ಇಸ್ರೋ 
ವಿಜ್ಞಾನ-ತಂತ್ರಜ್ಞಾನ

ತಿಂಗಳಿಗೆ 2 ಉಪಗ್ರಹ ಕಕ್ಷೇಗೇರಿಸುವ ಗುರಿ: 35ನೇ ಸಂವಹನ ಉಪಗ್ರಹ ಉಡಾವಣೆಗೆ ಇಸ್ರೋ ಸಜ್ಜು

ಡಿಸೆಂಬರ್ 19ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ 35ನೇ ಸಂವಹನ ಉಪಗ್ರಹ ಜಿಸ್ಯಾಟ್ 7ಎ ಯನ್ನು ಉಡಾವಣೆಗೊಳಿಸಲು ಎಲ್ಲಾ ಸಿದ್ದತೆಗಳನ್ನು....

ಬೆಂಗಳೂರು: ಡಿಸೆಂಬರ್ 19ಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ 35ನೇ ಸಂವಹನ ಉಪಗ್ರಹ ಜಿಸ್ಯಾಟ್ 7ಎ ಯನ್ನು ಉಡಾವಣೆಗೊಳಿಸಲು ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ. ಆಂಧ್ರ ಪ್ರದೇಶ ಶ್ರೀಹರಿಕೋತಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಉಪಗ್ರಹ ಉಡಾವಣೆಗೊಳ್ಳಲಿದೆ.
ಇದು ಡಿಸೆಂಬರ್ ಮಾಸದಲ್ಲಿ ಇಸ್ರೋ ಉಡಾವಣೆಗೊಳಿಸುತ್ತಿರುವ ಎರಡನೇ ಉಪಗ್ರಹವಾಗಿದೆ. ಇದಕ್ಕೆ ಮುನ್ನ ಡಿಸೆಂಬರ್ 5ರಂದು ಅತಿ ಹೆಚ್ಚು ತೂಕದ ಉಪಗ್ರಹ ಜಿಸ್ಯಾಟ್ 11 ಅನ್ನು ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿತ್ತು. ಈ ಮೂಲಕ ಇಸ್ರೋ ಒಂದೇ ತಿಂಗಳಿನಲ್ಲಿ ಎರಡು ಉಪಗ್ರಹ ಉಡಾವಣೆಗೊಳಿಸುವ ತನ್ನ ಮಹೋದ್ದೇಶವನ್ನು ಸಾಧಿಸುವ ಹುಮ್ಮಸ್ಸಿನಲ್ಲಿದೆ.
ಜಿಸ್ಯಾಟ್ 7ಎ ಉಪಗ್ರಹವನ್ನು  ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಜಿಎಸ್ಎಲ್ವಿ ಎಫ್11 ಉಡಾವಣಾ ವಾಹನದ ಮೂಲಕ ಶ್ರೀಹರಿಕೋಟಾ ಬಾಹ್ಯಾಕಾಶ ನೆಲೆಯಿಂದ ಉಡಾವಣೆಗೊಳಿಸಲಾಗುತ್ತದೆ.2,250 ಕೆಜಿ ತೂಕದ ಈ ಉಪಗ್ರಹವನ್ನು ಇಸ್ರೋ ತಯಾರಿಸಿದ್ದು ದೇಶದಲ್ಲಿ ಬಳಕೆದಾರರ ಸಂವಹನ ಸಾಮರ್ಥ್ಯ ಹೆಚ್ಚಿಸುವ ನಿಟ್ಟಿನಲ್ಲಿ ಇದನ್ನು ಬಳಸಿಕೊಳ್ಳಲಾಗುತ್ತದೆ. ಇದಕ್ಕೆ ಮುನ್ನ ನವೆಂಬರ್ ನಲ್ಲಿಯೇ ಈ ಉಪಗ್ರಹ ಉಡಾವಣೆಗೊಳ್ಳುವುದಾಗಿ ಹೇಳಲಾಗಿತ್ತಾದರೂ ಇದೀಗ ಡಿಸೆಂಬರ್ ನಲ್ಲಿ ದಿನ ನಿಗದಿಯಾಗಿದೆ
ಇಸ್ರೋ ಅಧ್ಯಕ್ಷ ಕೆ. ಶಿವನ್ ಸಂಸ್ಥೆಯು ಪ್ರತಿ ತಿಂಗಳೂ ಎರಡು ಉಪಗ್ರಹಗಳನ್ನು ಉಡಾವಣೆ ಮಾಡಲಿದೆ, ಇದು ಸಂಸ್ಥೆಯ ಮಹತ್ವದ ಟಾರ್ಗೆಟ್ ಸಹ ಆಗಿದೆ ಎಂದಿದ್ದರು ಆದರೆ ಸಪ್ಟೆಂಬರ್ ಹಾಗೂ ಅಕ್ಟೋಬರ್ ಗಳಲ್ಲಿ ಇಸ್ರೋ ತನ್ನ ಗುರಿ ಸಾಧಿಸುವಲ್ಲಿ ವಿಫಲವಾಗಿತ್ತು. ಆ ಮಾಸಗಳಲ್ಲಿ ಸಂಸ್ಥೆ ಏಕೈಕ ಉಪಗ್ರಹವನ್ನು  (ಪಿಎಸ್ಎಲ್ವಿ ಸಿ 42) ಕಕ್ಷೆಗೆ ಸೇರಿಸಿತ್ತು. 
ಇದೀಗ ಡಿಸೆಂಬರ್ ನಲ್ಲಿ ಎರ್ಡನೇ ಉಪಗ್ರಹ ಕಕ್ಷೆಗೇರಿಸಲು ಇಸ್ರೋ ಸಜ್ಜಾಗಿದ್ದು ಇದು ಸಂಸ್ಥೆಯು ಈ ವರ್ಷ ಯಶಸ್ವಿಯಾಗಿ ಉಡಾವಣೆಗೊಳಿಸುತ್ತಿರುವ ಎಂಟನೇ ಉಪಗ್ರಹವಾಗಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT