ಎಚ್.ಎಎಲ್ ಅಭಿವೃದ್ಧಿಪಡಿಸಿರುವ ಆರ್ಬಿಟರ್ ಕ್ರಾಫ್ಟ್ ಮಾಡ್ಯೂಲ್ ಸ್ಟ್ರಕ್ಚರ್ 
ವಿಜ್ಞಾನ-ತಂತ್ರಜ್ಞಾನ

ಚಂದ್ರಯಾನ-2ಗೆ ಇಸ್ರೋ ಸಿದ್ಧತೆ

ಚಂದ್ರಯಾನ-1ರ ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ-ಇಸ್ರೋ ಚಂದ್ರಯಾನ-2 ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಸಂಸ್ಥೆ ಆರ್ಬಿಟರ್ ಕ್ರಾಫ್ಟ್ ಮಾಡ್ಯೂಲ್ ಸ್ಟ್ರಕ್ಚರ್ ನೌಕೆಯನ್ನು ತಯಾರಿಸಿ ಇಸ್ರೋಗೆ ರವಾನಿಸಿದೆ.

ಬೆಂಗಳೂರು: ಚಂದ್ರಯಾನ-1ರ ಯಶಸ್ಸಿನ ಬೆನ್ನಲ್ಲೇ ಭಾರತೀಯ ಬಾಹ್ಯಾಕಾಶ ಸಂಸ್ಥೆ-ಇಸ್ರೋ ಚಂದ್ರಯಾನ-2 ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಇದಕ್ಕಾಗಿ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ ಸಂಸ್ಥೆ ಆರ್ಬಿಟರ್ ಕ್ರಾಫ್ಟ್ ಮಾಡ್ಯೂಲ್ ಸ್ಟ್ರಕ್ಚರ್ ನೌಕೆಯನ್ನು ತಯಾರಿಸಿ ಇಸ್ರೋಗೆ ರವಾನಿಸಿದೆ.

ಮೂಲಗಳ ಪ್ರಕಾರ ಇಸ್ರೋದ ಈ ಉದ್ದೇಶಿತ ಯೋಜನೆ 2017 ಅಥವಾ 18ರಲ್ಲಿ ಪೂರ್ಣಗೊಳ್ಳಲ್ಲಿದ್ದು, ಅದೇ ವರ್ಷ ಚಂದ್ರಯಾನ-2 ನಭಕ್ಕೆ ಹಾರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಎಚ್ ಎಎಲ್ ಚಂದ್ರಯಾನ-2ಗೆ ಅಗತ್ಯವಿರುವ ಆರ್ಬಿಟರ್ ಕ್ರಾಫ್ಟ್ ಮಾಡ್ಯೂಲ್ ಸ್ಟ್ರಕ್ಚರ್ ಪರಿಭ್ರಮಣ ನೌಕೆಯನ್ನು ತಯಾರಿಸಿ ಇಸ್ರೋಗೆ ಹಸ್ತಾಂತರಿಸಿದ್ದು, ಯೋಜನಾ ಕಾರ್ಯ ಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. ಇನ್ನುಳಿದಂತೆ ಚಂದ್ರಯಾನ-2ಗೆಪ್ರಮುಖವಾಗಿ ಕಕ್ಷೆ ಪರಿಭ್ರಮಣ ನೌಕೆ ಮತ್ತು ಲ್ಯಾಂಡರ್ ನೌಕೆಗಳ ಅಗತ್ಯವಿದ್ದು, ಅವುಗಳ ತಯಾರಿಗೆ ಇಸ್ರೋ ಮುಂದಾಗಿದೆ.

ಚಂದ್ರನ ಕಕ್ಷೆಯವರೆಗೂ ಸಾಗುವ ಪರಿಭ್ರಮಣ ನೌಕೆ, ಉಪಗ್ರಹವನ್ನು ಚಂದ್ರನ ಮೇಲ್ಮೈವರೆಗೂ ಸಾಗಿಸಿ ಬಳಿಕ ಚಂದ್ರನ ಮೇಲ್ಮೈ ಅಂಗಳದ ಮೇಲೆ ಲ್ಯಾಂಡರ್ ನೌಕೆಯನ್ನು ಇಳಿಸುತ್ತದೆ. ಈ ಎರಡೂ ಪ್ರಮುಖ ನೌಕೆಗಳನ್ನು ಹೊಂದುವ ಚಂದ್ರಯಾನ-2 ಉಪಗ್ರಹವನ್ನು ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಪ್ರಬಲ ಉಡಾವಣಾ ವಾಹನವಾದ ಜಿ.ಎಸ್.ಎಲ್.ವಿ ಎಂಕೆ-2 ಮೂಲಕ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ತಿಳಿಸಿದೆ.

ಇಸ್ರೋದ ಬಾಹ್ಯಾಕಾಶ ಯಾನಗಳಿಗೆ ಬೆಂಗಳೂರಿನಲ್ಲಿರುವ ಹೆಚ್.ಎ.ಎಲ್. ಸಂಸ್ಥೆ ತಾಂತ್ರಿಕ ಉಪಕರಣಗಳನ್ನು, ಸಾಧನಗಳನ್ನು ಒದಗಿಸುತ್ತ ಬಂದಿದ್ದು, ಚಂದ್ರಯಾನ 2ರಲ್ಲೂ ಹೆಚ್.ಎ.ಎಲ್.ನ ಹೆಚ್ಚಿನ ಸಹಯೋಗ ಮುಂದುವರೆಯಲಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT