ಸಂಗ್ರಹ ಚಿತ್ರ 
ವಿಜ್ಞಾನ-ತಂತ್ರಜ್ಞಾನ

'ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದ್ದು, ಬಳಕೆದಾರರು ಭಯಪಡುವ ಅಗತ್ಯವಿಲ್ಲ'

ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದ್ದು, ಬಳಕೆದಾರರು ಭಯಪಡುವ ಅಗತ್ಯವಿಲ್ಲ. ಅವರ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಆ್ಯಪ್ ತಯಾರಿಕಾ ತಂಡ ಹೇಳಿದೆ.

ನವದೆಹಲಿ: ಆರೋಗ್ಯ ಸೇತು ಆ್ಯಪ್ ಸಂಪೂರ್ಣ ಸುರಕ್ಷಿತವಾಗಿದ್ದು, ಬಳಕೆದಾರರು ಭಯಪಡುವ ಅಗತ್ಯವಿಲ್ಲ. ಅವರ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಆ್ಯಪ್ ತಯಾರಿಕಾ ತಂಡ ಹೇಳಿದೆ.

ಎಥಿಕಲ್ ಹ್ಯಾಕರ್ ಖಾತೆದಾರನೋರ್ವ ಆರೋಗ್ಯ ಸೇತು ಆ್ಯಪ್ ಹ್ಯಾಕ್ ಆಗಿದ್ದು, ಖಾಸಗಿಯಾಗಿ ಸಂಪರ್ಕಿಸಿದರೆ ಮಾಹಿತಿ ನೀಡುತ್ತೇನೆ ಎಂದು ಟ್ವೀಟ್ ಮಾಡಿದ್ದ. ಈ ಟ್ವೀಟ್ ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸೇತು ಆ್ಯಪ್ ತಂಡ ಆ್ಯಪ್ ಸಂಪೂರ್ಣ  ಸುರಕ್ಷಿತವಾಗಿದ್ದು, ಬಳಕೆದಾರರು ಆತಂಕ ಪಡುವ ಅಗತ್ಯವಿಲ್ಲ. ಬಳಕೆದಾರರ ಯಾವುದೇ ದತ್ತಾಂಶ ಸೋರಿಕೆಯಾಗಿಲ್ಲ ಎಂದು ಹೇಳಿದೆ.

ಆ್ಯಪ್ ಬಳಕೆದಾರರ ಲೊಕೇಷನ್ ಅನ್ನು ಅತ್ಯಂತ ಸುರಕ್ಷಿತ ಸರ್ವರ್ ನಲ್ಲಿ ಶೇಕರಿಸುತ್ತದೆ. ಹೀಗೆ ಶೇಖರಣೆಯಾದ ದತ್ತಾಂಶಗಳು ಎಂಕ್ರಿಪ್ಟೆಡ್ ಮತ್ತು ಅನಾಮಧೇಯ ರೀತಿಯಲ್ಲಿರುತ್ತದೆ. ಆ್ಯಪ್ ನಲ್ಲಿ ಕೊರೋನಾ ವೈರಸ್ ರೋಗಿಗಳನ್ನು ನಿಗಾದಲ್ಲಿ ಇರಿಸುತ್ತದೆ. ರೋಗಿಗಳ ಲೋಕೇಷನ್  ಟ್ರಾಕ್ ಮಾಡುವುದರಿಂದ ಅವರ ಸುತ್ತಮತ್ತಲಿನ ಜನರನ್ನು ಎಚ್ಚರಿಸುತ್ತದೆ. ಈ ಎಲ್ಲಾ ಮಾಹಿತಿ ಬಳಕೆದಾರರಿಗೆ ತಿಳಿದಿದ್ದು. ಇದನ್ನು ಹೊರತು ಪಡಿಸಿ ಬಳಕೆದಾರರ ವೈಯುಕ್ತಿಕ ಮಾಹಿತಿಯನ್ನು ಹಂಚಿಕೊಳ್ಳುವುದಿಲ್ಲ ಎಂದು ಹೇಳಿದೆ.

ಅಂತೆಯೇ ಆ್ಯಪ್ ಕಾರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ನಾವು ನಮ್ಮ ಸಿಸ್ಟಂ ಅನ್ನು ಸದಾ ಅಪ್ ಗ್ರೇಡ್ ಮಾಡುತ್ತಿದ್ದು, ಆಗ್ಗಿಂದಾಗ್ಗೆ ಪರೀಕ್ಷೆಗೊಳಪಡಿಸುತ್ತಿರುತ್ತೇವೆ ಎಂದು ಹೇಳಿದೆ.

ಆರೋಗ್ಯ ಸೆತು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯವು ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್‌ ಆಗಿದ್ದು, ನಾಗರಿಕರಿಗೆ ಕೋವಿಡ್ -19 ಸೋಂಕಿನ ಅಪಾಯವನ್ನು ಗುರುತಿಸಲು ಸಹಾಯ ಮಾಡುತ್ತದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

ಹಿರಿಯೂರು ಬಳಿ ಸಮರ್ಥ್ ಶಾಮನೂರು ಕಾರು ಅಪಘಾತ: ಕಾಂಗ್ರೆಸ್ ಶಾಸಕ ಅಪಾಯದಿಂದ ಪಾರು!

20 TMC ನಾಯಕರ ಅನರ್ಹತೆ ಪ್ರಕರಣ: ಅಭಿಷೇಕ್‌ ಬ್ಯಾನರ್ಜಿ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್‌ ಅಸ್ತು; ಬಂಡಾಯ ಸಂಸದರಿಗೆ Notice ಜಾರಿ..!

ಶ್ರೀಶೈಲ: ಹೋಟೆಲ್‌ನಲ್ಲಿ ಒಂದೇ ಕುಟುಂಬದ ಐವರು ಆತ್ಮಹತ್ಯೆ; ಕಾರಣ ನಿಗೂಢ

"ಕೇಸರಿ ಧರಿಸುವ ಯೋಗ ಗುರು ಸಭ್ಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾರೆ": ಬಾಬಾ ರಾಮ್‌ದೇವ್ ವಿರುದ್ಧ ಕಂಗನಾ ಮತ್ತೆ ಕಿಡಿ