ಐಆರ್​ಎನ್​ಎಸ್​ಎಸ್ 1ಜಿ ಉಪಗ್ರಹ ಉಡಾವಣೆ (ಸಂಗ್ರಹ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ಐಆರ್​ಎನ್​ಎಸ್​ಎಸ್ 1ಜಿ ಉಪಗ್ರಹ ಉಡಾವಣೆ ಯಶಸ್ವಿ

ಭಾರತದ ಮೊಟ್ಟ ಮೊದಲ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ 7ನೇ ಮತ್ತು ಅಂತಿಮ ಉಪಗ್ರಹ ಐಆರ್​ಎನ್​ಎಸ್​ಎಸ್-1ಜಿ ಯನ್ನು ಗುರುವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ತಲುಪಿದೆ..

ಶ್ರೀಹರಿಕೋಟಾ: ಭಾರತದ ಮೊಟ್ಟ ಮೊದಲ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ 7ನೇ ಮತ್ತು ಅಂತಿಮ ಉಪಗ್ರಹ ಐಆರ್​ಎನ್​ಎಸ್​ಎಸ್-1ಜಿ ಯನ್ನು ಗುರುವಾರ ಮಧ್ಯಾಹ್ನ  ಯಶಸ್ವಿಯಾಗಿ ಉಡಾವಣೆ ಮಾಡಲಾಗಿದ್ದು, ಉಪಗ್ರಹ ಯಶಸ್ವಿಯಾಗಿ ನಿಗದಿತ ಕಕ್ಷೆ ತಲುಪಿದೆ.

ಗುರುವಾರ ಮಧ್ಯಾಹ್ನ ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಇಸ್ರೋ ಸಂಸ್ಥೆ ಮಹತ್ವಾಕಾಂಕ್ಷಿ ಯೋಜನೆ ಐಆರ್​ಎನ್​ಎಸ್​ಎಸ್-1ಜಿ ಯನ್ನು  ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಸುಮಾರು 1,425 ಕೆ.ಜಿ. ತೂಕದ ಐಆರ್​ಎನ್​ಎಸ್​ಎಸ್-1ಜಿ ಉಪಗ್ರಹವನ್ನು ಪಿಎಸ್​ಎಲ್​ವಿ-ಸಿ33 ರಾಕೆಟ್ ಮೂಲಕವಾಗಿ ಯಶಸ್ವಿಯಾಗಿ  ಅಂತರಿಕ್ಷಕ್ಕೆ ರವಾನಿಸಲಾಗಿದೆ. ಅಂತೆಯೇ ಉಪಗ್ರಹ ಯಶಸ್ವಿಯಾಗಿ ಕಕ್ಷೆ ತಲುಪಿದ್ದು, ಇನ್ನು ಕೆಲವೇ ದಿನಗಳಲ್ಲಿ ತನ್ನ ಕಾರ್ಯಾರಂಭ ಮಾಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಪ್ರಸ್ತುತ ಉಡಾವಣೆಯಾಗಿರುವ ಐಆರ್​ಎನ್​ಎಸ್​ಎಸ್-1ಜಿ ಉಪಗ್ರಹ ಈಗಾಗಲೇ ಉಡಾಯಿಸಲಾಗಿರುವ ಐಆರ್​ಎನ್​ಎಸ್​ಎಸ್ 1ಎ, 1ಬಿ, 1ಸಿ, 1ಡಿ, 1ಇ ಮತ್ತು 1ಎಫ್  ಉಪಗ್ರಹಗಳೊಂದಿಗೆ ಕಾರ್ಯ ನಿರ್ವಹಿಸಲಿದ್ದು, ಭಾರತದಾದ್ಯಂತ ಪ್ರಾದೇಶಿಕ ಸಂಚಾರ ಮಾರ್ಗಸೂಚಿಗೆ ತಂತ್ರಜ್ಞಾನ ಸಹಕಾರವನ್ನು ನೀಡಲಿದೆ. ಈ ಹಿಂದೆ ಐಆರ್​ಎನ್​ಎಸ್​ಎಸ್ 1ಎ  ಉಪಗ್ರಹವನ್ನು 2013ರ ಜುಲೈ 1ರಂದು, 1ಬಿಯನ್ನು 2014ರ ಏಪ್ರಿಲ್ 4ರಂದು, 1ಸಿ ಉಪಗ್ರಹವನ್ನು 2014ರ ಅಕ್ಟೋಬರ್ 16 ರಂದು, 1 ಡಿ ಉಪಗ್ರಹವನ್ನು 2015ರ ಮಾರ್ಚ್ 28ರಂದು ಹಾಗೂ  1ಇ ಉಪಗ್ರಹವನ್ನು ಜನವರಿ 20ರಂದು ಮತ್ತು ಮಾರ್ಚ್ 10ರಂದು 1 ಎಫ್ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಗಿತ್ತು.

ಉಪಗ್ರಹ ಉಡಾವಣೆಗೆ ಸಾಕ್ಷಿಯಾದ ಪ್ರಧಾನಿ ಮೋದಿ
ಇನ್ನು ಇಸ್ರೋದ ಈ ಮಹತ್ವಾಕಾಂಕ್ಷಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಕ್ಷಿಯಾದರು. ಉಪಗ್ರಹ ಉಡಾವಣೆಯನ್ನು ವೀಕ್ಷಿಸಿ ಮೋದಿ ಯೋಜನೆಯ ಯಶಸ್ಸಿಗೆ  ಕಾರಣಕರ್ತರಾದ ಇಸ್ರೋದ ವಿಜ್ಞಾನಿಗಳನ್ನು ಅಭಿನಂದಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT