ಸಾಂದರ್ಭಿಕ ಚಿತ್ರ 
ಸಂಚಯ

ಯುಗಾದಿ: ಯುಗದ ಆದಿ-ಹೊಸ ಚಿಂತನೆಗೆ ಹಾದಿ

ಸಂತೋಷ, ದುಃಖ, ಸಿಟ್ಟು, ಹೆದರಿಕೆ, ಜಿಗುಪ್ಸೆ, ಆಶ್ಚರ್ಯ ಇವೆಲ್ಲ ಜೀವನದ ನಿಜ ಸಂಕೇತಗಳಾಗಿವೆ.

ಮೊನ್ನೆಯಷ್ಟೇ ಕಳೆದ ಹೋಳಿ ಹಬ್ಬದ ರಂಗು ಆರುವುದರೊಳಗೆ ಯುಗಾದಿ ಬಂದಿದೆ. ಇದು ಹಿಂದೂಗಳಿಗೆ ಹೊಸ ವರ್ಷದ ಆರಂಭದ ದಿನ.

'ಯುಗಾದಿ'ಯು ಸಂಸ್ಕೃತದ ಪದವಾಗಿದೆ. ಯುಗ ಎಂದರೆ ವಯಸ್ಸು, ಆದಿ ಎಂದರೆ ಆರಂಭ, ಒಟ್ಟಾರೆ ಯುಗಾದಿ ಎಂದರೆ ಚೈತ್ರಮಾಸದ ಆರಂಭ ಎಂಬುದಾಗಿದೆ. ಈ ಸಮಯದಲ್ಲಿ ಚಂದ್ರನು ತನ್ನ ಕಕ್ಷೆ ಬದಲಿಸುವುದರಿಂದ ಇದನ್ನು ಚಾಂದ್ರಮಾನ ಯುಗಾದಿ ಎಂದು ಕರೆಯುತ್ತಾರೆ.

ಯುಗಾದಿಯನ್ನು ಕೋಗಿಲೆ ಕುಹೂ ಕುಹೂ….. ಎಂದು ಇಂಪಾಗಿ ಹಾಡಿ ಸ್ವಾಗತಿಸಿದರೆ, ರತ್ನಪಕ್ಷಿಯು ದರುಶನ ನೀಡಿ ಶುಭ ಕೋರುತ್ತದೆ. ಯುಗಾದಿ ಪಾಡ್ಯದ ದಿನ ರತ್ನಪಕ್ಷಿಯನ್ನು ನೋಡಿದರೆ ಶುಭವಾಗುತ್ತದೆ ಎಂಬ ವಾಡಿಕೆ ಇದೆ.

ಸಂತೋಷ, ದುಃಖ, ಸಿಟ್ಟು, ಹೆದರಿಕೆ, ಜಿಗುಪ್ಸೆ, ಆಶ್ಚರ್ಯ ಇವೆಲ್ಲ ಜೀವನದ ನಿಜ ಸಂಕೇತಗಳಾಗಿವೆ. ಅದೇ ರೀತಿ ನಾವು ಬಳಸುವ ಬೇವು ಕಹಿಯನ್ನೂ, ಬೆಲ್ಲ ಸಿಹಿಯನ್ನು, ಮೆಣಸಿನಕಾಯಿ ಕೋಪ, ಉಪ್ಪು ಹೆದರಿಕೆ, ಹುಣಸೆ ಜಿಗುಪ್ಸೆ ಮತ್ತು ಮಾವು ಆಶ್ಚರ್ಯವನ್ನು ಸೂಚಿಸುತ್ತದೆ. ಈ ಆರೂ ರುಚಿಗಳ ಸಮ್ಮಿಲನವನ್ನು ಸೇವಿಸುವುದು ಯುಗಾದಿ ಆಚರಣೆಯ ಪದ್ಧತಿಯಾಗಿದೆ.

ಯುಗಾದಿಯಂದು ಮನೆಯ ಬಾಗಿಲನ್ನು ಮಾವಿನ ತಳಿರಿನಿಂದ ಸಿಂಗರಿಸುವುದರ ಉದ್ದೇಶ ಹೊಸ ವರ್ಷವು ಸಮೃದ್ಧ ಬೆಳೆಯೊಂದಿಗೆ ಕ್ಷೇಮವನ್ನು ಉಂಟುಮಾಡಲಿ ಎಂಬುದನ್ನು ಸೂಚಿಸುವುದು.

ಗೋಮಯ-ಗೋಮೂತ್ರವನ್ನು ಬಳಸಿ ಮನೆಯನ್ನು ಸ್ವಚ್ಛಗೊಳಿಸುವುದು. ಎಲ್ಲಾ ಕೊಳೆಗಳು ತೊಲಗಲಿ ಎಂದು. ಬಣ್ಣ ಬಣ್ಣದ ರಂಗೋಲಿ ಸಹ ಹೊಸತನ್ನು ಸ್ವಾಗತಿಸಿ ಹಷ೯ ಹೆಚ್ಚಿಸುವುದರ ಸಂಕೇತ. ಹೋಳಿಗೆ, ತುಪ್ಪ,ಶಾವಿಗೆ, ಬೇವು ಬೆಲ್ಲಗಳ ಮಿಶ್ರಣದ ನೈವೇದ್ಯವು ದೈವ ಸಂಪ್ರೀತಿಗಾಗಿ. ದೈವದೆದುರು ಮಾನವ ಅತಿ ಚಿಕ್ಕವ ಅದನ್ನು ಒಪ್ಪಿಕೊಂಡು ದೈವ ಕೃಪೆಗೆ ಕೋರುವುದು ಪದ್ಧತಿ . ಬೇವು-ಬೆಲ್ಲದ ವಿನಿಮಯವು ಬದುಕಿನಲ್ಲಿ ಎರಡೂ ಇರಲಿ, ಬೆಲ್ಲವೇ ಹೆಚ್ಚು ದೊರೆಯಲಿ ಎಂಬ ಆಶಯದಿಂದ ಯುಗಾದಿ ಹಬ್ಬವು ಹೊಸ ವಿಚಾರ , ಸತ್ಕಾರ್ಯ ಸಮೃದ್ಧ ಆರೋಗ್ಯವನ್ನು ಆಶಿಸುತ್ತ ಯುಗಾದಿಯೊಂದಿಗೆ ಸಕಾರಾತ್ಮಕ ಚಿಂತನೆಯೊಂದಿಗೆ ಹೊಸ ಹಾದಿಯಲ್ಲಿ ನಡೆಯುವುದು ಶ್ರೇಯಸ್ಸು.

ಲೇಖನ: ಭಾನು ಶಿವಶಂಕರ ಎಮ್ಮಿಯವರ

ಬೆಂಗಳೂರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT