ಸಾಂದರ್ಭಿಕ ಚಿತ್ರ 
ಪದ್ಯ ಪರಿಷೆ

ಕವನ: ಗೊರೂರು ಪಂಕಜ: ಕವನದ ಶೀರ್ಷಿಕೆ: ಗುರಿಗಳೆಲ್ಲ ಕಣ್ಣ ಮುಂದೆ

ಸಾಹಿತ್ಯ, ಸಮಾಜ ಸೇವೆ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಗೊರೂರು ಪಂಕಜ ಬರೆದಿರುವ ಕವನ

ಜಡಹಿಡಿದ ಮಗ್ಗುಲಿಂದ ಹೊರಳಿ...
ಸುಗಂಧ ಪುಷ್ಪವಾಗಿ ಅರಳಿ...
ಅಜ್ಜ ಮುತ್ತಜ್ಜ ಅವರಜ್ಜ ಅವರಜ್ಜನಜ್ಜ
ಎಲ್ಲರೂ ಅರಳಿದ್ದು
ಸುಗಂಧ ಬೀರಿದ್ದು
ಹಾದಿ ಸವೆಸಿದ್ದು ಮುಗಿಲ ಮುಟ್ಟಿಸಿದ್ದು ಎಲ್ಲವೂ ಮಗ್ಗುಲಾಗುವ ಕ್ರಿಯೆಯಿಂದ

ಯಾರಿಗೆ ತಾನೆ ಬೇಕು? 
ಜಡ ಹಿಡಿದ ಮಗ್ಗಲು
ಅನುಭವಿಸಿದ್ದು ಆತಂಕ ಪಟ್ಟಿದ್ದು
ನಮ್ಮೆಲ್ಲ ಅಂಗಾಂಗಗಳ
ಭಾರವನ್ನು ಒಂದೆಡೆಗೆ ತಳ್ಳಿದ್ದು
ಪ್ರಪಾತಕ್ಕೆ ಬಿದ್ದದ್ದು
ಅದೇ ಮಗ್ಗುಲಲ್ಲವೇ
.............

ಅನುಭವಗಳನ್ನೆಲ್ಲ ಒರೆಹಚ್ಚಿ
ಮನಕ್ಕೊಂದು ದೀಪ ಹಚ್ಚಿ
ಅಬ್ಬರದ ಗಾಳಿ ಹಾರಿ ಬರದಂತೆ 
ಕಣ್ಣ ಕಾವಲಿಸಿ
ಎಲ್ಲರಿಗೂ ಬಿಚ್ಚಲಾಗುವುದಿಲ್ಲ
ಕಡಲಾಳದ ಕನಸುಗಳನ್ನೆಲ್ಲ
ಮೆಚ್ಚಿಕೊಳ್ಳಲಾರೆ ಮತ್ಯಾರದೊ
ಕಣ್ಣಿಲ್ಲದ ಕನವರಿಕೆಗಳ
ಆದರೂ  ಒಮ್ಮೊಮ್ಮೆ ಹೊಂಕರಿಸಬೇಕು!
ಮತ್ತೊಮ್ಮೆ ಎಲ್ಲವನ್ನು ಧಿಕ್ಕರಿಸಬೇಕು!

ಹೂಂಕಾರ-ಧಿಕ್ಕಾರಗಳ ನಡುವೆ
ಅದ್ಭುತ ಲೋಕವೊಂದು
ನಮ್ಮೆಲ್ಲರನು ಸ್ವಾಗತಿಸಲು ಅಣಿಯಾಗಿದೆ
ಮಗ್ಗುಲಾಗಿ.......
ಮಗ್ಗುಲಾಗಿ .......
ಮಗ್ಗುಲಾಗಿ ಸಾಗಿ 
ಮೊಗ್ಗುಗಳೆ....!

 ಸಾಹಿತ್ಯ, ಸಮಾಜ ಸೇವೆ, ಪತ್ರಿಕೋದ್ಯಮ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಗೊರೂರು ಪಂಕಜ ಅವರು, ಪ್ರತಿಷ್ಠಿತ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿ, ಬಿಎಂಶ್ರೀ ಕಾವ್ಯ ಪುರಸ್ಕಾರ, ರಾಜೀವ್ ಗಾಂಧಿ ರಾಷ್ಟ್ರೀಯ ಪ್ರಶಸ್ತಿ,. ಇಂದಿರಾ ಪ್ರಿಯದರ್ಶಿನಿ, ಕರ್ನಾಟಕ ವಿಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

BMTC ಬಸ್ ಚಾಲಕನಿಗೆ ಫಿಡ್ಸ್, ಚಿನ್ನಸ್ವಾಮಿ ಕ್ರೀಡಾಂಗಣ ರಸ್ತೆಯಲ್ಲಿ ಸರಣಿ ಅಪಘಾತ

ಬೆಂಗಳೂರು: ರಾತ್ರಿಯಿಡೀ ಸುರಿದ ಮಳೆಯಿಂದ ಹಲವೆಡೆ ಜಲಾವೃತ, ಸಂಚಾರ ದಟ್ಟಣೆ, ಇಂದಿನ IMD ವರದಿ!

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

SCROLL FOR NEXT