ಬುಧ ಗ್ರಹ ಮತ್ತು ಸೂರ್ಯ (ಸಂಗ್ರಹ ಚಿತ್ರ) 
ವಿಜ್ಞಾನ-ತಂತ್ರಜ್ಞಾನ

ಬುಧ ಗ್ರಹ ವೀಕ್ಷಣೆಗೆ ಸಿದ್ಧರಾಗಿ!

ಆಕಾಶಕಾಯಗಳನ್ನು ನೋಡುವ ಇಂತಹುದೇ ಮತ್ತೊಂದು ಸುವರ್ಣಾವಕಾಶ ಒದಗಿಬಂದಿದ್ದು, ಸೋಮವಾರ ಬುಧ ಗ್ರಹ ಭೂಮಿಯ ಸಮೀಪದಲ್ಲಿ ಹಾದುಹೋಗಲಿದ..

ನವದೆಹಲಿ: ಲಕ್ಷಾಂತರ ಕಿ.ಮೀ ದೂರದಲ್ಲಿರುವ ಆಕಾಶಕಾಯಗಳು ಆಗಾಗ ಭೂಮಿಯ ಸಮೀಪದಲ್ಲಿ ಹಾದುಹೋಗುವ ಮೂಲಕ ನಮ್ಮಲ್ಲಿ ರೋಮಾಂಚನವನ್ನುಂಟು ಮಾಡುತ್ತವೆ.  ಆಕಾಶಕಾಯಗಳನ್ನು ನೋಡುವ ಇಂತಹುದೇ ಮತ್ತೊಂದು ಸುವರ್ಣಾವಕಾಶ ಒದಗಿಬಂದಿದ್ದು, ಸೋಮವಾರ ಬುಧ ಗ್ರಹ ಭೂಮಿಯ ಸಮೀಪದಲ್ಲಿ ಹಾದುಹೋಗಲಿದೆ.

ಸೂರ್ಯನ ಸುತ್ತ ಹಾದುಹೋಗುವ ಬುಧ ಗ್ರಹವನ್ನು ವೀಕ್ಷಿಸುವ ಅದೃಷ್ಟ ಈ ಬಾರಿ ಭಾರತೀಯರಿಗೆ ಒಲಿದಿದ್ದು, ಇದೇ ಮೇ 9ರಂದು ಅಂದರೆ ನಾಳೆ ಸೋಮವಾರ ಸರಿಯಾಗಿ ಸಂಜೆ 4.41ರಿಂದ  ಬುಧ ಗ್ರಹವನ್ನು ಭೂಮಿಯಿಂದಲೇ ಕಣ್ತುಂಬಿಕೊಳ್ಳಬಹುದು. 7 ಗಂಟೆ ಮತ್ತು 30 ನಿಮಿಷದ ಕಾಲಾವಧಿಯಲ್ಲಿ ಸೂರ್ಯನನ್ನು ಹಾದು ಹೋಗುವ ಬುಧ ಗ್ರಹವನ್ನು ಜಪಾನ್ ಮತ್ತು ಆಗ್ನೇಯ  ಏಷ್ಯಾದ ರಾಷ್ಟ್ರಗಳನ್ನು ಹೊರತುಪಡಿಸಿ ಏಷ್ಯಾದ್ಯಂತ ಹೆಚ್ಚಿನ ರಾಷ್ಟ್ರಗಳಲ್ಲಿ ವೀಕ್ಷಿಸಬಹುದು.

