ಯತೀಂದ್ರ ಸಿದ್ದರಾಮಯ್ಯ 
ರಾಜಕೀಯ

ಕೂತು-ಕೂತು ಸೋಮಾರಿಗಳಾಗಿದ್ರು, ಪಾದಯಾತ್ರೆ ಮಾಡಿ ಕ್ರಿಯಾಶೀಲರಾಗಲಿ: ಸಮಾವೇಶಕ್ಕೆ ಕರೆಯೋದು ಆಯೋಜಕರಿಗೆ ಬಿಟ್ಟದ್ದು; ಯತೀಂದ್ರ

ಬೆಂಗಳೂರಿನಲ್ಲಿ ನಡೆದಿರೋದು ಅಹಿಂದ ಸಭೆ ಅಲ್ಲ. ಹಿಂದುಳಿದ ಸಂಘಟನೆಗಳ ಒಕ್ಕೂಟದಿಂದ ಕಾರ್ಯಕ್ರಮ ಆಗಿದೆ. ಇದು ನಮ್ಮ ತಂದೆಯವರು ಮಾಡಿದ ಕಾರ್ಯಕ್ರಮ ಅಲ್ಲ ಎಂದು ಸ್ಫಷ್ಟನೆ ನೀಡಿದ್ದಾರೆ.

ರಾಯಚೂರು: ಬಿಜೆಪಿಯವರು ಕೂತು ಕೂತು ಸೋಮಾರಿಗಳಾಗಿದ್ದರು. ಸ್ವತಃ ಕ್ರಿಯಾಶೀಲರಾಗಬೇಕು ಎಂಬ ಉದ್ದೇಶದಿಂದ ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಸಚಿವ ಯತೀಂದ್ರ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.

ರಾಯಚೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರ ಪಾದಯಾತ್ರೆಯಿಂದ ಏನೂ ಪ್ರಯೋಜನ ಇಲ್ಲ. ಯಾವ ಉದ್ದೇಶದಿಂದ ಪಾದಯಾತ್ರೆ ಮಾಡಬೇಕು ಅನ್ಕೊಂಡಿದ್ರೊ ಆ ಉದ್ದೇಶ ಈಡೇರಿದೆ. ಆದ್ರೂ ಪಾದಯಾತ್ರೆ ಮಾಡುತ್ತಿದ್ದಾರೆ ಎಂದಿದ್ದಾರೆ.

ಇನ್ನೂ ಬೆಂಗಳೂರಿನಲ್ಲಿ ನಡೆದಿರೋದು ಅಹಿಂದ ಸಭೆ ಅಲ್ಲ. ಹಿಂದುಳಿದ ಸಂಘಟನೆಗಳ ಒಕ್ಕೂಟದಿಂದ ಕಾರ್ಯಕ್ರಮ ಆಗಿದೆ. ಇದು ನಮ್ಮ ತಂದೆಯವರು ಮಾಡಿದ ಕಾರ್ಯಕ್ರಮ ಅಲ್ಲ ಎಂದು ಸ್ಫಷ್ಟನೆ ನೀಡಿದ್ದಾರೆ.

ಹಿಂದುಳಿದ ಒಕ್ಕೂಟ ಸಮಾವೇಶಕ್ಕೆ ಸಚಿವ ಸತೀಶ್ ಜಾರಕಿಹೊಳಿಗೆ ಆಹ್ವಾನ ನೀಡದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಅಹಿಂದ ಯಾರ ಸ್ವತ್ತು ಅಲ್ಲ ನಿಜ, ಅದರಲ್ಲಿ ತಪ್ಪೇನಿಲ್ಲ. ಇದು ನಮ್ಮ ತಂದೆಯವರು ಮಾಡಿದ ಕಾರ್ಯಕ್ರಮ ಅಲ್ಲ, ಯಾವುದೇ ರಾಜಕೀಯ ಕಾರ್ಯಕ್ರಮ ಅಲ್ಲ. ಕರೆಯೋದು, ಬಿಡೋದು ಆಯೋಜಕರಿಗೆ, ಒಕ್ಕೂಟದವರಿಗೆ ಬಿಟ್ಟಿದ್ದು. ಇಂತವರನ್ನೇ ಕರೆಯಿರಿ, ಇವರನ್ನೇ ಬಿಡ್ರಿ ಎಂದು ಹೇಳೋಕೆ ಬರಲ್ಲ ಎಂದರು.

25 ವರ್ಷದ ಮಹೋತ್ಸವ ಅವರು ಮಾಡಿದ್ದಾರೆ. ಆ ಕಾರ್ಯಕ್ರಮಕ್ಕೆ ತಂದೆಯವರನ್ನು ಸಹ ಕರೆದಿದ್ದರು. ದೊಡ್ಡ ಮಟ್ಟದ ಯಶಸ್ವಿ ಕಾರ್ಯಕ್ರಮ ಮಾಡಿದ್ದಾರೆ ಎಂದಿದ್ದಾರೆ. ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೊಳಿ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಅನ್ನೋ ವಿಚಾರಕ್ಕೆ ನನಗೆ ಗೊತ್ತಿರುವಂತೆ ಅಂತಹದ್ದೇನು ಇಲ್ಲ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿ ಕಟ್ಟಡ ಕುಸಿತ ದುರಂತ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಪಿಜಿ ಮಾಲೀಕ ಅಂದರ್; ಐವರು ಅಧಿಕಾರಿಗಳ ಅಮಾನತು!

'ಇಸ್ರೋ ಖಾಸಗೀಕರಣವಾಗುತ್ತಿಲ್ಲ, ನಾವು ನೌಕರರೊಂದಿಗೆ ಮಾತನಾಡುತ್ತೇವೆ': ಭಾರತೀಯ ಬಾಹ್ಯಾಕಾಶ ಸಂಸ್ಥೆ ಮುಖ್ಯಸ್ಥ

ಭಾರತದಲ್ಲಿ ಶೀಘ್ರದಲ್ಲೇ ಗಂಟೆಗೆ 110 ಕಿ.ಮೀ ವೇಗದಲ್ಲಿ ಹೈಡ್ರೋಜನ್ ರೈಲುಗಳ ಕಾರ್ಯಾಚರಣೆ: ರೈಲ್ವೆ ಸುಳಿವು

ಭೂಮಿ ಕಳೆದುಕೊಂಡವರಿಗೆ ನಿವೇಶನ ಹಂಚಿಕೆ 'ಸುಪ್ರೀಂ' ತೀರ್ಪಿಗೆ ವಿರುದ್ಧ: ನಿಜವಾದ ಫಲಾನುಭವಿಗಳು ಯಾರು? CMಗೆ ದೇವೇಗೌಡ ಪತ್ರ!

'ಕೇವಲ ಸಹಕಾರವಲ್ಲ, ಭವಿಷ್ಯವನ್ನೇ ಒಟ್ಟಿಗೆ ರೂಪಿಸುತ್ತಿದ್ದೇವೆ': ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ-ಅಮೆರಿಕ ಜಂಟಿ ಹೆಜ್ಜೆ, ರಾಯಭಾರಿ Sergio Gor ಹೇಳಿದ್ದೇನು?