ಇಸ್ರೋ ಪಿಎಸ್ಎಲ್ ವಿ 
ವಿಜ್ಞಾನ-ತಂತ್ರಜ್ಞಾನ

ಇಸ್ರೋ ರಾಕ್ ಸ್ಟಾರ್ ಪಿಎಸ್ಎಲ್ ವಿ ಸಾಧನೆ: 1999 ರಿಂದ 209 ವಿದೇಶಿ ಉಪಗ್ರಹಗಳ ಉಡಾವಣೆ

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 1999 ರಿಂದ ಈ ವರೆಗೆ 209 ವಿದೇಶಿ ಉಪಗ್ರಹಗಳು ಹಾಗೂ 48 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿ ಸಂಸ್ಥೆಯ...

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ 1999 ರಿಂದ ಈ ವರೆಗೆ 209 ವಿದೇಶಿ ಉಪಗ್ರಹಗಳು ಹಾಗೂ 48 ಭಾರತೀಯ ಉಪಗ್ರಹಗಳನ್ನು ಉಡಾವಣೆ ಮಾಡಿ ಸಂಸ್ಥೆಯ ಅತ್ಯಂತ ಹೆಚ್ಚು ಕಾರ್ಯಕ್ಷಮತೆ, ನಂಬಿಕಸ್ಥ ಉಪಗ್ರಹ ಉಡಾವಣಾ ವಾಹನ ಎಂಬ ಹೆಗ್ಗಳಿಗೆಕೆ ಪಾತ್ರವಾಗಿದೆ. 
1999ರ ಮೇ ತಿಂಗಳಿನಿಂದ ಈ ವರೆಗೂ 28 ರಾಷ್ಟ್ರಗಳ ಒಟ್ಟು 209 ಉಪಗ್ರಹಗಳನ್ನು ಉಡಾವಣೆ ಮಾಡಿರುವುದಷ್ಟೇ ಅಲ್ಲದೇ, ಭಾರತದ 48 ಉಪಗ್ರಹಳನ್ನೂ ಉಡಾವಣೆ ಮಾಡಿದೆ. ಅಕ್ಟೋಬರ್ 1994 ರಲ್ಲಿ ಪಿಎಸ್ಎಲ್ ವಿ ಯ ಮೊದಲ ಕಾಪಿಬುಕ್ ಲಾಂಚ್ ನಂತರ ಪಿಎಸ್ಎಲ್ ವಿ ಅತ್ಯಂತ ಹೆಚ್ಚು ಕಾರ್ಯಕ್ಷಮತೆಯುಳ್ಳ ಉಪಗ್ರಹ ಉಡಾವಣಾ ವಾಹನ ಎಂಬ ಹೆಗ್ಗಳಿಕೆಯನ್ನು ಉಳಿಸಿಕೊಂಡಿದ್ದು, ಈ ವರ್ಷದ ಜೂನ್ ವರೆಗೂ ಸತತ 39 ಯಶಸ್ವಿ ಉಡಾವಣೆಗಳನ್ನು ಮಾಡಿದೆ ಎಂದು ಟೈಮ್ಸ್ ಆಫ್ ಇಂಡಿಯಾಗೆ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಹೇಳಿದ್ದಾರೆ.
2015 ರ ಡಿಸೆಂಬರ್ 16 ರಂದು ಉಡಾವಣೆ ಮಾಡಿದ ಸಿಂಗಪೂರ್ ನ 400 ಕೆ.ಜಿ ತೂಕದ ಟೆಲಿಯೋಸ್ ಅರ್ತ್ ಅಬ್ಸರ್ವೇಷನ್ ಉಪಗ್ರಹ ಪಿಎಸ್ಎಲ್ ವಿ ಮೂಲಕ ಉಡಾವಣೆಯಾಗಿರುವ ಅತಿ ಹೆಚ್ಚು ತೂಕದ ಉಪಗ್ರಹವಾಗಿದ್ದು, ಈ ಪೈಕಿ 2007 ರ ಏಪ್ರಿಲ್ 23 ರಂದು ಉಡಾವಣೆಯಾದ ಇಟಲಿಯ ಅಗೈಲ್ ಉಪಗ್ರಹ (352ಕೆ.ಜಿ), 2008 ರ ಜನವರಿ 21 ರಂದು ಉಡಾವಣೇಯಾದ  ಇಸ್ರೇಲ್ ನ ಟೆಕ್ಸಾರ್ (295 ಕೆ.ಜಿ) ಉಪಗ್ರಹಗಳು ಸೇರಿವೆ.
ಪಿಎಸ್ಎಲ್ ವಿ ಇಸ್ರೋ ಸಂಸ್ಥೆಗೆ ಆದಾಯವನ್ನೂ ತಂದುಕೊಟ್ಟಿದ್ದು ಲಾಭದಾಯಕ ಉಪಗ್ರಹ ಉಡಾವಣಾ ವಾಹನವಾಗಿದೆ. ಅಷ್ಟೇ ಅಲ್ಲದೇ ಅತ್ಯಂತ ಕಡಿಮೆ ಖರ್ಚಿನಲ್ಲಿ ಯಶಸ್ವಿಯಾದ 2008 ರಲ್ಲಿ ಪ್ರಾರಂಭವಾದ ಚಂದ್ರಯಾನ-1, 2013 ರ ಮಾರ್ಸ್ ಮಿಷನ್ ನ ಉಪಗ್ರಹಳ ಉಡಾವಣೆಗಳಲ್ಲೂ ಸಹ ಪಿಎಸ್ಎಲ್ ಯನ್ನು ಬಳಕೆ ಮಾಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?