ಎಂ. ವನಿತಾ 
ವಿಜ್ಞಾನ-ತಂತ್ರಜ್ಞಾನ

ಇಸ್ರೋದ  ಮೂನ್ ಮಿಷನ್ ತಂಡದಿಂದ ಚಂದ್ರಯಾನ 2 ಯೋಜನಾ ನಿರ್ದೇಶಕಿ ಹೊರಕ್ಕೆ

ಭಾರತದ  ಮಹತ್ವದ ಯೋಜನೆ ಚಂದ್ರಯಾನ 2 ಯೋಜನಾ ನಿರ್ದೇಶಕಿಯಾಗಿದ್ದ ಎಂ. ವನಿತಾ  ಅವರನ್ನು ಮುಂಬರುವ ಚಂದ್ರಯಾನ 3 ಯೋಜನೆಯಿಂದ ಕೈಬಿಡಲಾಗಿದೆ. ಚಂದ್ರಯಾನ 2ನ  ಎಲ್ಲಾ ವ್ಯವಸ್ಥೆಗಳ ಜವಾಬ್ದಾರಿಯನ್ನು ಎಂ. ವನಿತಾ ವಹಿಸಿಕೊಂಡಿದ್ದರು. ಆದರೆ ಈಗ ವನಿತಾ ಸ್ಥಾನಕ್ಕೆ ಪಿ ವೀರಮುತುವೇಲು ಅವರನ್ನು ನೇಮಕ ಮಾಡಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರ ಕಚೇರಿ ಆದೇ

ಬೆಂಗಳೂರು: ಭಾರತದ  ಮಹತ್ವದ ಯೋಜನೆ ಚಂದ್ರಯಾನ 2 ಯೋಜನಾ ನಿರ್ದೇಶಕಿಯಾಗಿದ್ದ ಎಂ. ವನಿತಾ  ಅವರನ್ನು ಮುಂಬರುವ ಚಂದ್ರಯಾನ 3 ಯೋಜನೆಯಿಂದ ಕೈಬಿಡಲಾಗಿದೆ. ಚಂದ್ರಯಾನ 2ನ  ಎಲ್ಲಾ ವ್ಯವಸ್ಥೆಗಳ ಜವಾಬ್ದಾರಿಯನ್ನು ಎಂ. ವನಿತಾ ವಹಿಸಿಕೊಂಡಿದ್ದರು. ಆದರೆ ಈಗ ವನಿತಾ ಸ್ಥಾನಕ್ಕೆ ಪಿ ವೀರಮುತುವೇಲು ಅವರನ್ನು ನೇಮಕ ಮಾಡಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೇಂದ್ರ ಕಚೇರಿ ಆದೇಶ ಹೊರಡಿಸಿದೆ. ಇದೇ ವೇಳೆ ಮೂನ್ ಮಿಷನ್ ಮುಖ್ಯಸ್ಥರಾಗಿ ರಿತು ಕರಿಧಾಲ್ ಮುಂದುವರಿಯಲಿದ್ದಾರೆ.

 ಚಂದ್ರಯಾನ2 ಚಂದ್ರನ ಮೊದಲ ಚಿತ್ರವನ್ನು ಕಳಿಸಿದ್ದು ವಿಕ್ರಮ್ ಲ್ಯಾಂಡರ್ ಸೆರೆಹಿಡಿದ ಚಿತ್ರವನ್ನು ಇಸ್ರೋ ಟ್ವೀಟ್ ಮಾಡಿದೆ.

"ಅತ್ಯುತ್ತಮ ವಿಜ್ಞಾನಿ ಮತ್ತು ಪ್ರಸ್ತುತ ಯೋಜನಾ ನಿರ್ದೇಶಕರಾದ ಎಂ.ವನಿತಾ ಅವರನ್ನು ಈ ಮೂಲಕ ಉಪನಿರ್ದೇಶಕರು, ಪೇಲೋಡ್ ಡೇಟಾ ಮ್ಯಾನೇಜ್ಮೆಂಟ್ ಆಂಡ್ ಸ್ಪೇಸ್ ಅಸ್ಟ್ರಾಲಜಿ ಏರಿಯಾ (ಪಿಡಿಎಂಎಸ್ಎ)  ಆಗಿ ನೇಮಕ ಮಾಡಲಾಗಿದೆ.ಪಿ ವೀರಮುತುವೇಲು ಅವರನ್ನು ಸ್ರೋ ಪ್ರಧಾನ ಕಚೇರಿಯಿಂದ ವರ್ಗಾಯಿಸಲಾಗಿದೆ ಮತ್ತು ಚಂದ್ರಯಾನ 3 ನಿಯೋಜಿತ ಯೋಜನಾ ನಿರ್ದೇಶಕ ಎಂದು ನೇಮಕ ಮಾಡಿದೆ" ನವೆಂಬರ್ 28 ರಂದು ಬಾಹ್ಯಾಕಾಶ ಸಂಸ್ಥೆ ಹೊರಡಿಸಿದ ಆದೇಶ ಹೇಳಿದೆ ಎಂದು ಆಂಗ್ಲ ಮಾದ್ಯಮವೊಂದು ವರದಿ ಮಾಡಿದೆ. ಆದರೆ ಈ ಬಗ್ಗೆ ಯಾವ ನಿರ್ದಿಷ್ಟ ಕಾರಣಗಳನ್ನು ತಿಳಿಸಿಲ್ಲ.

ಚಂದ್ರಯಾನ 2 ಅಥವಾ 'ಬಾಹುಬಲಿ' ' ಎಂಬ ಅಡ್ಡಹೆಸರಿನ ಹೆವಿ-ಲಿಫ್ಟ್ ರಾಕೆಟ್ ಜುಲೈ 22 ರಂದು ಚಂದ್ರಯಾನ್ 2 ಬಾಹ್ಯಾಕಾಶ ನೌಕೆಯನ್ನು ಭೂಮಿಯ ಕಕ್ಷೆಗೆ ಯಶಸ್ವಿಯಾಗಿ ಸಾಗಿಸಿದೆ.ಬಾಹ್ಯಾಕಾಶ ನೌಕೆಯನ್ನು ಆರಂಭದಲ್ಲಿ ಜುಲೈ 15 ರಂದು ಉಡಾಯಿಸಲು ನಿರ್ಧರಿಸಲಾಗಿತ್ತು. ಆದಾಗ್ಯೂ, ತಾಂತ್ರಿಕದೋಷಗಳ ಕಾರಣ ದಿನಾಂಕವನ್ನು ಮುಂದೂಡಲಾಗಿತ್ತು. ತು. ಆಗಸ್ಟ್ 2 ರಂದು ಚಂದ್ರಯಾನ  2 ಚಂದ್ರನ ಕಕ್ಷೆಗೆ ಪ್ರವೇಶಿಸಿತು. ಆದರೆ ಪ್ಟೆಂಬರ್ 7 ರಂದು ಚಂದ್ರಯಾನ 2 ವಿಕ್ರಮ್ ಲ್ಯಾಂಡರ್‌ನೊಂದಿಗಿನ ಸಂವಹನವನ್ನು ಇಸ್ರೋ ಕಳೆದುಕೊಂಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT