದೆಯ ಪಾಲನೆ ಆಗಬೇಕಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್