ಸುಮಾರು 2 ಗಂಟೆ 45 ನಿಮಿಷಗಳ ಕಾಲ ಕಾಣಿಸಿಕೊಳ್ಳಲಿರುವ ಬುಧ ಸೂರ್ಯನಿಗೆ ಮುಖಮಾಡಿ ಸಂಚರಿಸಲಿದೆ. ಸೂರ್ಯ ಮುಳುಗುವ ಸಮಯಕ್ಕೆ ಹೊಂದಿಕೊಂಡಂತೆ ಬುಧ ಗ್ರಹವು  ಪೂರ್ವದ ತುದಿಯಲ್ಲಿ, ಅಂದರೆ ಅಂಡಮಾನ್ ಮತ್ತು ನಿಕೋಬಾರ್​ನ ಪೋರ್ಟ್ ಬ್ಲೇರ್​ನತ್ತ ಸುಮಾರು 1 ಗಂಟೆ ಕಾಣಿಸಲಿದೆ. ಸುಮಾರು 2 ಗಂಟೆ 45 ನಿಮಿಷದ ನಂತರ ಸಂಪೂರ್ಣ ಪಶ್ಚಿಮ  ದಿಕ್ಕಿಗೆ, ಅಂದರೆ ಗುಜರಾತ್​ನ ದ್ವಾರಕದತ್ತ ಸಂಚರಿಸಿರುತ್ತದೆ ಎಂದು ಕೇಂದ್ರ ಭೂವಿಜ್ಞಾನ ಸಚಿವಾಲಯ ತಿಳಿಸಿದೆ.

ಭಾರತೀಯರು ಈ ಅವಕಾಶವನ್ನು ತಪ್ಪಿಸಿಕೊಂಡರೆ ಮತ್ತೆ ಬುಧ ಗ್ರಹ ವೀಕ್ಷಣೆಗೆ ಬರೊಬ್ಬರಿ 16 ವರ್ಷ ಕಾಯಬೇಕಾಗುತ್ತದೆ. ಅಂದರೆ ನವೆಂಬರ್ 13, 2032ರಲ್ಲಿ ಭಾರತಕ್ಕೆ ಬುಧ ಗ್ರಹದ  ದರ್ಶನವಾಗಲಿದೆ. 2019 ನವೆಂಬರ್ 11ರಲ್ಲಿ ಬುಧ ಗ್ರಹ ಸೂರ್ಯನನ್ನು ಹಾದುಹೋಗಲಿದೆಯಾದರೂ. ಆದರೆ ಭಾರತಕ್ಕೆ ಕಾಣಿಸುವುದಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ನೋಡುವುದು ಹೇಗೆ?
ಯಾವುದೇ ದೃಷ್ಟಿ ವರ್ಧನವಿಲ್ಲದೆ, ಬರೀಗಣ್ಣಿಗೆ ವೀಕ್ಷಣೆ ಅಸಾಧ್ಯವಾಗಿದೆ. ಬೈನಾಕ್ಯುಲರ್ ಅಥವಾ ದೂರದರ್ಶಕದ ಸಹಾಯದಿಂದ ಸರಿಯಾದ ಸೌರ ಶೋಧಕವನ್ನು ಬಳಸಿ ಬುಧ ಗ್ರಹವನ್ನು  ವೀಕ್ಷಿಸಬಹುದಾಗಿದೆ. ಸೂರ್ಯ, ಬುಧ ಮತ್ತು ಭೂಮಿ ಒಂದೇ ಸಾಲಿಗೆ ಬಂದಾಗ ಇಂತಹ ಬಾಹ್ಯಾಕಾಶ ಅಚ್ಚರಿ ನಡೆಯುತ್ತದೆ. ಬುಧ ಗ್ರಹ ಅತ್ಯಂತ ಸಣ್ಣದಾಗಿರುವುದರಿಂದ ಸೂರ್ಯನಿಗೆ ಸಣ್ಣ  ಕಪ್ಪು ಚುಕ್ಕೆಯಿಟ್ಟಂತೆ ಕಾಣಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬೇಡಿ, ಸಾರ್ವಜನಿಕ ಹೇಳಿಕೆ ಕೊಡಬೇಡಿ': ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬುದ್ದಿಮಾತು

'ನೀವು ಶಾಶ್ವತ ವಿಪತ್ತು ನಿಧಿ ಏಕೆ ರಚಿಸಿಲ್ಲ': ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ

ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ: ಡಿ ಕೆ ಶಿವಕುಮಾರ್

ದೇವನಹಳ್ಳಿಯ 1,777 ಎಕರೆ ಜಮೀನು 'ಶಾಶ್ವತ ವಿಶೇಷ ಕೃಷಿ ವಲಯ'; ಭೂಮಿ ಮಾರಾಟಕ್ಕೆ ಕಡಿವಾಣ ಇಲ್ಲ: ಸರ್ಕಾರ

ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ, ಬಾಡಿಗೆ ಪಡೆಯಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

SCROLL FOR NEXT