ಬೆಂಗಳೂರಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ೧೯೧೫ನೇ ಇಸವಿಯಲ್ಲಿ ‘ಕರ್ನಾಟಕ ಸಾಹಿತ್ಯ ಪರಿಷತ್ತು’ ಸ್ಥಾಪನೆಯಾಯಿತು. ಆಗ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿಷತ್ತಿನ ಸ್ಥಾಪನೆಗೆ ಚಾಲನೆ ನೀಡಿದರು. ಮುಂದೆ ೧೯೩೮ರಲ್ಲಿ ಈ ಹೆಸರನ್ನು ‘ಕನ್ನಡ ಸಾಹಿತ್ಯ ಪರಿಷತ್ತು’ ಎಂದು ಬದಲಾಯಿಸಲಾಯಿತು. ಸ್ಥಾಪನೆ ಆದಾಗಿನಿಂದ ಈಗಿನವರೆಗೆ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರ ಪಟ್ಟಿ ಹೀಗಿದೆ:
- ಶ್ರೀ ಎಚ್. ವಿ. ನಂಜುಂಡಯ್ಯ – ೧೯೧೫-೧೯೨೦
- ಸರ್. ಎಂ. ಕಾಂತರಾಜ ಅರಸ್ – ೧೯೨೦-೧೯೨೩
- ಶ್ರೀ ಕಂಠೀರವ ನರಸಿಂಹರಾಜ ಒಡೆಯರ್ ಬಹದ್ದೂರ್ – ೧೯೨೪ – ೧೯೪೦
- ಶ್ರೀ ಜಯಚಾಮರಾಜ ಒಡೆಯರ್ ಬಹದ್ದೂರ್ – ೧೯೪೦-೧೯೪೦
- ಶ್ರೀ ಬಸವಪ್ರಭು ರಾಜಾ ಲಖಮನಗೌಡ ಸರದೇಸಾಯಿ ಬಹದ್ದೂರ್ – ೧೯೪೧-೧೯೪೬
- ಶ್ರೀ ಲೋಕೂರ್ ನಾರಾಯಣರಾವ್ ಸ್ವಾಮಿರಾವ್ – ೮-೬-೧೯೪೭ ರಿಂದ ೨೯-೧೨-೧೯೪೭
- ಶ್ರೀ ತಿರುಮಲೆ ತಾತಾಚಾರ್ಯ ಶರ್ಮ – ೨೯-೧೨-೧೯೪೭ ರಿಂದ ೬-೩-೧೯೪೯
- ಶ್ರೀ ರೆವರೆಂಡ್ ಉತ್ತಂಗಿ ಚೆನ್ನಪ್ಪ – ೬-೩-೧೯೪೯ ರಿಂದ ೧೭-೧೨-೧೯೫೦
- ಶ್ರೀ ಎಂ. ಆರ್. ಶ್ರೀನಿವಾಸ ಮೂರ್ತಿ – ೧೭-೧೨-೧೯೫೦ ರಿಂದ ೧೬-೯-೧೯೫೩
- ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್ – ೩೦-೯-೧೯೫೩ ರಿಂದ ೯-೫-೧೯೫೪
- ಪ್ರೊ. ಎ. ಎನ್. ಮೂರ್ತಿ ರಾವ್ ೯-೫-೧೯೫೪ ರಿಂದ೧೭-೫-೧೯೫೬
- ಶ್ರೀ ಬಿ. ಶಿವಮೂರ್ತಿ ಶಾಸ್ತ್ರಿ – ೧೭-೫-೧೯೫೬ ರಿಂದ ೨೫-೧೦-೧೯೬೪
- ಪ್ರೊ. ಜಿ. ವೆಂಕಟಸುಬ್ಬಯ್ಯ – ೨೫-೧೦-೧೯೬೪ ರಿಂದ ೧೧-೬-೧೯೬೯
- ಶ್ರೀ ಜಿ. ನಾರಾಯಣ – ೧೧-೬-೧೯೬೯ ರಿಂದ ೨೩-೭-೧೯೭೮
- ಡಾ. ಹಂಪ ನಾಗರಾಜಯ್ಯ – ೨೩-೭-೧೯೭೮ ರಿಂದ ೧೯-೨-೧೯೮೬
- ಹೆಚ್. ಬಿ. ಜ್ವಾಲನಯ್ಯ – ೧೯-೨-೧೯೮೬ ರಿಂದ ೧-೧೧-೧೯೮
- ಪ್ರೊ. ಜಿ. ಎಸ್. ಸಿದ್ದಲಿಂಗಯ್ಯ – ೭ ೨-೨-೧೯೮೯ ರಿಂದ ೧೪-೫-೧೯೯೨
- ಶ್ರೀ ಗೊ. ರು. ಚನ್ನಬಸಪ್ಪ – ೧೪-೫-೧೯೯೨ ರಿಂದ ೨೨-೬-೧೯೯೫
- ಡಾ. ಸಾ. ಶಿ. ಮರುಳಯ್ಯ – ೨೨-೬-೧೯೯೫ ರಿಂದ ೧೦-೭-೧೯೯೮
- ಶ್ರೀ ಎನ್. ಬಸವಾರಾಧ್ಯ – ೧೦-೭-೧೯೯೮ ರಿಂದ ೧೧-೭-೨೦೦೧
- ಶ್ರೀ ಹರಿಕೃಷ್ಣ ಪುನರೂರು – ೧೧-೭-೨೦೦೧ ರಿಂದ ೨-೧೧-೨೦೦೪
- ಪ್ರೊ. ಚಂದ್ರಶೇಖರ ಪಾಟೀಲ (ಚಂಪಾ) – ೨-೧೧-೨೦೦೪ ರಿಂದ ೩೦-೪-೨೦೦೮
- ಡಾ. ನಲ್ಲೂರು ಪ್ರಸಾದ್ ಆರ್. ಕೆ – ೨೭-೮-೨೦೦೮ ರಿಂದ ೨೭-೨-೨೦೧೨
- ಶ್ರೀ ಪುಂಡಲೀಕ ಹಾಲಂಬಿ – ೦೩-೦೫-೨೦೧೨ ರಿಂದ ಈಗಿನವರೆಗೆ