ಸಾಂದರ್ಭಿಕ ಚಿತ್ರ 
ವಿಜ್ಞಾನ-ತಂತ್ರಜ್ಞಾನ

ಚಳ್ಳಕೆರೆಯಲ್ಲಿ ಅಣು ಸ್ಥಾವರ ಖಚಿತಪಡಿಸಿದ ವಿಜ್ಞಾನಿಗಳು

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 8 ಸಾವಿರ ಎಕರೆ ಪ್ರದೇಶದಲ್ಲಿ ಭಾರತ ಸರ್ಕಾರ ಅಣು ಸ್ಥಾವರ ನಿರ್ಮಿಸುತ್ತಿದೆ ಎಂದು ಹಿರಿಯ ವಿಜ್ಞಾನಿಗಳು...

ಮೈಸೂರು: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 8 ಸಾವಿರ ಎಕರೆ ಪ್ರದೇಶದಲ್ಲಿ ಭಾರತ ಸರ್ಕಾರ ಅಣು ಸ್ಥಾವರ ನಿರ್ಮಿಸುತ್ತಿದೆ ಎಂದು ಹಿರಿಯ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಮೈಸೂರಿನಲ್ಲಿ ಮುಕ್ತಾಯವಾದ ಇಂಡಿಯನ್ ಸೈನ್ಸ್ ಕಾಂಗ್ರೆಸ್‍ನಲ್ಲಿ ಭಾಗವಹಿಸಲು ಬಂದಿದ್ದ ಹಿರಿಯ ಅಣು ವಿಜ್ಞಾನಿ ಆರ್.ಕೆ.ಸಿನ್ಹಾ ಈ ಅಂಶವನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಯೋಜನೆ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಪರಿಹರಿಸಲಾ- ಗುತ್ತದೆ ಎಂದು ಆರ್.ಕೆ.ಸಿನ್ಹಾ ಹಾಗೂ ಭಾಭಾ ಅಣು ಶಕ್ತಿ ಕೇಂದ್ರದ ಮತ್ತೊಬ್ಬ ವಿಜ್ಞಾನಿ ತಿಳಿಸಿದ್ದಾರೆ. ``ನಾವು ಯಾರಿಗೂ ಹಾನಿ ಉಂಟು ಮಾಡುವುದಿಲ್ಲ. ಯುರೇ- ನಿಯಂ ಅಭಿವೃದ್ಧಿಯಿಂದ ಪರಿಸರಕ್ಕೆ ಹಾನಿ ಉಂಟಾಗುವುದಿಲ್ಲ. ಸಂಬಂಧಪಟ್ಟವರಿಗೆ ಸರಿಯಾದ ಶುಲ್ಕ ಪಾವತಿ ಮಾಡಿ ಜಮೀನು ಖರೀದಿಸಿದ್ದೇವೆ. ಎಲ್ಲ ರೀತಿಯಿಂದ ರಕ್ಷ- ಣೆಯ ಹೊಣೆಯನ್ನು ಹೊತ್ತುಕೊಳ್ಳುತ್ತೇವೆ. ಎಲ್ಲ ರೀತಿಯಿಂದಲೂ ಜನರು ಸಂತೋಷವಾಗಿ ದ್ದಾರೆ,'' ಎಂದು ಸಿನ್ಹಾ ತಿಳಿಸಿದ್ದಾರೆ. 
ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದಲೇ ಅದನ್ನು ನಿರ್ಮಿಸಲಾಗುತ್ತದೆ ಎಂದಿದ್ದಾರೆ ಸಿನ್ಹಾ. ಅವರು ಇತ್ತೀಚೆಗಷ್ಟೇ ಅಣು ಶಕ್ತಿ ಆಯೋಗದ ಅಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿದ್ದರು. ನಾವೇಕೆ ಒಪ್ಪಿಕೊಳ್ಳಬಾರದು?: ``ಪರಮಾಣು ಇಂಧನದಲ್ಲಿ ದೇಶ ಸ್ವಾವಲಂಬಿ- ಯಾಗಿಬೇಕು. ಅದುವೇ ನಮ್ಮ ನಿಲುವು ಏಕೆ ಆಗಿರಬಾರದು? ಸದ್ಯ ಇಂಧನ ವಿದೇಶಗಳಿಂದ ದೇಶಕ್ಕೆ ಆಮದಾಗುತ್ತಿದೆ. ಇದೊಂದು ವ್ಯೂಹಾತ್ಮಕ ಯೋಜನೆ. ಅದರ ನಿರ್ಮಾಣದ ಬಗ್ಗೆ ನಾವೇಕೆ ಒಪ್ಪಿಕೊಳ್ಳಬಾರದು'' ಎಂದು ಅವರು ಪ್ರಶ್ನಿಸಿದ್ದಾರೆ. 
ನಮ್ಮ ಸಬ್‍ಮೆರಿನ್ ಗಳು ಅದರಿಂದಲೇ ಕೆಲಸ ಮಾಡುತ್ತವೆ. ಹೀಗಾಗಿ ನಾವು ಈ ಕೆಲಸ ನಿಲ್ಲಿಸಬೇಕೇ? ಎಂದು ಸಿನ್ಹಾ ಪ್ರಶ್ನಿಸಿದ್ದಾರೆ. ಭಾರತ ಸರ್ಕಾರ ಕೈಗೊಂಡಿರುವ ಯೋಜನೆ ಬಗ್ಗೆ ಇತ್ತೀಚೆಗೆ ಅಮೆರಿಕದ ಫಾರಿನ್ ಪಾಲಿಸಿ' ನಿಯತಕಾಲಿಕ ಈ ಬಗ್ಗೆ ವರದಿ ಮಾಡಿತ್ತು. ಆದರೆ ಈ ಅಂಶವನ್ನು ಕೇಂದ್ರ ವಿದೇಶಾಂಗ ಇಲಾಖೆ ಹಾಗೂ ಅಣು ಶಕ್ತಿ ಆಯೋಗದ ಅಧ್ಯಕ್ಷ ಡಾ.ಶೇಖರ್ ಬಸು ಪ್ರಬಲವಾಗಿ ತಿರಸ್ಕರಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT