ಸಾಂದರ್ಭಿಕ ಚಿತ್ರ 
ಪದ್ಯ ಪರಿಷೆ

ಕವನ ಸುಂದರಿ: ಮಮತಾ ಸಾಗರ: ನಾವು ಪದ ಸಾಲೆಯಲ್ಲಿ ಪಳಗಿದವರು... 

ಭಾರತ, ಭುವನ ಸುಂದರಿ ಮುಕುಟ ತೊಟ್ಟು ಸಂಭ್ರಮಿಸುತ್ತಿರುವ ಈ ಹೊತ್ತಿನಲ್ಲಿ ಹೆಣ್ಣಿನ ಅಂದಚಂದವಲ್ಲದೆ ಅವಳ ಅಂತರಂಗ ದೈವವನ್ನೂ ಗುರುತಿಸುವ, ಗೌರವಿಸುವ ಪ್ರಯತ್ನ- ಕವನ ಸುಂದರಿ


ನಾವು ಪದ ಸಾಲೆಯಲ್ಲಿ

ಪಳಗಿದವರು

ನಾವು ಪದ ಸಾಲೆಯಲ್ಲಿ ಪಳಗಿದವರು

ಪದಸಂಚಾರ ಮಾಡುವವರು
ಮೆತ್ತುಕೊಳ್ಳುವ ನೋಟಗಳ ಮೈತುಂಬಾ
ಹೊತ್ತು ತಿರುಗುವವರು

 

ಕಣ್ಣಲ್ಲೇ ಜೊಲ್ಲ ಸುರಿಸಿ
ಉಂಗುಷ್ಟದಿಂದ ಬೆನ್ನಹುರಿಗಂಟ ತೆವಳಿ,
ಬಾಗಿದ ನಡು ಬಳಸಿ, ಮೊಲೆ ಮುಡಿ ಎನ್ನದೆ
ಹೊಕ್ಕುಳ ಸುತ್ತ ತೊಡೆಸುತ್ತ ಯೋನಿ ಜಪ ಮಾಡುತ್ತ
ಸರ್ಪ ಸುತ್ತಿನ ಹಾಗೆ, ನೋಟಸುತ್ತಿನ
ದೃಷ್ಟಿ ಬೊಬ್ಬೆಗಳು
ಮೈಸುಟ್ಟ ನೆನಪು ಮಾಗದಿದ್ದರು
ಮೈಯೆಲ್ಲಾ ಕಣ್ಣಾಗಿಸಿಕೊಂಡು ಪ್ರೀತಿಗೆ ಸೋತವರು

 

ಕತ್ತಲ ಘಳಿಗೆಯಲ್ಲಿ ಬೆಳಕ ಬಿತ್ತುವ ಪುಳಕಗಳ
ಲೇಪಿಸಿಕೊಂಡು ಘಮಗುಡುವ ನೆನಪುಗಳ
ಎದೆಯಲ್ಲಿ ಬೆಚ್ಚಗೆ ಕಾಪಿಡುವವರು

 

ನಮ್ಮದು, ಒಳಗಣ್ಣು ಹೊರಗಣ್ಣು
ನಭೋಮಂಡಲದಾಚೆಗೂ ನೋಟ ಬೀರುವ ಮುಗಿಲ ಕಣ್ಣು
ಉಮ್ಮಳಿಸಿದರೂ, ನೀರ ಹರಿಯಲುಗೊಡದ ಕಡಲ ಕಣ್ಣು

 

ಬೆನ್ನ ಹತ್ತುವ ಈ ಕೆಂಪು ಕಣ್ಣು
ಮೆಳ್ಳಗಣ್ಣು ಕಳ್ಳ ಸನ್ನೆ ಮಾಡೋ ಪಿಳ್ಳೆಗಣ್ಣು
ಸುಕ್ಕುಗಟ್ಟಿದ ಹಣ್ ಹಣ್ಣು ಗೆರೆಗಣ್ಣು
ಹೀಗೆ ಊರೂರ ಕಣ್ಣುಗಳ
ಹರಿದಾಡುವ ಜಿಗಟು ನೋಟವ ಚಿವುಟಿ,
ಆ ದೃಷ್ಟಿ, ಈ ದೃಷ್ಟಿ, ತಾಯಿ ದೃಷ್ಟಿ, ನಾಯಿ ದೃಷ್ಟಿ
ಅಂತಂದು ಒಂದು ಹಿಡಿ ಕಲ್ಲುಪ್ಪು, ಒಣಮೆಣಸ 
ಬೆಳಗಿ ಬಿಸಾಡಿ ಕಳೆಯಿತು ಹೋಗೆಂದು
ಕೈ ಝಾಡಿಸಿ ಮುನ್ನಡೆವ ನಾವು,
ಪದ ಸಾಲೆಯಲ್ಲಿ ಪಳಗಿದವರು
ಪದ ಸಂಚಾರ ಮಾಡುವವರು

 

   



ಕವಯಿತ್ರಿ ಮಮತಾ ಸಾಗರ ಅವರು ಜನಿಸಿದ್ದು 1966 ಜನವರಿ 19ರಂದು. ತಾಯಿ ಎಸ್‌.ಶೇಖರಿಬಾಯಿ, ತಂದೆ ಎನ್‌.ಗಿರಿರಾಜ್‌. ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯದಲ್ಲಿ ಅತೀವ ಆಸಕ್ತಿಯಿದ್ದ ಮಮತಾ ಅವರು ಹಲವಾರು ಕವಿಗೋಷ್ಠಿಗಳಲ್ಲಿ ಕವನ ರಚಿಸಿ ವಾಚಿಸಿದ್ದಾರೆ. ಪ್ರಸ್ತುತ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇವರು ಬರೆದಿರುವ ಪ್ರಮುಖ ಕವನ ಸಂಕಲನಗಳೆಂದರೆ ಕಾಡ ನವಿಲಿನ ಹೆಜ್ಜೆ, ನದಿಯ ನೀರಿನ ತೇವ ಮುಂತಾದವು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT