ಹೆಚ್ ವಿಶ್ವನಾಥ್  
ರಾಜಕೀಯ

ನನ್ನ ವಿರುದ್ಧ ಸುಳ್ಳು ಆರೋಪ, FIR ಹಿಂದೆ ಯತೀಂದ್ರ ಸಿದ್ದರಾಮಯ್ಯ, ಮಹದೇವಪ್ಪನವರ ಕೈವಾಡವಿದೆ: ಹೆಚ್ ವಿಶ್ವನಾಥ್-Video

ಈ ಬಗ್ಗೆ ಹೈಕೋರ್ಟ್​ಗೆ ಹೋಗುತ್ತೇನೆ. ನಾನು 50 ವರ್ಷ ರಾಜಕಾರಣದಲ್ಲಿ ಸಾಲ ಮಾಡಿಲ್ಲ. ಕೋಟೆ ಹುಂಡಿ ಮಹಾದೇವನಿಗೆ ಎಲ್ಲಿಂದ ಹಣ ಬಂತು, ಈತ ನನ್ನ ಮನೆಯ ಮುಂದೆ ಬಂದು ನಿಲ್ಲುತ್ತಿದ್ದ. ನಾನು ಯತೀಂದ್ರ ಸಿದ್ದರಾಮಯ್ಯ ನನ್ನ ಹೆಚ್​ಎಂ ಎಂದು ಹೇಳಿದ್ದೆ ಅಷ್ಟೇ ಎಂದು ಹೇಳಿದರು.

ಮೈಸೂರು: ಸಾಲ ಕೇಳಲು ಬಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ ಸಂಬಂಧ ನನ್ನ ವಿರುದ್ಧ ಮೈಸೂರಿನ ದೇವರಾಜ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಿರುವುದರ ಹಿಂದೆ ಸಿಎಂ ಪುತ್ರ ಯತೀಂದ್ರ ಸಿದ್ದರಾಮಯ್ಯನವರ ಕೈವಾಡವಿದೆ ಎಂದು ಎಂಎಲ್‌ಸಿ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.

ನಿನ್ನೆ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಕೋಟೆ ಹುಂಡಿ ಮಹಾದೇವ ಎಂಬ ವ್ಯಕ್ತಿ 55 ಲಕ್ಷ ಹಣ ಸಾಲ ನೀಡಿದ್ದು, ಅದನ್ನು ಕೇಳಲು ಹೋದಾಗ ಹೆಚ್.ವಿಶ್ವನಾಥ್ ನನ್ನ ಮೇಲೆ ಹಲ್ಲೆ ಮಾಡಿದರು ಎಂದು ಆ ವ್ಯಕ್ತಿ ನನ್ನ ವಿರುದ್ಧ ದೇವರಾಜ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. ಈ ಸಂಬಂಧ ಪೋಲಿಸರು ನನಗೆ ನೊಟೀಸ್​ ಕೊಟ್ಟಿದ್ದರು. ಅದಕ್ಕೆ ಉತ್ತರ ನೀಡಿದ್ದೇನೆ. ಅನಂತರವೂ ನನ್ನ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ನನ್ನ ತೇಜೋವಧೆ ಮಾಡುತ್ತಿದ್ದಾರೆ ಎಂದರು.

ಈ ಬಗ್ಗೆ ಹೈಕೋರ್ಟ್​ಗೆ ಹೋಗುತ್ತೇನೆ. ನಾನು 50 ವರ್ಷ ರಾಜಕಾರಣದಲ್ಲಿ ಸಾಲ ಮಾಡಿಲ್ಲ. ಕೋಟೆ ಹುಂಡಿ ಮಹಾದೇವನಿಗೆ ಎಲ್ಲಿಂದ ಹಣ ಬಂತು, ಈತ ನನ್ನ ಮನೆಯ ಮುಂದೆ ಬಂದು ನಿಲ್ಲುತ್ತಿದ್ದ. ನಾನು ಯತೀಂದ್ರ ಸಿದ್ದರಾಮಯ್ಯ ನನ್ನ ಹೆಚ್​ಎಂ ಎಂದು ಹೇಳಿದ್ದೆ, ಅವರಿಂದಲೇ ಅದಕ್ಕೆ ದ್ವೇಷ ತೀರಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಅಷ್ಟೇ ಎಂದು ಹೇಳಿದರು.

ಮೈಸೂರು ಜಿಲ್ಲೆಯ ಉಸ್ತುವಾರಿ ಸಚಿವ ಮಹದೇವಪ್ಪ ಹಾಗೂ ಸಿಎಂ ಮಗನಂತವರು ಬೇರೆ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಬರೀ ಇಂತಹ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಇದೇ ಹೆಸರಿನಲ್ಲಿ ಕೀಟಲೆ ಕೆಲಸ ಮಾತ್ರ ನಡೆಯುತ್ತಿದೆ. ಈಗಾಗಲೇ ಎಫ್‌ಐಆರ್ ವಿರುದ್ಧ ಹೈಕೋರ್ಟ್​ಗೆ ಹೋಗಿದ್ದೇನೆ ಎಂದರು.

ಎಂಟಿಬಿ ನಾಗರಾಜ್ ರಂಥವರ ಬಳಿ ನಾನು ಏಕೆ ಸಾಲ ಕೇಳಲು ಹೋಗುತ್ತೇನೆ, ನಾನು ರಾಜಕಾರಣಕ್ಕೆ ಬಂದು 50 ವರ್ಷವಾಯಿತು, ಮಾನ ಮರ್ಯಾದೆ ಇಟ್ಟುಕೊಂಡಿದ್ದೇನೆ, ಕೌನ್ಸಿಲ್ ಲ್ಲಿ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್ ಮುಂದೆಯೇ ಸತ್ಯವಂತ ಎಂದು ಆಣೆಮಾಡಿ ಹೇಳುತ್ತೀನಿ ಎಂದಿದ್ದೇನೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ವಿಜಯ್ ಸಂಪುಟ ವಿಸ್ತರಣೆ: 21 ಟಿವಿಕೆ, ಇಬ್ಬರು ಕಾಂಗ್ರೆಸ್ ಶಾಸಕರು ಸಚಿವರಾಗಿ ಪ್ರಮಾಣ; AIADMK ಹೊರಗಿಟ್ಟ ದಳಪತಿ

ಪ್ರಮಾಣ ವಚನ ಸ್ವೀಕಾರದ ವೇಳೆ ಕಾಂಗ್ರೆಸ್ ನಾಯಕನಿಗೆ ತಿದ್ದಿ, ಬುದ್ಧಿ ಹೇಳಿದ ಗವರ್ನರ್; ನೂತನ ಸಚಿವ ಮಾಡಿದ ತಪ್ಪೇನು?

ಇರಾನ್ ವಿರುದ್ಧದ ಯುದ್ಧ ತಂತ್ರದಲ್ಲಿ ಬಿರುಕು; ಇಸ್ರೇಲ್-ಅಮೆರಿಕಾ ನಡುವೆ ಭಿನ್ನಮತ ಸ್ಫೋಟ, ಟ್ರಂಪ್ ರಾಜತಾಂತ್ರಿಕ ನಡೆಗೆ ನೆತನ್ಯಾಹು ಕೆಂಡಾಮಂಡಲ..!

ಧರ್ಮ, ಕಾನೂನು, ನೈತಿಕತೆ ಇಲ್ಲದ, ಸ್ವಂತ ಜನರ ಮೇಲೆಯೇ ಬಾಂಬ್ ಹಾಕುವ ದೇಶ: ವಿಶ್ವಸಂಸ್ಥೆಯಲ್ಲಿ ಪಾಕ್ ವಿರುದ್ಧ ಗುಡುಗಿದ ಭಾರತ..!

US-Iran war: ಹೊಸ ಯುದ್ಧಕ್ಕೆ ಸಂಚು ನಡೆಸಿದ್ದಾರೆ, ನಮ್ಮನ್ನು ಕೆಣಕಿದರೆ ವಿನಾಶಕಾರಿ ದಾಳಿ ಖಂಡಿತ: ಅಮೆರಿಕಾಕ್ಕೆ ಇರಾನ್ ತಿರುಗೇಟು

SCROLL FOR NEXT