ಮೊಬೈಲ್ ಬ್ಯಾಟರಿಗಳಿಂದ ಹೊಮ್ಮುತ್ತಿದೆ 100 ಕ್ಕೂ ಹೆಚ್ಚು ವಿಧದ ವಿಷಕಾರಿ ಅನಿಲ! 
ವಿಜ್ಞಾನ-ತಂತ್ರಜ್ಞಾನ

ಮೊಬೈಲ್ ಬ್ಯಾಟರಿಗಳಿಂದ ಹೊಮ್ಮುತ್ತಿದೆ 100 ಕ್ಕೂ ಹೆಚ್ಚು ವಿಧದ ವಿಷಕಾರಿ ಅನಿಲ!

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬ್ಯಾಟರಿಗಳು ಸಿಡಿಯುತ್ತಿರುವ ವರದಿಯ ಬೆನ್ನಲ್ಲೇ ಬ್ಯಾಟರಿಗಳಿಗೆ ಸಂಬಂಧಿಸಿದ ಮತ್ತೊಂದು ಆಘಾತಕಾರಿ ಅಧ್ಯಯನ ವರದಿ ಬಹಿರಂಗವಾಗಿದೆ.

ಲಂಡನ್: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬ್ಯಾಟರಿಗಳು ಸಿಡಿಯುತ್ತಿರುವ ವರದಿಯ ಬೆನ್ನಲ್ಲೇ ಬ್ಯಾಟರಿಗಳಿಗೆ ಸಂಬಂಧಿಸಿದ ಮತ್ತೊಂದು ಆಘಾತಕಾರಿ ಅಧ್ಯಯನ ವರದಿ ಬಹಿರಂಗವಾಗಿದೆ.
ಸ್ಮಾರ್ಟ್ ಫೋನ್, ಟ್ಯಾಬ್ ಲೆಟ್ ಸೇರಿದಂತೆ ಜನರು ಪ್ರತಿ ದಿನ ಬಳಸುವ ಉಪಕರಣಗಳ ಬ್ಯಾಟರಿಗಳಿಂದ ಅಪಾಯಕಾರಿ ಅನಿಲ ವಾತಾವರಣ ಸುರುತ್ತಿದೆ ಎಂದು ಎನ್ ಬಿಸಿ ಡಿಫೆನ್ಸ್ ಹಾಗೂ ಚೀನಾದ ತ್ಸಿಂಗುಯಾ ವಿಶ್ವವಿದ್ಯಾಲಯದ ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಲಿಥಿಯಂ ಅಯೋನ್ ಬ್ಯಾಟರಿಗಳಿಂದ 100 ಕ್ಕೂ ಹೆಚ್ಚು ವಿಧದ ವಿಷಕಾರಿ ಅನಿಲ ಹೊರಸೂಸಲ್ಪಡುತ್ತಿರುವುದನ್ನು ಗುರುತಿಸಿರುವ ವಿಜ್ಞಾನಿಗಳು ತಮ್ಮ ಉಪಕರಣಗಳ ಬ್ಯಾಟರಿಯಿಂದ ಉತ್ಪಾದನೆಯಾಗಿಟ್ಟುರುವ ಹಲವು ವಿಧದ ಅಪಾಯಕಾರಿ ಅನಿಲಗಳ ಬಗ್ಗೆ ಬಳಕೆದಾರರಿಗೆ ಅರಿವೇ ಇಲ್ಲ ಎಂದು ಹೇಳಿದ್ದಾರೆ.
ಬ್ಯಾಟರಿಗಳಿಂದ ಹೊರಸೂಸಲ್ಪಡುತ್ತಿರುವ ವಿಷಕಾರಿ ಅನಿಲಗಳಿಂದ ಚರ್ಮ, ಕಣ್ಣು, ಮೂಗು ಹಾಗೂ ವಾತಾವರಣಕ್ಕೆ ತೀವ್ರ ಹಾನಿ ಉಂಟು ಮಾಡುತ್ತಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. " ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಸರ್ಕಾರಗಳು ಲಿಥಿಯಂ ಅಯೋನ್ ಬ್ಯಾಟರಿಗಳನ್ನು ಉತ್ತೇಜಿಸುತ್ತಿವೆ. ಆದರೆ ಇವುಗಳಿಂದ 100 ಕ್ಕೂ ಹೆಚ್ಚು ವಿಧದ ವಿಷಕಾರಿ ಅನಿಲ ಹೊರಬರುತ್ತಿದೆ. 2006 ರಲ್ಲಿ ಡೆಲ್ ಸಂಸ್ಥೆ 4 ಮಿಲಿಯನ್ ಲ್ಯಾಪ್ ಟಾಪ್ ಗಳನ್ನು ಗ್ರಾಹಕರಿಂದ ವಾಪಸ್ ಪಡೆದಿತ್ತು.  ಪ್ರಸಕ್ತ ವರ್ಷದಲ್ಲಿ ಸ್ಯಾಮ್ ಸ್ಯಾಂಗ್ ನೋಟ್ 7 ಮೊಬೈಲ್ ಗಳಲ್ಲಿ ಬ್ಯಾಟರಿ ಸ್ಫೋಟಗೊಂಡಿದ್ದರ ಪರಿಣಾಮ ಸ್ಯಾಮ್ ಸಂಗ್ ಸಹ ಗ್ಯಾಲೆಕ್ಸಿ  ನೋಟ್ 7 ಸರಣಿಯ ಮೊಬೈಲ್ ಗಳನ್ನು ಗ್ರಾಹಕರಿಂದ ವಾಪಸ್ ಪಡೆದಿದೆ. ಸ್ಮಾರ್ಟ್ ಫೋನ್, ಟ್ಯಾಬ್ ಲೆಟ್, ಗಳ ಬ್ಯಾಟರಿಗಳು ಸಂಪೂರ್ಣವಾಗಿ ಚಾರ್ಜ್ ಆಗಿದ್ದರೆ ಹೆಚ್ಚು ವಿಷಕಾರಿ ಅನಿಲಗಳನ್ನು ಹೊರಸೂಸುತ್ತವೆ. ಆದರೆ ಶೇ.50 ಹಾಗೂ ಅದಕ್ಕಿಂತ ಕಡಿಮೆ ಚಾರ್ಜ್ ಆಗಿದ್ದರೆ ಕಡಿಮೆ ಅನಿಲ ಹೊರಸೂಸುತ್ತವೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಅಧ್ಯಯನ ವರದಿಯನ್ನು ಆಧರಿಸಿ ವಿಜಾನಿಗಳು ಲಿಥಿಯಂ ಅಯೋನ್ ಬ್ಯಾಟರಿಗಳ ಸುರಕ್ಷತೆಯನ್ನು ಹೆಚ್ಚಿಸುವುದರ ಬಗ್ಗೆ ಮತ್ತಷ್ಟು ಸಂಶೋಧನೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಲಬುರಗಿ: ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

SCROLL FOR NEXT