ಸಾಂದರ್ಭಿಕ ಚಿತ್ರ 
ಸಂಚಯ

ಯುಗಾದಿ: ಯುಗದ ಆದಿ-ಹೊಸ ಚಿಂತನೆಗೆ ಹಾದಿ

ಸಂತೋಷ, ದುಃಖ, ಸಿಟ್ಟು, ಹೆದರಿಕೆ, ಜಿಗುಪ್ಸೆ, ಆಶ್ಚರ್ಯ ಇವೆಲ್ಲ ಜೀವನದ ನಿಜ ಸಂಕೇತಗಳಾಗಿವೆ.

ಮೊನ್ನೆಯಷ್ಟೇ ಕಳೆದ ಹೋಳಿ ಹಬ್ಬದ ರಂಗು ಆರುವುದರೊಳಗೆ ಯುಗಾದಿ ಬಂದಿದೆ. ಇದು ಹಿಂದೂಗಳಿಗೆ ಹೊಸ ವರ್ಷದ ಆರಂಭದ ದಿನ.

'ಯುಗಾದಿ'ಯು ಸಂಸ್ಕೃತದ ಪದವಾಗಿದೆ. ಯುಗ ಎಂದರೆ ವಯಸ್ಸು, ಆದಿ ಎಂದರೆ ಆರಂಭ, ಒಟ್ಟಾರೆ ಯುಗಾದಿ ಎಂದರೆ ಚೈತ್ರಮಾಸದ ಆರಂಭ ಎಂಬುದಾಗಿದೆ. ಈ ಸಮಯದಲ್ಲಿ ಚಂದ್ರನು ತನ್ನ ಕಕ್ಷೆ ಬದಲಿಸುವುದರಿಂದ ಇದನ್ನು ಚಾಂದ್ರಮಾನ ಯುಗಾದಿ ಎಂದು ಕರೆಯುತ್ತಾರೆ.

ಯುಗಾದಿಯನ್ನು ಕೋಗಿಲೆ ಕುಹೂ ಕುಹೂ….. ಎಂದು ಇಂಪಾಗಿ ಹಾಡಿ ಸ್ವಾಗತಿಸಿದರೆ, ರತ್ನಪಕ್ಷಿಯು ದರುಶನ ನೀಡಿ ಶುಭ ಕೋರುತ್ತದೆ. ಯುಗಾದಿ ಪಾಡ್ಯದ ದಿನ ರತ್ನಪಕ್ಷಿಯನ್ನು ನೋಡಿದರೆ ಶುಭವಾಗುತ್ತದೆ ಎಂಬ ವಾಡಿಕೆ ಇದೆ.

ಸಂತೋಷ, ದುಃಖ, ಸಿಟ್ಟು, ಹೆದರಿಕೆ, ಜಿಗುಪ್ಸೆ, ಆಶ್ಚರ್ಯ ಇವೆಲ್ಲ ಜೀವನದ ನಿಜ ಸಂಕೇತಗಳಾಗಿವೆ. ಅದೇ ರೀತಿ ನಾವು ಬಳಸುವ ಬೇವು ಕಹಿಯನ್ನೂ, ಬೆಲ್ಲ ಸಿಹಿಯನ್ನು, ಮೆಣಸಿನಕಾಯಿ ಕೋಪ, ಉಪ್ಪು ಹೆದರಿಕೆ, ಹುಣಸೆ ಜಿಗುಪ್ಸೆ ಮತ್ತು ಮಾವು ಆಶ್ಚರ್ಯವನ್ನು ಸೂಚಿಸುತ್ತದೆ. ಈ ಆರೂ ರುಚಿಗಳ ಸಮ್ಮಿಲನವನ್ನು ಸೇವಿಸುವುದು ಯುಗಾದಿ ಆಚರಣೆಯ ಪದ್ಧತಿಯಾಗಿದೆ.

ಯುಗಾದಿಯಂದು ಮನೆಯ ಬಾಗಿಲನ್ನು ಮಾವಿನ ತಳಿರಿನಿಂದ ಸಿಂಗರಿಸುವುದರ ಉದ್ದೇಶ ಹೊಸ ವರ್ಷವು ಸಮೃದ್ಧ ಬೆಳೆಯೊಂದಿಗೆ ಕ್ಷೇಮವನ್ನು ಉಂಟುಮಾಡಲಿ ಎಂಬುದನ್ನು ಸೂಚಿಸುವುದು.

ಗೋಮಯ-ಗೋಮೂತ್ರವನ್ನು ಬಳಸಿ ಮನೆಯನ್ನು ಸ್ವಚ್ಛಗೊಳಿಸುವುದು. ಎಲ್ಲಾ ಕೊಳೆಗಳು ತೊಲಗಲಿ ಎಂದು. ಬಣ್ಣ ಬಣ್ಣದ ರಂಗೋಲಿ ಸಹ ಹೊಸತನ್ನು ಸ್ವಾಗತಿಸಿ ಹಷ೯ ಹೆಚ್ಚಿಸುವುದರ ಸಂಕೇತ. ಹೋಳಿಗೆ, ತುಪ್ಪ,ಶಾವಿಗೆ, ಬೇವು ಬೆಲ್ಲಗಳ ಮಿಶ್ರಣದ ನೈವೇದ್ಯವು ದೈವ ಸಂಪ್ರೀತಿಗಾಗಿ. ದೈವದೆದುರು ಮಾನವ ಅತಿ ಚಿಕ್ಕವ ಅದನ್ನು ಒಪ್ಪಿಕೊಂಡು ದೈವ ಕೃಪೆಗೆ ಕೋರುವುದು ಪದ್ಧತಿ . ಬೇವು-ಬೆಲ್ಲದ ವಿನಿಮಯವು ಬದುಕಿನಲ್ಲಿ ಎರಡೂ ಇರಲಿ, ಬೆಲ್ಲವೇ ಹೆಚ್ಚು ದೊರೆಯಲಿ ಎಂಬ ಆಶಯದಿಂದ ಯುಗಾದಿ ಹಬ್ಬವು ಹೊಸ ವಿಚಾರ , ಸತ್ಕಾರ್ಯ ಸಮೃದ್ಧ ಆರೋಗ್ಯವನ್ನು ಆಶಿಸುತ್ತ ಯುಗಾದಿಯೊಂದಿಗೆ ಸಕಾರಾತ್ಮಕ ಚಿಂತನೆಯೊಂದಿಗೆ ಹೊಸ ಹಾದಿಯಲ್ಲಿ ನಡೆಯುವುದು ಶ್ರೇಯಸ್ಸು.

ಲೇಖನ: ಭಾನು ಶಿವಶಂಕರ ಎಮ್ಮಿಯವರ

ಬೆಂಗಳೂರು

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್