ಅತಿಬುದ್ಧಿವಂತನೆಂದು ಹೇಳಿ ಮಾನಸಿಕ ಅಸ್ವಸ್ಥನ ವೀರ್ಯ ದಾನ ಮಾಡಿದ್ದ ಸಂಸ್ಥೆ ವಿರುದ್ಧ ದೂರು! 
ವಿಜ್ಞಾನ-ತಂತ್ರಜ್ಞಾನ

ಅತಿಬುದ್ಧಿವಂತನೆಂದು ಹೇಳಿ ಮಾನಸಿಕ ಅಸ್ವಸ್ಥನ ವೀರ್ಯ ದಾನ ಮಾಡಿದ್ದ ಸಂಸ್ಥೆ ವಿರುದ್ಧ ದೂರು!

ಅನೇಕ ರೀತಿಯ ಮಾನಸಿಕ ಅಸ್ವಸ್ಥತೆಗಳನ್ನು ಹೊಂದಿದ್ದ ವ್ಯಕ್ತಿಯನ್ನು ಅತಿ ಬುದ್ಧಿವಂತನೆಂದು ಹೇಳಿ ಆತನ ವೀರ್ಯವನ್ನು ದಾನ ಮಾಡಿದ್ದ ಸಂಸ್ಥೆ ವಿರುದ್ಧ ಕೆನಡಾದ ಮೂರು ಕುಟುಂಬಗಳು ಪ್ರಕರಣ ದಾಖಲಿಸಿವೆ.

ಒಟ್ಟಾವಾ: ಅನೇಕ ರೀತಿಯ ಮಾನಸಿಕ ಅಸ್ವಸ್ಥತೆಗಳನ್ನು ಹೊಂದಿದ್ದ ವ್ಯಕ್ತಿಯನ್ನು ಅತಿ ಬುದ್ಧಿವಂತನೆಂದು ಹೇಳಿ ಆತನ ವೀರ್ಯವನ್ನು ದಾನ ಮಾಡಿದ್ದ ಸಂಸ್ಥೆ ವಿರುದ್ಧ ಕೆನಡಾದ ಮೂರು ಕುಟುಂಬಗಳು ಪ್ರಕರಣ ದಾಖಲಿಸಿವೆ.
ಕೆನಡಾದ ವೀರ್ಯ ಬ್ಯಾಂಕ್ ಮಾನಸಿಕ ಅಸ್ವಸ್ಥತೆ ಹೊರತಾಗಿಯೂ ಆ ವ್ಯಕ್ತಿಯಿಂದ ವೀರ್ಯವನ್ನು ಪಡೆದಿದ್ದ ಪರಿಣಾಮ ಕಳೆದ ಒಂದು ದಶಕದಲ್ಲಿ ಬ್ರಿಟನ್, ಕೆನಡಾ, ಯುಎಸ್ ನ 36 ಕ್ಕೂ ಹೆಚ್ಚು ಮಹಿಳೆಯರು ಮಾನಸಿಕ ಅಸ್ವಸ್ಥತೆ ಹೊಂದಿದ್ದ ವ್ಯಕ್ತಿಯ ವೀರ್ಯದಿಂದ ಗರ್ಭಧರಿಸಿದ್ದಾರೆ.   
ವೀರ್ಯಬ್ಯಾಂಕ್ ನ ಬೇಜವಾಬ್ದಾರಿತನದ ಬಗ್ಗೆ ಅಕ್ರೋಶಗೊಂಡಿರುವ ಕೆನಡಾ ಕುಟುಂಬಗಳು ಸಂಸ್ಥೆ ವಿರುದ್ಧ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. " ಮಕ್ಕಳಿಲ್ಲದ ದಂಪತಿಗಳು ಇಂತಹ ಸಂಸ್ಥೆಗಳ ಮೇಲೆ ನಂಬಿಕೆ ಇಡುತ್ತಾರೆ. ಆದರೆ ಈ ರೀತಿಯ ಆಘಾತ ಎದುರಾಗುವುದು ಭಯಾನಕ ಎಂದು ಪ್ರಕರಣ ದಾಖಲಿಸಲು ಮುಂದಾಗಿರುವ ಕುಟುಂಬಗಳು ಅಮೆರಿಕ ಮೂಲದ ಕ್ಸೈಟೆಕ್ಸ್ ಕಾರ್ಪೊರೇಶನ್, ಒಂಟಾರಿಯೊದ ಔಟ್ ರೀಚ್ ಆರೋಗ್ಯ ಸೇವೆಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿವೆ.  
ವೀರ್ಯ ಬ್ಯಾಂಕ್ ನ ಸಂಸ್ಥೆಗಳಿಂದ ಮೋಸ ಹೋಗಿರುವ ಸಂಸ್ಥೆಗಳ ವಿರುದ್ಧ ಪ್ರಕರಣ ದಾಖಲಿಸುತ್ತಿರುವ ಕುಟುಂಬಗಳು ಸಂಸ್ಥೆಯಿಂದ 11 .7 ಮಿಲಿಯನ್ ಡಾಲರ್ ಪರಿಹಾರವನ್ನು ಕೇಳಿದ್ದಾರೆ. ಆದರೆ ವೀರ್ಯ ದಾನ ಮಾಡಿದನವ ಬುದ್ಧಿ ಮತ್ತೆಯನ್ನು ತಿರುಚಿವ ಬಗ್ಗೆ ಕುಟುಂಬದವರು ಮಾಡಿರುವ ಆರೋಪ ಕೋರ್ಟ್ ನಲ್ಲಿ ಇನ್ನಷ್ಟೇ ಸಾಬೀತಾಗಬೇಕಿದೆ. 
ವೀರ್ಯದಾನ ಮಾಡಿದ್ದ 39 ವರ್ಷದ ವ್ಯಕ್ತಿ ನರವಿಜ್ಞಾನಕ್ಕೆ ಸಂಬಂಧಿಸಿದಂತೆ ಪಿಹೆಚ್ ಡಿ ಗಾಗಿ ಕೆಲಸ ಮಾಡುತ್ತಿದ್ದಾನೆ, ಆದರೆ ಸ್ಕಿಜೋಫ್ರೇನಿಯಾ ಎಂಬ ನಾರ್ಕಿಸ್ಸಿಸ್ಟಿಕ್ ಪರ್ಸನಾಲಿಟಿ ಡಿಸಾರ್ಡರ್ ನ್ನು ಎದುರಿಸುತ್ತಿದ್ದಾನೆ ಎಂಬ ಮಾಹಿತಿ ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದುಬಂದಿದೆ. ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಈ ವ್ಯಕ್ತಿ 20 ವರ್ಷದ ಹಿಂದೆ ಅಪರಾಧ ಪ್ರಕರಣದಲ್ಲಿ ಜೈಲು ಸೇರಿದ್ದ ಎಂದೂ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