ಸಣ್ಣ ಉಪಗ್ರಹ ಲಾಂಚರ್ಗ್ ಗಳಿಂದ 1,500-2,000 ಕೋಟಿ ಆದಾಯದ ನಿರೀಕ್ಷೆಯಲ್ಲಿ ಇಸ್ರೋ ಆಂಟ್ರಿಕ್ಸ್ 
ವಿಜ್ಞಾನ-ತಂತ್ರಜ್ಞಾನ

ಸಣ್ಣ ಉಪಗ್ರಹ ಲಾಂಚರ್ ಗಳಿಂದ 1,500-2,000 ಕೋಟಿ ಆದಾಯದ ನಿರೀಕ್ಷೆಯಲ್ಲಿ ಇಸ್ರೋ ಆಂಟ್ರಿಕ್ಸ್

ವಿದೇಶಿ ಉಪಗ್ರಹಳನ್ನು ಕಕ್ಷೆಗೆ ಸೇರಿಸಿ ಹಿರಿಮೆ ಹೆಚ್ಚಿಸಿಕೊಂಡಿರುವ ಇಸ್ರೋ ಸಂಸ್ಥೆ ಸಣ್ಣ ಉಪಗ್ರಹ ಲಾಂಚರ್ ಗಳಿಂದ ವಾರ್ಷಿಕ 1,500-2,000 ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ.

ಬೆಂಗಳೂರು: ವಿದೇಶಿ ಉಪಗ್ರಹಳನ್ನು ಕಕ್ಷೆಗೆ ಸೇರಿಸಿ ಹಿರಿಮೆ ಹೆಚ್ಚಿಸಿಕೊಂಡಿರುವ ಇಸ್ರೋ ಸಂಸ್ಥೆ ಸಣ್ಣ ಉಪಗ್ರಹ ಲಾಂಚರ್ ಗಳಿಂದ ವಾರ್ಷಿಕ 1,500-2,000 ಕೋಟಿ ರೂಪಾಯಿ ಆದಾಯ ಗಳಿಸುವ ನಿರೀಕ್ಷೆಯಲ್ಲಿದೆ. 
ಉಪಗ್ರಹ ವಾಹಕದೊಂದಿಗೆ ಕಕ್ಷೆಗೆ ಸೇರಿಸುವ ಸೌಲಭ್ಯಕ್ಕೆ ಅಗತ್ಯವಿರುವ ಎಸ್ಎಸ್ಎಲ್ ವಿ(ಸ್ಮಾಲ್ ಸ್ಯಾಟಲೈಟ್ ಲಾಂಚರ್ಸ್) ಸೌಲಭ್ಯ 2019 ರ ವೇಳೆಗೆ ಲಭ್ಯವಾಗಲಿದ್ದು, ಇಸ್ರೋದ ಮಾರ್ಕೆಟಿಂಗ್ ಸಂಸ್ಥೆ ಆಂಟ್ರಿಕ್ಸ್ ಕಾರ್ಪೋರೇಷನ್ ಲಿಮಿಟೆಡ್ ಸಣ್ಣ ಉಪಗ್ರಹ ಲಾಂಚರ್ಸ್ ಮೂಲಕ ವಾರ್ಷಿಕವಾಗಿ 1,500-2,000 ಕೋಟಿ ರೂ ಆದಾಯವನ್ನು ಎದುರು ನೋಡುತ್ತಿದೆ. 
ಇಸ್ರೋ ಅಭಿವೃದ್ಧಿಪಡಿಸುತ್ತಿರುವ ಈ ಉಪಗ್ರಹ ವಾಹಕಗಳು 500 ಕೆಜಿ ಉಪಗ್ರಹಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವಿದ್ದು, ಲೋ ಅರ್ಥ್‌ ಆರ್ಬಿಟ್‌(ಎಲ್ಇಒ) ನಲ್ಲಿ ಸೇರಿಸಲಿದೆ.  ಇಸ್ರೋದ ಎಸ್ಎಸ್ಎಲ್ ವಿ ಅಭಿವೃದ್ಧಿಯ ಹಂತದಲ್ಲಿದ್ದು, ಇಸ್ರೋದ ಮಾರ್ಕೆಟಿಂಗ್ ಸಂಸ್ಥೆ ಆಂಟ್ರಿಕ್ಸ್ ಹೊಸ ಲಾಂಚ್ ವೆಹಿಕಲ್ ಗಾಗಿ ಹೊಸ ಲಾಂಚ್ ಬೇಸ್ ನ ಹುಡುಕಾಟದಲ್ಲಿದೆ ಎಂದು ಆಂಟ್ರಿಕ್ಸ್ ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್ ರಾಕೇಶ್ ಹೇಳಿದ್ದಾರೆ. ಲಾಂಚ್ ವೆಹಿಕಲ್ ನ ಉತ್ಪಾದನೆಯಲ್ಲಿ ಖಾಸಗಿ ಸಹಭಾಗಿತ್ವವೂ ಇರಲಿದ್ದು, ವಾರ್ಷಿಕ 50-60 ಎಸ್ಎಸ್ಎಲ್ ವಿಗಳನ್ನು ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ. 
ಹಲವು ರಾಷ್ಟ್ರಗಳು ಹಾಗೂ ಸಂಸ್ಥೆಗಳು ತಮ್ಮ ಸೇವೆಗಳನ್ನು ಒದಗಿಸುವುದಕ್ಕೆ ಉಪಗ್ರಹಗಳನ್ನು ಉಡಾವಣೆ  ಮಾಡಲಿವೆ, ಕೆಲವೇ ಕೆಲವು ಸಂಸ್ಥೆಗಳು ಸಣ್ಣ ಉಪಗ್ರಹಗಳಿಗೆ ತಮ್ಮದೇ ಆದ ಲಾಂಚ್ ವೆಹಿಕಲ್ ಗಳನ್ನು ಅಭಿವೃದ್ಧಿಪಡಿಸಿಕೊಳ್ಳುತ್ತಿವೆ, ಈ ಪೈಕಿ ಹಲವು  ಸ್ಟಾರ್ಟ್ ಅಪ್ ಗಳಾಗಿದ್ದರಿಂದ ಇಸ್ರೋಗೆ ಅವಕಾಶಗಳು ಹೆಚ್ಚಿದ್ದವು ಎಂದು  ರಾಕೇಶ್ ಹೇಳಿದ್ದಾರೆ. 
ಎಸ್ಎಸ್ಎಲ್ ವಿಗಳ ವೆಚ್ಚ ಪಿಎಸ್ಎಲ್ ವಿ ಗಳ 10 ನೇ ಒಂದರಷ್ಟಿರಲಿದ್ದು, ಅತ್ಯಂತ ಕಡಿಮೆ ಖರ್ಚಿನಲ್ಲಿ ಕಕ್ಷೆಗೆ ಸೇರಿಸಬಹುದಾಗಿದೆ. 72 ಗಂಟೆಗಳಲ್ಲಿ ಸಿದ್ಧಪಾಡಿಸಿ 3-6 ಜನರ ತಂಡ ಉಡಾವಣೆ ಮಾಡಬಹುದಾಗಿದೆ ಎಂದು ಇಸ್ರೋ ಅಧ್ಯಕ್ಷರು ಎಸ್ಎಸ್ಎಲ್ ವಿ ಬಗ್ಗೆ ಮಾಹಿತಿ ನೀಡಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT