ಡಾ.ಹೆಚ್.ಸಿ. ಮಹದೇವಪ್ಪ, ಡಿಸಿಎಂ ಡಾ.ಜಿ. ಪರಮೇಶ್ವರ್ 
ರಾಜಕೀಯ

ಮಹದೇವಪ್ಪ ನಿವಾಸದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಪರಮೇಶ್ವರ್ ಮಾತುಕತೆ! ಕುತೂಹಲ ಕೆರಳಿಸಿದ ದಲಿತ ನಾಯಕರ ಭೇಟಿ

ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕೆ ಪರಮೇಶ್ವರ್ ತೆರಳಿ, ಮಹದೇವಪ್ಪ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಬೆಂಗಳೂರು: ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ 100 ದಿನಗಳ ಪೂರೈಸಿರುವ ಹಿನ್ನೆಲೆಯಲ್ಲಿ ಗುರುವಾರ ವಿಧಾನಸೌಧದಲ್ಲಿ ನಡೆದ ಕಾರ್ಯಕ್ರಮದಿಂದ ಮಾಜಿ ಸಚಿವ ಹೆಚ್. ಸಿ. ಮಹಾದೇವಪ್ಪ ಸೇರಿದಂತೆ ಹಲವು ನಾಯಕರು ದೂರ ಉಳಿದಿದ್ದರು.

ಕಾರ್ಯಕ್ರಮ ಮುಗಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಅವರು, ಹೆಚ್.ಸಿ ಮಹದೇವಪ್ಪ (HC Mahadevappa) ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಬೆಂಗಳೂರಿನ ಕ್ರೆಸೆಂಟ್ ರಸ್ತೆಯಲ್ಲಿರುವ ಸರ್ಕಾರಿ ನಿವಾಸಕ್ಕೆ ಪರಮೇಶ್ವರ್ ತೆರಳಿ, ಮಹದೇವಪ್ಪ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಇಬ್ಬರೂ ನಾಯಕರು ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿರುವುದು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.

ಇತ್ತೀಚೆಗಷ್ಟೇ ಮಹದೇವಪ್ಪ ಅವರ ಸರ್ಕಾರಿ ನಿವಾಸದ ವಿಚಾರ ಮುನ್ನೆಲೆಗೆ ಬಂದಿತ್ತು. ನಿನ್ನೆಯಷ್ಟೇ ಸಚಿವ ಬೈರತಿ ಸುರೇಶ್ ಅವರು ಡಿಪಿಎಆರ್‌ಗೆ ಮಹದೇವಪ್ಪ ಬರೆದಿದ್ದ ಪತ್ರವನ್ನ ಬಿಡುಗಡೆ ಮಾಡಿದ್ದರು. ಆಗಸ್ಟ್ 15 ರಂದೇ ಸರ್ಕಾರಿ ನಿವಾಸ ಖಾಲಿ ಮಾಡಿರುವುದಾಗಿ ಮಹದೇವಪ್ಪ ಪತ್ರದಲ್ಲಿ ತಿಳಿಸಿದ್ದಾರೆ ಎಂದು ಬೈರತಿ ಸುರೇಶ್ ಹೇಳಿದ್ದರು. ಆದರೀಗ ಅದೇ ಸರ್ಕಾರಿ ನಿವಾಸದಲ್ಲಿರುವ ಮಹದೇವಪ್ಪ ಅವರನ್ನ ಉಪಮುಖ್ಯಮಂತ್ರಿ ಪರಮೇಶ್ವರ್ ಭೇಟಿ ಮಾಡಿರುವುದು ಹಲವು ಪ್ರಶ್ನೆಗಳಿಗೆ ಕಾರಣವಾಗಿದೆ.

ಮಹದೇವಪ್ಪ ಅವರು ನಿವಾಸ ಖಾಲಿ ಮಾಡಿರುವುದಾಗಿ ಪತ್ರ ಬರೆದಿರುವ ಬೆನ್ನಲ್ಲೇ, ಅವರು ಅದೇ ನಿವಾಸದಲ್ಲಿರುವಾಗಲೇ ಪರಮೇಶ್ವರ್ ಭೇಟಿ ನೀಡಿ ಮಾತುಕತೆ ನಡೆಸಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಇಬ್ಬರು ನಾಯಕರ ಭೇಟಿಯ ವೇಳೆ ಸಚಿವ ಸತೀಶ್ ಜಾರಕಿಹೊಳಿ ನಿವಾಸದ ಮೇಲೆ ಇಡಿ ದಾಳಿ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ ಚರ್ಚೆ ಕುರಿತು ಅಧಿಕೃತ ಮಾಹಿತಿ ತಿಳಿದುಬಂದಿಲ್ಲ.

ಮತ್ತೊಂದಡೆ ವಸತಿ ಸಚಿವರಾದ ಜಮೀರ್ ಅಹಮದ್ ಖಾನ್ ಹಾಗೂ ಮಾಜಿ ಸಚಿವರಾದ ದಿನೇಶ್ ಗುಂಡೂರಾವ್ ಅವರನ್ನು ಭೇಟಿಯಾಗಿ ಡಾ.ಹೆಚ್. ಸಿ. ಮಹದೇವಪ್ಪ ಮಾತುಕತೆ ನಡೆಸಿದ್ದಾರೆ.

ಡಿಕೆ ಶಿವಕುಮಾರ್ ಸಂಪುಟದಲ್ಲಿ ಸ್ಥಾನ ಪಡೆಯದೆ ಅಸಮಾಧಾನಗೊಂಡಿರುವ ಹೆಚ್. ಸಿ. ಮಹಾದೇವಪ್ಪ ಜೆಡಿಎಸ್ ಕಡೆಗೆ ಮನಸು ಮಾಡಿದ್ದಾರೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಈ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕರು ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ED ದಾಳಿ ಅಂತ್ಯ; 3 ಕೋಟಿ ರೂ. ನಗದು, ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಪತ್ತೆ: ಆ ಹಣ ನಮ್ಮದೇ ಎಂದ ಸತೀಶ್ ಜಾರಕಿಹೊಳಿ

ಹಿಂಸೆ ಫ್ಯಾಷನ್ ಆಗಿಬಿಟ್ಟಿದೆ: ಮಣಿಪುರಿ ಸಂಗೀತಗಾರನ ಹತ್ಯೆಗೆ ನ್ಯಾಯ ಒದಗಿಸುವುದಾಗಿ ರಾಹುಲ್ ಗಾಂಧಿ ಪ್ರತಿಜ್ಞೆ!

ಇದನ್ನು ಲಘುವಾಗಿ ಪರಿಗಣಿಸಲು ಸಾಧ್ಯವಿಲ್ಲ: ಕಿರಿಯ CJP ಕಾರ್ಯಕರ್ತೆಗೆ ಕಿರುಕುಳ, ಬೆದರಿಕೆ ಹಾಕಿದ್ದಕ್ಕೆ ಸುಪ್ರೀಂ ಗರಂ!

"ಈ ತಪ್ಪು ನೀವು ಮಾಡಬೇಡಿ": ಪತ್ನಿ ತಲೆಕಡಿದು ಫ್ರಿಡ್ಜ್​ನಲ್ಲಿಟ್ಟ ಪಾಪಿ ಪತಿ ಹೇಳಿದ ಬುದ್ಧಿ ಮಾತುಗಳಿವು!

ಮುಸ್ಲಿಮರ ಓಲೈಕೆಗಾಗಿ ‘ವಂದೇ ಮಾತರಂ’ ಮೊಟಕು, ನಾವೆಲ್ಲ ಒಟ್ಟಾಗಿ ರಾಜ್ಯದಲ್ಲಿ ಹಿಂದೂಗಳ ಸರ್ಕಾರ ತರಬೇಕು: ವಿಜಯೇಂದ್ರ