ಮೈಸೂರು: ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ 8 ಸಾವಿರ ಎಕರೆ ಪ್ರದೇಶದಲ್ಲಿ ಭಾರತ ಸರ್ಕಾರ ಅಣು ಸ್ಥಾವರ ನಿರ್ಮಿಸುತ್ತಿದೆ ಎಂದು ಹಿರಿಯ ವಿಜ್ಞಾನಿಗಳು ಪ್ರತಿಪಾದಿಸಿದ್ದಾರೆ. ಮೈಸೂರಿನಲ್ಲಿ ಮುಕ್ತಾಯವಾದ ಇಂಡಿಯನ್ ಸೈನ್ಸ್ ಕಾಂಗ್ರೆಸ್ನಲ್ಲಿ ಭಾಗವಹಿಸಲು ಬಂದಿದ್ದ ಹಿರಿಯ ಅಣು ವಿಜ್ಞಾನಿ ಆರ್.ಕೆ.ಸಿನ್ಹಾ ಈ ಅಂಶವನ್ನು ಖಚಿತಪಡಿಸಿದ್ದಾರೆ.
ಈ ಬಗ್ಗೆ ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. ಯೋಜನೆ ಬಗ್ಗೆ ಸ್ಥಳೀಯರು ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಪರಿಹರಿಸಲಾ- ಗುತ್ತದೆ ಎಂದು ಆರ್.ಕೆ.ಸಿನ್ಹಾ ಹಾಗೂ ಭಾಭಾ ಅಣು ಶಕ್ತಿ ಕೇಂದ್ರದ ಮತ್ತೊಬ್ಬ ವಿಜ್ಞಾನಿ ತಿಳಿಸಿದ್ದಾರೆ. ``ನಾವು ಯಾರಿಗೂ ಹಾನಿ ಉಂಟು ಮಾಡುವುದಿಲ್ಲ. ಯುರೇ- ನಿಯಂ ಅಭಿವೃದ್ಧಿಯಿಂದ ಪರಿಸರಕ್ಕೆ ಹಾನಿ ಉಂಟಾಗುವುದಿಲ್ಲ. ಸಂಬಂಧಪಟ್ಟವರಿಗೆ ಸರಿಯಾದ ಶುಲ್ಕ ಪಾವತಿ ಮಾಡಿ ಜಮೀನು ಖರೀದಿಸಿದ್ದೇವೆ. ಎಲ್ಲ ರೀತಿಯಿಂದ ರಕ್ಷ- ಣೆಯ ಹೊಣೆಯನ್ನು ಹೊತ್ತುಕೊಳ್ಳುತ್ತೇವೆ. ಎಲ್ಲ ರೀತಿಯಿಂದಲೂ ಜನರು ಸಂತೋಷವಾಗಿ ದ್ದಾರೆ,'' ಎಂದು ಸಿನ್ಹಾ ತಿಳಿಸಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದಲೇ ಅದನ್ನು ನಿರ್ಮಿಸಲಾಗುತ್ತದೆ ಎಂದಿದ್ದಾರೆ ಸಿನ್ಹಾ. ಅವರು ಇತ್ತೀಚೆಗಷ್ಟೇ ಅಣು ಶಕ್ತಿ ಆಯೋಗದ ಅಧ್ಯಕ್ಷ ಸ್ಥಾನದಿಂದ ನಿವೃತ್ತಿಯಾಗಿದ್ದರು. ನಾವೇಕೆ ಒಪ್ಪಿಕೊಳ್ಳಬಾರದು?: ``ಪರಮಾಣು ಇಂಧನದಲ್ಲಿ ದೇಶ ಸ್ವಾವಲಂಬಿ- ಯಾಗಿಬೇಕು. ಅದುವೇ ನಮ್ಮ ನಿಲುವು ಏಕೆ ಆಗಿರಬಾರದು? ಸದ್ಯ ಇಂಧನ ವಿದೇಶಗಳಿಂದ ದೇಶಕ್ಕೆ ಆಮದಾಗುತ್ತಿದೆ. ಇದೊಂದು ವ್ಯೂಹಾತ್ಮಕ ಯೋಜನೆ. ಅದರ ನಿರ್ಮಾಣದ ಬಗ್ಗೆ ನಾವೇಕೆ ಒಪ್ಪಿಕೊಳ್ಳಬಾರದು'' ಎಂದು ಅವರು ಪ್ರಶ್ನಿಸಿದ್ದಾರೆ.
ನಮ್ಮ ಸಬ್ಮೆರಿನ್ ಗಳು ಅದರಿಂದಲೇ ಕೆಲಸ ಮಾಡುತ್ತವೆ. ಹೀಗಾಗಿ ನಾವು ಈ ಕೆಲಸ ನಿಲ್ಲಿಸಬೇಕೇ? ಎಂದು ಸಿನ್ಹಾ ಪ್ರಶ್ನಿಸಿದ್ದಾರೆ. ಭಾರತ ಸರ್ಕಾರ ಕೈಗೊಂಡಿರುವ ಯೋಜನೆ ಬಗ್ಗೆ ಇತ್ತೀಚೆಗೆ ಅಮೆರಿಕದ ಫಾರಿನ್ ಪಾಲಿಸಿ' ನಿಯತಕಾಲಿಕ ಈ ಬಗ್ಗೆ ವರದಿ ಮಾಡಿತ್ತು. ಆದರೆ ಈ ಅಂಶವನ್ನು ಕೇಂದ್ರ ವಿದೇಶಾಂಗ ಇಲಾಖೆ ಹಾಗೂ ಅಣು ಶಕ್ತಿ ಆಯೋಗದ ಅಧ್ಯಕ್ಷ ಡಾ.ಶೇಖರ್ ಬಸು ಪ್ರಬಲವಾಗಿ ತಿರಸ್ಕರಿಸಿದ್ದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos