ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಮಂಗಳಯಾನ ನೌಕೆಗೆ ಇಂಧನ ಕೊರತೆ ಇಲ್ಲ

ಇಸ್ರೋ ಮಹತ್ವಾಕಾಂಕ್ಷೆ ಯೋಜನೆಯಾದ `ಮಂಗಳಯಾನ'ದ ನೌಕೆ ಮಂಗಳ ಗ್ರಹದಲ್ಲೇ ಹಲವು ವರ್ಷಗಳವರೆಗೆ ಉಳಿಯಲು ಅಗತ್ಯವಾದ ಇಂಧನ...

ಬೆಂಗಳೂರು: ಇಸ್ರೋ ಮಹತ್ವಾಕಾಂಕ್ಷೆ ಯೋಜನೆಯಾದ `ಮಂಗಳಯಾನ'ದ ನೌಕೆ ಮಂಗಳ ಗ್ರಹದಲ್ಲೇ ಹಲವು ವರ್ಷಗಳವರೆಗೆ ಉಳಿಯಲು ಅಗತ್ಯವಾದ ಇಂಧನ ಹೊಂದಿದೆ ಎಂದು ಇಸ್ರೋ ಮುಖ್ಯಸ್ಥ ಕಿರಣ್ ಕುಮಾರ್ ತಿಳಿಸಿದರು.

ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಸೈನ್ಸ್‍ನ `ಸಮಾಜಕ್ಕಾಗಿ ವಿಜ್ಞಾನ' ಜಾಗತಿಕ ಸಮಾವೇಶದಲ್ಲಿ ಮಾತನಾಡಿದ ಅವರು, 45ಕೆಜಿ ಇಂಧನ ನೌಕೆಯಲ್ಲಿ ಇನ್ನೂ ಉಳಿದಿದ್ದು, ಇದನ್ನೇಬಳಸಿಕೊಳ್ಳಲಾಗುತ್ತಿದೆ. ಮಂಗಳ ಗ್ರಹಕ್ಕೆ ಉಪಗ್ರಹ ಕಳುಹಿಸಿದ ನಂತರ ಇಂಧನದಲ್ಲಿನ ಸಮಸ್ಯೆಯಿಂದಾಗಿ 6 ತಿಂಗಳಿಗೂ ಹೆಚ್ಚಿನ ಕಾಲ ಉಳಿಯಲು ಸಾಧ್ಯವಿಲ್ಲ ಎಂದೇ ಭಾವಿಸಲಾಗಿತ್ತು. ಮಾರ್ಚ್ ವೇಳೆಗೆ ಇಂಧನ ಲಭ್ಯತೆಯಿಂದ ಇನ್ನೂ 6 ತಿಂಗಳ ಕಾಲ ನೌಕೆ ಉಳಿಯಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಇಂಧನ ಇನ್ನೂ ಉಳಿದಿರುವುದರಿಂದ ಹಲವು ವರ್ಷಗಳವರೆಗೂ ನೌಕೆ ಉಳಿಯುವ ಸಾಧ್ಯತೆಯಿದೆ ಎಂದರು.

ಉಪಗ್ರಹದ ಉಡಾವಣೆ ವೇಳೆ ನೌಕೆಯಲ್ಲಿ ಸಾಕಷ್ಟು ಸಮಸ್ಯೆಗಳು ಉಂಟಾಗಿದ್ದವು. ಆದರೆ, ಉಡಾವಣೆಯಾಗುವಾಗ ಯಾವುದೇ ದುರಂತ ಅಥವಾ ವಿಫಲತೆ ಸಂಭವಿಸಲಿಲ್ಲ. ಉಡಾವಣೆಯ ವೇಳೆ ಲೋಪಗಳ ಬಗ್ಗೆಯೂ ಗುರುತಿಸಬೇಕಿದ್ದು, ಇಂತಹ ಯಾವುದೇ ಸಮಸ್ಯೆಗಳು ಉಂಟಾಗಲಿಲ್ಲ. ಜೂ.8ರಿಂದ ಆರಂಭವಾಗಿ ಜೂ.22ರವರೆಗೆ ಸಂವನಹನದಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿತ್ತು. ಆದರೆ, ಆ ಅವಧಿ ಪೂರ್ಣಗೊಂಡಿದ್ದು, ಯಾವುದೇ ದುರಂತ ಸಂಭವಿಸಲಿಲ್ಲ. ಎರಡೂವರೆ ವರ್ಷಗಳ ಬಳಿಕ ಮತ್ತೆ ಇದೇ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಉಪಗ್ರಹದ ಜೊತೆ ಸಂವಹನ ಸಾಧಿಸಲು ಈಗ ಸಾಧ್ಯವಾಗಿದ್ದು, ಜೂ.19ರಿಂದ ಮತ್ತೆ ಸಂವಹನ ಆರಂಭವಾಗಿದೆ ಎಂದರು. ಮಂಗಳಯಾನ ನೌಕೆ ಗ್ರಹವನ್ನು 100 ಬಾರಿಸುತ್ತಿದ್ದು, ಅಧ್ಯಯನಗಳಿಗೆ ಅಗತ್ಯವಾದ ಛಾಯಾಚಿತ್ರಗಳನ್ನು ಸಂಗ್ರಹಿಸಲಾಗಿದೆ. 400 ಫ್ರೇಮ್ ಗಳಚಿತ್ರಗಳನ್ನು ಇದುವರೆಗೆ ತೆಗೆದಿದ್ದು, ಪ್ರತಿ ಬಾರಿ ಪ್ರದಕ್ಷಿಣೆ ಪೂರ್ಣಗೊಳಿಸುವಾಗ ಮಾಹಿತಿ ಸಂಗ್ರಹಿಸಲಾಗುತ್ತದೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT